ಆನೆಗಳಿಗೆ ದಾರಿ ಮಾಡಿಕೊಟ್ಟ ಹುಲಿ 
ದೇಶ

Viral Video: ಮಾರ್ಗಮಧ್ಯೆ ಬಂದ ಆನೆಗಳಿಗೆ ದಾರಿ ಮಾಡಿಕೊಟ್ಟ ಹುಲಿ, ವನ್ಯಜೀವಿಗಳ ಅದ್ಭುತ ಹೊಂದಾಣಿಕೆಯ ವಿಡಿಯೋ ವೈರಲ್

ದಾರಿಯಲ್ಲಿ ಹೋಗುತ್ತಿದ್ದಾಗ ದಿಢೀರನೆ ಬಂದ ಆನೆಗಳ ಹಿಂಡಿಗೆ ಹುಲಿಯೊಂದು ದಾರಿ ಮಾಡಿಕೊಟ್ಟಿರುವ ಘಟನೆ ನಡೆದಿದ್ದು, ಪ್ರಾಣಿಪ್ರಿಯರೊಬ್ಬರು ಈ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ.

ಬೆಂಗಳೂರು: ದಾರಿಯಲ್ಲಿ ಹೋಗುತ್ತಿದ್ದಾಗ ದಿಢೀರನೆ ಬಂದ ಆನೆಗಳ ಹಿಂಡಿಗೆ ಹುಲಿಯೊಂದು ದಾರಿ ಮಾಡಿಕೊಟ್ಟಿರುವ ಘಟನೆ ನಡೆದಿದ್ದು, ಪ್ರಾಣಿಪ್ರಿಯರೊಬ್ಬರು ಈ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ.

ಸಾಮಾನ್ಯವಾಗಿ ಹುಲಿಗಳು ಬೇಟೆಯಾಡಲು ಹಿಂದೆ ಮುಂದೆ ನೋಡಲ್ಲ ಎನ್ನಲಾಗುತ್ತದೆ. ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ ಹುಲಿಯೊಂದು ಆನೆಗಳ ಹಿಂಡಿಗೆ ಏನೂ ಮಾಡದೆ ಸುಮ್ಮನೆ ಕುಳಿತು ದಾರಿ ಮಾಡಿಕೊಟ್ಟಿದೆ. ಈ ಘಟನೆ ಎಲ್ಲಿ ನಡೆಯಿತು ಎಂಬುದರ ಕುರಿತು ಮಾಹಿತಿ ಇಲ್ಲ.. ಆದರೆ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. 

ಭಾರತೀಯ ಅರಣ್ಯ ಸೇವೆಯ (ಐಎಫ್‌ಎಸ್) ಅಧಿಕಾರಿ ಸುಸಂತ ನಂದಾ ಅವರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ವಿಜೇತ ಸಿಂಹಾ ಎಂಬುವವರು ಸೆರೆ ಹಿಡಿದಿರುವ ಈ ವಿಡಿಯೋಗೆ ಸಾವಿರಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವೈರಲ್ ವಿಡಿಯೋದಲ್ಲಿ ರಾಜಗಾಂಭೀರ್ಯದಿಂದ ಹೋಗುತ್ತಿದ್ದ ಹುಲಿ, ಆನೆಗಳ ಹಿಂಡು ಬರುತ್ತಿದೆ ಅನ್ನೋದನ್ನು ಗಮನಿಸುತ್ತಿದ್ದಂತೆ ಅಲ್ಲೇ ಅವಿತು ಕುಳಿತು ಅವುಗಳಿಗೆ ದಾರಿ ಮಾಡಿಕೊಡುತ್ತದೆ. ಈ ವಿಡಿಯೋ ಬಗ್ಗೆ ‘ಪ್ರಾಣಿಗಳು ಹೇಗೆ ಸಂವಹನ ನಡೆಸುತ್ತವೆ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳುತ್ತವೆ. ಹುಲಿಯು ಆನೆಗಳು ಬರುತ್ತಿರುವ ವಾಸನೆ ತಿಳಿದು ಅವುಗಳ ಹಿಂಡಿಗೆ ದಾರಿ ಮಾಡಿಕೊಡುತ್ತದೆ’ ಎಂದು ಸುಸಂತ ನಂದಾ ಬರೆದುಕೊಂಡಿದ್ದಾರೆ.

ಅನೇಕರು ಈ ವಿಡಿಯೋಗೆ ವಿವಿಧ ಕಾಮೆಂಟ್ ಹಾಕಿದ್ದು, ‘ಹುಲಿಯು ಪ್ರಬಲವಾದ ಪ್ರಾಣಿಗಳಿಗೆ ಸರಿಯಾದ ಗೌರವವನ್ನು ನೀಡುತ್ತದೆ’ ಎಂದು ಒಬ್ಬರು ಹೇಳಿದ್ರೆ ಇನ್ನೊಬ್ಬರು, ‘ಎಂತಹ ಸುಂದರ ದೃಶ್ಯ. ಹುಲಿ ಆನೆಗಳ ಹಿಂಡಿಗೆ ಹೇಗೆ ದಾರಿ ಮಾಡಿಕೊಟ್ಟಿರೋದು ಇಷ್ಟವಾಯಿತು’ ಎಂದು ಹೇಳಿದ್ದಾರೆ.

ಹುಲಿಗಳು ಸಾಮಾನ್ಯವಾಗಿ ಜಿಂಕೆ, ಮಂಗಗಳು ಮತ್ತು ಹಂದಿಗಳಂತಹ ದೊಡ್ಡ ಅಥವಾ ಮಧ್ಯಮ ಗಾತ್ರದ ಸಸ್ತನಿಗಳನ್ನು ಬೇಟೆಯಾಡುತ್ತವೆ. ಬೃಹತ್ ಗಾತ್ರದ ಆನೆಗಳನ್ನು ಹುಲಿಗಳು ಬೇಟೆಯಾಡುವ ನಿದರ್ಶನಗಳು ತುಂಬಾನೇ ಅಪರೂಪ. ‘ಹೊಟ್ಟೆ ತುಂಬಿದ್ದಾಗ ಹುಲಿಗಳು ದಾಳಿ ಮಾಡೋದಿಲ್ಲ, ತಮಗೆ ಅಭದ್ರತೆ ಕಾಡಿದಾಗ ಮತ್ತು ಹಸಿವು ಇದ್ದಾಗ ಮಾತ್ರ ಬೇಟೆಯಾಡುತ್ತವೆ’ ಅಂತಾ ಕೆಪಿ ಪೂರ್ಣಚಂದ್ರ ತೇಜಸ್ವಿ ಅವರ ಬರಹದಲ್ಲೂ ಉಲ್ಲೇಖ ಮಾಡಿರುವುದನ್ನು ಕಾಣಬಹುದು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT