(ಸಾಂಕೇತಿಕ ಚಿತ್ರ) 
ದೇಶ

ಚತ್ತೀಸ್ ಗಢ: ಮದುವೆ ಮುರಿದ ಪ್ರೀ ವೆಡ್ಡಿಂಗ್ ಶೂಟ್; ಅಲ್ಲಿ ಆಗಿದ್ದೇನು ಅಂದರೆ...

ವಿವಾಹವಾಗಬೇಕಿರುವ ನವಜೋಡಿಗಳಿಗೆ ಪ್ರೀ ವೆಡ್ಡಿಂಗ್ ಶೂಟ್ ಎಂಬುದು ಅತ್ಯಂತ ನೆನಪಿನಲ್ಲಿ ಉಳಿಯುವ ಸಂಗತಿ. ಆದರೆ ಇದೇ ವಿವಾಹಕ್ಕೆ ಮುಳುವಾದರೆ? ಇಂಥದ್ದೊಂದು ವಿಲಕ್ಷಣ ಘಟನೆ ಚತ್ತೀಸ್ ಗಢದಲ್ಲಿ ನಡೆದಿದೆ. 

ರಾಯ್ ಪುರ: ವಿವಾಹವಾಗಬೇಕಿರುವ ನವಜೋಡಿಗಳಿಗೆ ಪ್ರೀ ವೆಡ್ಡಿಂಗ್ ಶೂಟ್ ಎಂಬುದು ಅತ್ಯಂತ ನೆನಪಿನಲ್ಲಿ ಉಳಿಯುವ ಸಂಗತಿ. ಆದರೆ ಇದೇ ವಿವಾಹಕ್ಕೆ ಮುಳುವಾದರೆ? ಇಂಥದ್ದೊಂದು ವಿಲಕ್ಷಣ ಘಟನೆ ಚತ್ತೀಸ್ ಗಢದಲ್ಲಿ ನಡೆದಿದೆ. 

ಪ್ರೀ ವೆಡ್ಡಿಂಗ್ ಶೂಟ್ ಬಳಿಕ ಮತ್ತಷ್ಟು ಗಾಢವಾಗಬೇಕಿದ್ದ ಜೋಡಿಯ ಸಂಬಂಧ ಅಲ್ಲೇ ಮುರಿದುಬಿದ್ದಿದೆ. 

ವಿವಾಹಪೂರ್ವ ಶೂಟಿಂಗ್ ಗೂ ಮುನ್ನವೇ ಜೋಡಿಗಳಿಗೆ ತಾವು ಒಟ್ಟಿಗೆ ಇರುವುದು ಸಾಧ್ಯವಿಲ್ಲ ಎಂದೆನಿಸಿತ್ತು. ಆದರೆ ಸಂಬಂಧಿಕರು ಹರಸಾಹಸಪಟ್ಟು ಕೊನೆಪಕ್ಷ ಪ್ರೀ ವೆಡ್ಡಿಂಗ್ ಶೂಟ್ ಬಳಿಕವಾದರೂ ಇಬ್ಬರೂ ಮನಸ್ಸು ಬದಲಿಸಿಕೊಳ್ಳುತ್ತಾರೇನೋ ಕಾದು ನೋಡೋಣ ಎಂದು ತೇಪೆ ಹಚ್ಚಿದ್ದರು ಎನ್ನುತ್ತಾರೆ ವರನ ಕಡೆಯ ಸಂಬಂಧಿ.

ಪ್ರೀವೆಡ್ಡಿಂಗ್ ಶೂಟ್ ಬಳಿಕ ಅದೇನಾಯ್ತೋ ಗೊತ್ತಿಲ್ಲ ಆದರೆ ವಿವಾಹವಂತೂ ಮುರಿದುಬಿದ್ದಿದೆ. ಯುವತಿ ಪ್ರೀ ವೆಡ್ಡಿಂಗ್ ಶೂಟ್ ನ ಫೋಟೋ, ವೀಡಿಯೋಗಳನ್ನು ಡೀಲೀಟ್ ಮಾಡಿಸುವಂತೆ ರಾಜ್ಯ ಮಹಿಳಾ ಆಯೋಗದ ಮೊರೆ ಹೋಗಿದ್ದಾಳೆ. ಅಷ್ಟೇ ಅಲ್ಲದೇ ವಿವಾಹಕ್ಕಾಗಿ ಮಾಡಿದ್ದ ಖರ್ಚಿನಿಂದ ನಷ್ಟ ಉಂಟಾಗಿದ್ದು, ಪರಿಹಾರ ಕೊಡಿಸುವಂತೆ ಕೇಳಿದ್ದಾಳೆ.

ಆಯೋಗದ ಮಧ್ಯಪ್ರವೇಶದಿಂದಾಗಿ ಸಮಸ್ಯೆ ಸಂಧಾನದ ಮೂಲಕ ಬಗೆಹರಿದಿದ್ದು, ದೂರನ್ನು ಯುವತಿ ವಾಪಸ್ ತೆಗೆದುಕೊಂಡಿದ್ದಾಳೆ. ಮಹಿಳಾ ಆಯೋಗಕ್ಕೆ ಯುವತಿ ದೂರು ನೀಡಿದ್ದರ ಪ್ರಕಾರ, ಬೇಡಿಕೆ ಇಟ್ಟಿದ್ದ ಹಣ ತಲುಪಿದ್ದು, ವರ ಪ್ರೀ ವೆಡ್ಡಿಂಗ್ ಆಲ್ಬಂ ನ್ನು ಡಿಲೀಟ್ ಮಾಡುವುದಾಗಿ ಭರವಸೆ ನೀಡಿದ್ದಾನೆ.
 
ಭವಿಷ್ಯದಲ್ಲಿ ಹುಡುಗಿಯ ಯಾವುದೇ ಚಿತ್ರ ಅಥವಾ ವೀಡಿಯೊವನ್ನು ನೆಟ್ ಅಥವಾ ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಿದರೆ, ಸಂತ್ರಸ್ತೆಯಾಗಿ ಅವಳು ಸೈಬರ್ ಕ್ರೈಮ್ ಸೆಲ್‌ಗೆ ದೂರು ದಾಖಲಿಸಬಹುದು ಎಂದು ಆಯೋಗವು ವರನಿಗೆ ಎಚ್ಚರಿಕೆ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

ಸಂಪುಟ ಸಲಹೆ ಮೇರೆಗೆ KPSC ಅಧ್ಯಕ್ಷ ಸಾಹುಕಾರ್ ರನ್ನು ಮತ್ತೆ ಅಮಾನತು ಮಾಡಿದ ರಾಜ್ಯಪಾಲ ಗೆಹ್ಲೋಟ್!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!

SIR ವೇಳೆ 1.08 ಕೋಟಿಗೂ ಅಧಿಕ ಮತದಾರರು ASDDO ಪಟ್ಟಿಗೆ: ಆಕ್ಷೇಪಣೆ ಸಲ್ಲಿಕೆ ಅವಧಿ ವಿಸ್ತರಿಸಬೇಕು- CECಗೆ ಸಿಎಂ ಶಿವಕುಮಾರ್ ಪತ್ರ!

ಕನಸು ಕೊನೆಗೂ ನನಸು: ಲಿಂಗ ಬದಲಿಸಿಕೊಂಡಿದ್ದ Anaya Bangarಗೆ ಕ್ರಿಕೆಟ್‌ಗೆ ಮರಳಲು ಗ್ರೀನ್ ಸಿಗ್ನಲ್!