ಅಧಿಕ ರಕ್ತದೊತ್ತಡ (ಸಾಂಕೇತಿಕ ಚಿತ್ರ) 
ದೇಶ

2025 ರ ವೇಳೆಗೆ 75 ಮಿಲಿಯನ್ ಅಧಿಕ ರಕ್ತದೊತ್ತಡ ರೋಗಿಗಳಿಗೆ ಗುಣಮಟ್ಟದ ಆರೈಕೆಗಾಗಿ "75/25" ಯೋಜನೆ

ದೇಶದ 75 ಮಿಲಿಯನ್ ಅಧಿಕ ರಕ್ತದೊತ್ತಡ, ಮಧುಮೇಹ ಜನಸಂಖ್ಯೆಯನ್ನು 2025 ರ ವೇಳೆಗೆ ಗುಣಮಟ್ಟದ ಆರೈಕೆಯಡಿ ತರುವುದಕ್ಕೆ ಕೇಂದ್ರ ಆರೋಗ್ಯ ಸಚಿವಾಲಯ 75/25 ಯೋಜನೆಯನ್ನು ಜಾರಿಗೆ ತಂದಿದೆ.

ನವದೆಹಲಿ:  ದೇಶದ 75 ಮಿಲಿಯನ್ ಅಧಿಕ ರಕ್ತದೊತ್ತಡ, ಮಧುಮೇಹ ಜನಸಂಖ್ಯೆಯನ್ನು 2025 ರ ವೇಳೆಗೆ ಗುಣಮಟ್ಟದ ಆರೈಕೆಯಡಿ ತರುವುದಕ್ಕೆ ಕೇಂದ್ರ ಆರೋಗ್ಯ ಸಚಿವಾಲಯ 75/25 ಯೋಜನೆಯನ್ನು ಜಾರಿಗೆ ತಂದಿದೆ.

ಸಾಂಕ್ರಾಮಿಕವಲ್ಲದ ರೋಗಗಳ ವಿರುದ್ಧದ ಜಗತ್ತಿನ ಅತಿ ದೊಡ್ಡ ಅಭಿಯಾನ ಇದಾಗಿದ್ದು ವಿಶ್ವ ಅಧಿಕ ರಕ್ತದೊತ್ತಡ  ದಿನದಂದು ಅಭಿಯಾನವನ್ನು ಆರಂಭಿಸಲಾಗಿದೆ.

ಈ ಅಭಿಯಾನದ ಸೇವೆಗಳು ದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ನಡೆಸಲ್ಪಡುತ್ತವೆ. ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, 40,000 ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಗೆ ಶಶಕ್ತ್ ಪೋರ್ಟಲ್ ಮೂಲಕ ಗುರಿಯನ್ನು ಪೂರೈಸಲು ಸಾಂಕ್ರಾಮಿಕವಲ್ಲದ ರೋಗಗಳಿಗೆ (NCD) ಪ್ರಮಾಣಿತ ಚಿಕಿತ್ಸೆ ನೀಡಲು ತರಬೇತಿ ನೀಡಲಾಗುತ್ತದೆ.

"2025 ರ ವೇಳೆಗೆ ಪ್ರಾಥಮಿಕ ಆರೋಗ್ಯ ಸೇವೆಯಲ್ಲಿ ರಕ್ತದೊತ್ತಡ ಹೊಂದಿರುವ 75 ಮಿಲಿಯನ್ ಅಧಿಕ ಜನರನ್ನು ತಲುಪುವ ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಗುರಿಯು ಪ್ರಾಥಮಿಕ ಆರೋಗ್ಯ ರಕ್ಷಣೆಗಾಗಿ ವಿಶ್ವದ ಎನ್‌ಸಿಡಿಗಳ ಅತಿದೊಡ್ಡ ಅಭಿಯಾನ ಆಗಿದೆ" ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ವರ್ಚ್ಯುಯಲ್ ಕಾರ್ಯಕ್ರಮದಲ್ಲಿ ಹೇಳಿದರು.

ದೇಶದಲ್ಲಿ 200 ಮಿಲಿಯನ್ ಅಧಿಕ ರಕ್ತದೊತ್ತಡದ ಜನರಿದ್ದಾರೆ ಮತ್ತು ಪ್ರತಿ ಹತ್ತು ವಯಸ್ಕರಲ್ಲಿ ಒಬ್ಬರಿಗೆ ಮಧುಮೇಹವಿದೆ. ಭಾರತದಲ್ಲಿ 63 ಪ್ರತಿಶತದಷ್ಟು ಸಾವುಗಳಿಗೆ ಎನ್‌ಸಿಡಿ ಕಾರಣವಾಗಿದ್ದು, ಅದರಲ್ಲಿ 55 ಪ್ರತಿಶತ ಅಕಾಲಿಕವಾಗಿದೆ. ಈ ಪರಿಸ್ಥಿತಿಗಳು ಹೃದಯಾಘಾತ, ಪಾರ್ಶ್ವವಾಯು, ಮೂತ್ರಪಿಂಡ ವೈಫಲ್ಯ ಮತ್ತು ಕುರುಡುತನಕ್ಕೆ ಕಾರಣವಾಗುತ್ತವೆ.

ಅಧಿಕ ರಕ್ತದೊತ್ತಡ ನಿಯಂತ್ರಣವನ್ನು ಹೆಚ್ಚಿಸುವುದು, ಮಧುಮೇಹವನ್ನು ನಿಯಂತ್ರಣದಲ್ಲಿಡಲು ಮತ್ತು ಅಂಗ ಹಾನಿಯನ್ನು ಕಡಿಮೆ ಮಾಡಲು ಪ್ರೋಟೋಕಾಲ್‌ಗಳೊಂದಿಗೆ PHC ಗಳನ್ನು ಸಜ್ಜುಗೊಳಿಸುವುದು ಅಭಿಯಾನದ ಉದ್ದೇಶವಾಗಿದೆ. NCD ಪೋರ್ಟಲ್ ಪ್ರಕಾರ, ಮಾರ್ಚ್ 2023 ರಲ್ಲಿ 26,42,038 ಮಧುಮೇಹ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು.  714 ಕ್ಲಿನಿಕ್‌ಗಳು ಮತ್ತು 6068 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 62,30,155 ಮಂದಿ ಅಧಿಕ ರಕ್ತದೊತ್ತಡಕ್ಕಾಗಿ ಚಿಕಿತ್ಸೆಯಲ್ಲಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT