ಮಾರ್ಚ್ 29 ರಂದು ಸಿಯಾಯಾ ಅಕಾ ಜ್ವಾಲಾಗೆ ಜನಿಸಿದ ನಮೀಬಿಯಾದ ಚಿರತೆ ಮರಿಗಳು 
ದೇಶ

ಕುನೋ ರಾಷ್ಟ್ರೀಯ ಉದ್ಯಾನ: ಚಿರತೆ ಮರಿ ಸಾವು, ಮೂರು ತಿಂಗಳಲ್ಲಿ 3 ವಯಸ್ಕ ಚಿರತೆಗಳು ಮರಣ

ಕುನೋ ರಾಷ್ಟ್ರೀಯ ಉದ್ಯಾನವನದಿಂದ ಮತ್ತೊಂದು ದುರಂತ ಸುದ್ದಿ ಹೊರಬಿದ್ದಿದೆ. ನಮೀಬಿಯಾದಿಂದ ತರಲಾದ ಚಿರತೆಯ ಮರಿಯೊಂದು ಸಾವನ್ನಪ್ಪಿದೆ ಎಂದು ವರದಿಯಾಗಿದೆ. ಸಾವಿನ ಪ್ರಕರಣವನ್ನು ಖಚಿತಪಡಿಸಿಕೊಳ್ಳಲು ಅರಣ್ಯ ಇಲಾಖೆ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.

ಮಧ್ಯಪ್ರದೇಶ: ಕುನೋ ರಾಷ್ಟ್ರೀಯ ಉದ್ಯಾನವನದಿಂದ ಮತ್ತೊಂದು ದುರಂತ ಸುದ್ದಿ ಹೊರಬಿದ್ದಿದೆ. ನಮೀಬಿಯಾದಿಂದ ತರಲಾದ ಚಿರತೆಯ ಮರಿಯೊಂದು ಸಾವನ್ನಪ್ಪಿದೆ ಎಂದು ವರದಿಯಾಗಿದೆ. ಸಾವಿನ ಪ್ರಕರಣವನ್ನು ಖಚಿತಪಡಿಸಿಕೊಳ್ಳಲು ಅರಣ್ಯ ಇಲಾಖೆ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.

ಉದ್ಯಾನವನದಲ್ಲಿದ್ದ ಹೆಣ್ಣು ಚಿರತೆ ಮರಿಯೊಂದು ಸಾವನ್ನಪ್ಪಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಚಿರತೆ ಸ್ಥಳಾಂತರ ಕಾರ್ಯಕ್ರಮ ಸರಣಿ ಸಾವಿನಿಂದ ಬೆಚ್ಚಿ ಬೀಳಿಸಿದೆ. ಮಾರ್ಚ್ 29 ರಂದು ನಮೀಬಿಯಾದ ಚಿರತೆ ಸಿಯಾಯಾ ಅಕಾ ಜ್ವಾಲಾ ಜನ್ಮ ನೀಡಿದ ನಂತರ ತಾಯಿ ಮತ್ತು ಇತರ ಮೂರು ಮರಿಗಳೊಂದಿಗೆ ಮೃತಪಟ್ಟ ಚಿರತೆ ಮರಿಯನ್ನು ಇಡಲಾಗಿತ್ತು. 

ಅಧಿಕಾರಿಗಳ ಪ್ರಕಾರ ಇದೇ ಮೊದಲ ಬಾರಿಗೆ ಚಿರತೆ ಮರಿ ಸಾವನ್ನಪ್ಪಿದೆ. ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಈಗ 17 ವಯಸ್ಕ ಮತ್ತು ಅರೆ ವಯಸ್ಕ ನಮೀಬಿಯನ್ ಮತ್ತು ದಕ್ಷಿಣ ಆಫ್ರಿಕಾದ ಚೀತಾಗಳು ಮತ್ತು ನಮೀಬಿಯಾದ ತಾಯಿಗೆ ಜನಿಸಿದ ಮೂರು ಮರಿಗಳು ಉಳಿದಿವೆ. ರಾಷ್ಟ್ರೀಯ ಉದ್ಯಾನವನದಲ್ಲಿ ಈಗಾಗಲೇ ಮೂರು ಚಿರತೆಗಳು ಸಾವನ್ನಪ್ಪಿದ್ದು, ಕುನೊ ಆಡಳಿತ ಮತ್ತು ಆಡಳಿತದ ಮೇಲೆ ಟೀಕೆಗಳು ವ್ಯಕ್ತವಾಗುತ್ತಿವೆ. 

ಈ ವರ್ಷ ಮಾರ್ಚ್‌ನಲ್ಲಿ ನಮೀಬಿಯಾದ ಹೆಣ್ಣು ಚಿರತೆ ಸಾಶಾ ಮೂತ್ರಪಿಂಡದ ಕಾಯಿಲೆಯಿಂದ ಸಾವನ್ನಪ್ಪಿದ್ದಾಗ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಯ ಸಾವಿನ ಸರಣಿ ಪ್ರಾರಂಭವಾಯಿತು. ನಂತರ, ಏಪ್ರಿಲ್ 23 ರಂದು, ಉದಯ್ ಎಂಬ ಹೆಸರಿನ ದಕ್ಷಿಣ ಆಫ್ರಿಕಾದ ಗಂಡು ಚಿರತೆ ಹೃದಯದ ಶ್ವಾಸಕೋಶದ ವೈಫಲ್ಯದಿಂದ ಸಾವನ್ನಪ್ಪಿತು. ಆದಾದ 16 ದಿನಗಳ ನಂತರ ದಕ್ಷಿಣ ಆಫ್ರಿಕಾದ ಹೆಣ್ಣು ಚಿರತೆ ದಕ್ಷಾ ಸಾವನ್ನಪ್ಪಿರುವುದಾಗಿ ವರದಿಯಾಗಿತ್ತು. 

ಪ್ರಧಾನಿ ನರೇಂದ್ರ ಮೋದಿ  ಸೆಪ್ಟೆಂಬರ್ 17, 2022 ರಂದು ತಮ್ಮ ಜನ್ಮದಿನದ ಸಂದರ್ಭದಲ್ಲಿ ನಮೀಬಿಯಾದಿಂದ ತಂದ ಎಂಟು ಚಿರತೆಗಳನ್ನು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡುಗಡೆ ಮಾಡಿದರು. ನಂತರ, ದಕ್ಷಿಣ ಆಫ್ರಿಕಾದಿಂದ ಇನ್ನೂ 12 ಚಿರತೆಗಳನ್ನು ತರಲಾಯಿತು ಮತ್ತು ಫೆಬ್ರವರಿ 18 ರಂದು ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ  ಪುನರ್ವಸತಿ ಮಾಡಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

SCROLL FOR NEXT