ದೇಶ

'ಮೋದಿ ಅಲೆ ಮುಗಿದಿದೆ ಈಗ ನಮ್ಮದೇ ಹವಾ'- ಸಂಜಯ್ ರಾವತ್ 

Nagaraja AB

ಮುಂಬೈ: ಮೋದಿ ಅಲೆ ಮುಗಿದಿದೆ ಎಂಬುದನ್ನು ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ ತೋರಿಸಿದೆ ಎಂದು ಶಿವಸೇನೆ ಉದ್ಧವ್ ಠಾಕ್ರೆ ಬಣದ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,"ಮೋದಿ ಅಲೆ ಮುಗಿದಿದೆ ಮತ್ತು ಈಗ ನಮ್ಮ ಅಲೆ ದೇಶಾದ್ಯಂತ ಬರುತ್ತಿದೆ. ಇಂದು ಸಂಜೆ 4.30ಕ್ಕೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ನಿವಾಸದಲ್ಲಿ ಮಹಾ ವಿಕಾಸ್ ಅಘಾಡಿ  ನಾಯಕರ ಸಭೆ ಕರೆಯಲಾಗಿದೆ ಎಂದು ತಿಳಿಸಿದರು. 

“ಮೋದಿ ಅಲೆ ಮುಗಿದು ಈಗ ದೇಶಾದ್ಯಂತ ನಮ್ಮ ಅಲೆ ಎದ್ದಿದೆ, 2024ರ ಲೋಕಸಭೆ ಚುನಾವಣೆಗೆ  ತಯಾರಿ ಆರಂಭವಾಗಿದ್ದು, ಇಂದು ಶರದ್ ಪವಾರ್ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ. 2024ರ ಚುನಾವಣೆ ಕುರಿತು ಈ ಸಭೆಯಲ್ಲಿ ಚರ್ಚಿಸುತ್ತೇವೆ. ಮತ್ತು ಅದರ ಸಿದ್ಧತೆಯನ್ನು ಪ್ರಾರಂಭಿಸುತ್ತೇವೆ ಎಂದರು. 

ಉದ್ಧವ್ ಠಾಕ್ರೆ, ಕಾಂಗ್ರೆಸ್ ನಾಯಕರಾದ ನಾನಾ ಪಟೋಲೆ ಮತ್ತು ಬಾಲ್ಸಾಹೇಬ್ ಥೋರಟ್, ಎನ್‌ಸಿಪಿ ನಾಯಕ ಅಜಿತ್ ಪವಾರ್ ಮತ್ತು ಇತರ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ರಾವತ್ ಹೇಳಿದರು.

SCROLL FOR NEXT