ಸಂಗ್ರಹ ಚಿತ್ರ 
ದೇಶ

ನಮಸ್ಕಾರ ಭಾರತ! ಶಾಂತಿ, ಶಾಂತಿ: SCO ಸಭೆಗಾಗಿ ವಾಘಾ ಗಡಿ ಮೂಲಕ ಪಾಕಿಸ್ತಾನಿ ಪತ್ರಕರ್ತರ ನಿಯೋಗ ಭಾರತಕ್ಕೆ ಆಗಮನ!

ಗೋವಾದಲ್ಲಿ (ಮೇ 4-5) ನಡೆಯಲಿರುವ ಶಾಂಘೈ ಸಹಕಾರ ಸಂಘಟನೆ(ಎಸ್‌ಸಿಒ)ಯ ವಿದೇಶಾಂಗ ಸಚಿವರ ಸಭೆಗಾಗಿ ಪಾಕಿಸ್ತಾನಿ ಪತ್ರಕರ್ತರ ನಿಯೋಗವು ಪಂಜಾಬ್‌ನ ವಾಘಾ ಗಡಿಯನ್ನು ದಾಟಿ ಭಾರತವನ್ನು ಪ್ರವೇಶಿಸಿದೆ.

ನವದೆಹಲಿ: ಗೋವಾದಲ್ಲಿ (ಮೇ 4-5) ನಡೆಯಲಿರುವ ಶಾಂಘೈ ಸಹಕಾರ ಸಂಘಟನೆ(ಎಸ್‌ಸಿಒ)ಯ ವಿದೇಶಾಂಗ ಸಚಿವರ ಸಭೆಗಾಗಿ ಪಾಕಿಸ್ತಾನಿ ಪತ್ರಕರ್ತರ ನಿಯೋಗವು ಪಂಜಾಬ್‌ನ ವಾಘಾ ಗಡಿಯನ್ನು ದಾಟಿ ಭಾರತವನ್ನು ಪ್ರವೇಶಿಸಿದೆ. ಈ ಸಭೆಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರಾದಾರಿ ಖುದ್ದು ಆಗಮಿಸುತ್ತಿದ್ದಾರೆ.

ಪತ್ರಕರ್ತರಲ್ಲಿ ನಯಾದೌರ್ ಮೀಡಿಯಾದ ಕಾರ್ಯನಿರ್ವಾಹಕ ಸಂಪಾದಕ ಮುರ್ತಾಜಾ ಸೊಲಂಗಿ, ಇಂಡಿಪೆಂಡೆಂಟ್ ಉರ್ದುವಿನ ಮೋನಾ ಖಾನ್, ಖುರತ್ ಉಲ್ ಐನ್ ಶಿರಾಜಿ, ಜಿಯೋ ನ್ಯೂಸ್‌ನ ಅಜಾಜ್ ಸೈಯದ್, ಕಮ್ರಾನ್ ಯೂಸುಫ್ ಮತ್ತು ಮುನಿಜೆ ಜಹಾಂಗೀರ್ ಸೇರಿದ್ದಾರೆ.

'ಕಡಿಮೆ ಅಂತರಗಳು, ದೀರ್ಘ ಸಂಘರ್ಷಗಳು, ದೀರ್ಘಾವಧಿಯ ಉದ್ವಿಗ್ನತೆಗಳು ಮತ್ತು ಅನೇಕ ತಪ್ಪಿದ ಅವಕಾಶಗಳು ಭಾರತ ಮತ್ತು ಪಾಕಿಸ್ತಾನದ ವ್ಯಥೆಯಾಗಿದೆ. ಬಿಲಾವಲ್ ಭುಟ್ಟೋ ಅವರು ಉದ್ವಿಗ್ನತೆ ಮತ್ತು ರಾಜಕೀಯ ತಾಪಮಾನವನ್ನು ಕಡಿಮೆ ಮಾಡುತ್ತಾರೆ ಎಂದು ಭಾವಿಸುತ್ತೇವೆ ಎಂದು ಮುನಿಜೆ ಜಹಾಂಗೀರ್ ಭಾರತವನ್ನು ದಾಟಿದ ನಂತರ ಟ್ವೀಟ್ ಮಾಡಿದ್ದಾರೆ. ಬಿಲಾವಲ್ ಭುಟ್ಟೋ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ದ್ವಿಪಕ್ಷೀಯ ಮಾತುಕತೆ ನಡೆಸುತ್ತಾರೆ ಎಂಬ ಭರವಸೆ ಇದೆ ಎಂದು ಅವರು ಹೇಳಿದರು.

'ನಮಸ್ಕಾರ ಭಾರತ! ಶಾಂತಿ. ಶಾಂತಿ,' ಮುರ್ತಾಜಾ ಸೊಲಂಗಿ ಅವರು ಭಾರತವನ್ನು ದಾಟಿದ ನಂತರ ಟ್ವೀಟ್ ಮಾಡಿದ್ದಾರೆ. ಆದರೆ ದೆಹಲಿಯನ್ನು ತಲುಪಿದ ಕುರ್ರತ್ ಉಲ್ ಐನ್ ಶಿರಾಜಿ ಅವರು ಮಳೆಯು ಲಾಹೋರ್ ಅನ್ನು ನೆನಪಿಸುತ್ತದೆ ಎಂದು ಹೇಳಿದರು. ಗೋವಾದಲ್ಲಿ ನಡೆಯಲಿರುವ SCO ಸಭೆಯನ್ನು ವರದಿ ಮಾಡಲು ಭಾರತವು ಈ ಪಾಕಿಸ್ತಾನಿ ಪತ್ರಕರ್ತರಿಗೆ ವೀಸಾಗಳನ್ನು ನೀಡಿದೆ.

ಗೋವಾದಲ್ಲಿ ನಡೆಯಲಿರುವ ಸಭೆಯಲ್ಲಿ ಬಿಲಾವಲ್ ಭುಟ್ಟೋ ಅವರ ವೈಯಕ್ತಿಕ ಉಪಸ್ಥಿತಿ ಮತ್ತು ಅವರ ಆಗಮನವು ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧದಲ್ಲಿ ಬದಲಾವಣೆ ಬರಬಹುದೆ ಎಂಬ ಬಗ್ಗೆ ಎಲ್ಲರ ಕಣ್ಣುಗಳು ನೆಟ್ಟಿವೆ.

ಏತನ್ಮಧ್ಯೆ, ಎಸ್‌ಸಿಒ ಸಭೆಗೂ ಮುನ್ನ ಜೈಶಂಕರ್ ಬುಧವಾರ ಗೋವಾ ತಲುಪಿದ್ದಾರೆ. ಅವರು ಗುರುವಾರ ಚೀನಾದ ವಿದೇಶಾಂಗ ಸಚಿವ ಕಿನ್ ಗ್ಯಾಂಗ್ ಮತ್ತು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ. ಜೈಶಂಕರ್ ಮತ್ತು ಭುಟ್ಟೊ ನಡುವೆ ದ್ವಿಪಕ್ಷೀಯ ಸಭೆ ನಡೆಯಲಿದೆಯೇ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಂಗಾಳದಲ್ಲಿ ಬದಲಾವಣೆಯ ಪರ್ವ: ಗಡಿ ಸುರಕ್ಷತೆಗೆ ಆದ್ಯತೆ: BSFಗೆ ಭೂಮಿ ಹಸ್ತಾಂತರಿಸಲು ಸುವೇಂದು ಸರ್ಕಾರ ಅಸ್ತು, ಮೊದಲ ಸಂಪುಟ ಸಭೆಯಲ್ಲೇ ಮಹತ್ವದ ನಿರ್ಧಾರ..!

ನೇಪಾಳದಿಂದ ಭಾರತಕ್ಕೆ ಅಪಮಾನ?; ಹುದ್ದೆ ಅಂತರದ ಕಾರಣ ನೀಡಿ ವಿದೇಶಾಂಗ ಕಾರ್ಯದರ್ಶಿ ಭೇಟಿಗೆ ನಿರಾಕರಿಸಿದ ಪ್ರಧಾನಿ ಬಾಲೇನ್ ಶಾ: ವರದಿ

'Why English?': ಇರಲಾರದೇ ಇರುವೆ ಬಿಟ್ಟು ಕೊಂಡ ಪಾಕಿಸ್ತಾನ ಜನರಲ್, ಹಬ್ಬ ಮಾಡಿದ ಟ್ರೋಲರ್ಸ್! Video

'ಇನ್ನೊಂದ್ ವರ್ಷ ಖರೀದಿ ಮಾಡ್ಬೇಡಿ..'.: ಪ್ರಧಾನಿ ಮೋದಿ ಕರೆ ಬೆನ್ನಲ್ಲೇ ಪಾತಾಳಕ್ಕೆ ಕುಸಿದ ಚಿನ್ನಾಭರಣ ಷೇರು

ಎರಡು ವರ್ಷದವೆರೆಗಿನ 'ಸಮ್ಮತಿಯ ಲೈಂಗಿಕ ಸಂಬಂಧ' ಅತ್ಯಾಚಾರವೇ? ಕೋರ್ಟ್ ಹೇಳಿದ್ದೇನು!

SCROLL FOR NEXT