ಬೈಕ್ ನಲ್ಲಿ ಮೃತದೇಹ ಸಾಗಾಟ 
ದೇಶ

ಶವ ಸಾಗಿಸಲು ವಾಹನ ಸಿಗದೆ 15 ಕಿ.ಮೀ ಬೈಕ್‌ನಲ್ಲಿ ಅಜ್ಜನ ಮೃತದೇಹ ಸಾಗಿಸಿದ ಮೊಮ್ಮಗ, ವಿಡಿಯೋ ವೈರಲ್

ಮಧ್ಯಪ್ರದೇಶದ ಸರ್ಕಾರಗಳು ರಾಜ್ಯದಲ್ಲಿ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಮಾತನಾಡುತ್ತವೆ. ಆದರೆ ಇಂತಹ ಕೆಲವು ಘಟನೆಗಳು ಆರೋಗ್ಯ ವ್ಯವಸ್ಥೆಯ ಸ್ಥಿತಿಗತಿಗಳನ್ನು ಬಹಿರಂಗಪಡಿಸುತ್ತಿವೆ.

ಶಹದೋಲ್: ಮಧ್ಯಪ್ರದೇಶದ ಸರ್ಕಾರಗಳು ರಾಜ್ಯದಲ್ಲಿ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಮಾತನಾಡುತ್ತವೆ. ಆದರೆ ಇಂತಹ ಕೆಲವು ಘಟನೆಗಳು ಆರೋಗ್ಯ ವ್ಯವಸ್ಥೆಯ ಸ್ಥಿತಿಗತಿಗಳನ್ನು ಬಹಿರಂಗಪಡಿಸುತ್ತವೆ. ರಾಜ್ಯದ ಶಾಹದೋಲ್ ಜಿಲ್ಲೆಯಲ್ಲಿ ನಾಚಿಕೆಗೇಡಿನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಆರೋಗ್ಯ ಇಲಾಖೆಯ ನಿರ್ಲಕ್ಷ್ಯದ ವಿಡಿಯೋ ವೈರಲ್ ಆಗಿದೆ.

ಶಾಹದೋಲ್ ಜಿಲ್ಲಾ ಆಸ್ಪತ್ರೆಯಲ್ಲಿ ವೃದ್ಧರೊಬ್ಬರು ಸಾವನ್ನಪ್ಪಿದ್ದರು. ಇಂತಹ ಪರಿಸ್ಥಿತಿಯಲ್ಲಿ ಮೃತದೇಹವನ್ನು ಮನೆಗೆ ಕೊಂಡೊಯ್ಯಲು ಕುಟುಂಬ ಸದಸ್ಯರಿಗೆ ಶವ ಸಾಗಾಟ ವಾಹನವನ್ನು ನೀಡುತ್ತಿಲ್ಲ. ಬಹಳ ಹೊತ್ತು ಕಾದರೂ ಮೃತದೇಹ ವಾಹನ ಬಾರದೇ ಇದ್ದಾಗ ಮೃತನ ಮೊಮ್ಮಗ ಬೈಕ್‌ನಲ್ಲಿ ಅಜ್ಜನ ಶವವನ್ನು ಮನೆಗೆ ಸಾಗಿಸಿದ್ದಾನೆ. ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಜಿಲ್ಲಾಡಳಿತದಲ್ಲಿ ಸಂಚಲನ ಮೂಡಿದೆ.

ಶಾಹದೋಲ್ ಜಿಲ್ಲಾ ಆಸ್ಪತ್ರೆಯಲ್ಲಿ ನಾಚಿಕೆಗೇಡಿನ ಘಟನೆ
ಧುರವಾರದ ನಿವಾಸಿ ಲುಲಯ್ಯ ಬೈಗಾ (56) ಅವರನ್ನು ಕೆಲವು ದಿನಗಳ ಹಿಂದೆ ಶಾಹದೋಲ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಮೃತದೇಹವನ್ನು ಮನೆಗೆ ಕೊಂಡೊಯ್ಯಲು ಶವವಾಹನ ನೀಡುವಂತೆ ಕುಟುಂಬಸ್ಥರು ಆಸ್ಪತ್ರೆ ಆಡಳಿತ ಮಂಡಳಿಗೆ ಮನವಿ ಮಾಡಿದ್ದಾರೆ. ಈ ವೇಳೆ ಸ್ವಲ್ಪ ಕಾಯುವಂತೆ ಹೇಳಿದ್ದಾರೆ. ಗಂಟೆಗಳೇ ಕಳೆದರೂ ವಾಹನ ಬರದೆ ಇದ್ದಿದ್ದರಿಂದ ಮತ್ತೆ ಈ ಬಗ್ಗೆ ವಿಚಾರಿಸಿದಾಗ ನೀನೇ ಸ್ವಲ್ಪ ವ್ಯವಸ್ಥೆ ಮಾಡಿಕೊಳ್ಳಿ ಎಂದು ಸಿಬ್ಬಂದಿ ತಿಳಿಸಿದ್ದಾರೆ.

ನಂತರ ಸ್ಟ್ರೆಚರ್‌ನಲ್ಲಿ ಶವವನ್ನು ಹೊರ ತಂದ ನಂತರ ಕುಟುಂಬಸ್ಥರು ಅದನ್ನು ಹೇಗೋ ಬೈಕ್‌ನಲ್ಲಿ ಇರಿಸಿ ನಂತರ ಮೊಮ್ಮಗ ಗ್ರಾಮಕ್ಕೆ ತೆರಳಿದ್ದಾರೆ. ಈ ದೃಶ್ಯವನ್ನು ನೋಡಿದವರೆಲ್ಲ ಬೆಚ್ಚಿ ಬೀದಿದ್ದಾರೆ. ಈ ವೇಳೆ ಯಾರೋ ಘಟನೆಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಅಂದಿನಿಂದ ಆಸ್ಪತ್ರೆ ಆಡಳಿತ ಮೌನ ವಹಿಸಿದೆ.

ಶಹದೋಲ್ ಜಿಲ್ಲಾ ಆಸ್ಪತ್ರೆಯ ಸ್ಥಿತಿ...

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ವೆನೆಜುವೆಲಾ ಪರಿಸ್ಥಿತಿ ನಿಮಗೂ ಬರಬಹುದು.. ತಡ ಮಾಡದೇ ನಮ್ ಜೊತೆ ಒಪ್ಪಂದ ಮಾಡ್ಕೊಳ್ಳಿ': ಕ್ಯೂಬಾಗೂ Donald Trump ಎಚ್ಚರಿಕೆ!

ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ತ್ರಿಪುರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ: ಉನಕೋಟಿಯಲ್ಲಿ ಮಸೀದಿ-ಮುಸ್ಲಿಂ ಅಂಗಡಿಗಳಿಗೆ ಬೆಂಕಿ

ಒಂದು ವಾರದ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್ಚಾರ್ಜ್!

Tubelight in his head: ಹಿಮಂತಾ ಬಿಸ್ವಾ ಶರ್ಮಾ ವಿರುದ್ಧ AIMIM ಮುಖ್ಯಸ್ಥ ಓವೈಸಿ ಕಿಡಿ! ಏನಿದು ವಿವಾದ?

SCROLL FOR NEXT