ಮಿಜೊರಾಮ್ ನಲ್ಲಿ ಮತದಾನ (ಸಾಂಕೇತಿಕ ಚಿತ್ರ) 
ದೇಶ

ಮಿಜೊರಾಮ್: ಮತ ಎಣಿಕೆ ದಿನಾಂಕ ಬದಲಾವಣೆಗೆ ಸಾಲು ಸಾಲು ಪ್ರಾರ್ಥನೆ!

ಮಿಜೊರಾಮ್ ನಲ್ಲಿ ಮತ ಎಣಿಕೆ ದಿನಾಂಕವನ್ನೇ ಬದಲು ಮಾಡುವುದಕ್ಕೆ ಮಂದಿ ದೇವರ ಮೊರೆ ಹೋಗಿದ್ದಾರೆ.

ಗುವಾಹಟಿ: ಚುನಾವಣೆ ಅಥವಾ ಮತ ಎಣಿಕೆ ದಿನಾಂಕ ಬಂತೆಂದರೆ, ತಮ್ಮ ನೆಚ್ಚಿನ ರಾಜಕೀಯ ಪಕ್ಷ ಅಥವಾ ನೆಚ್ಚಿನ ಅಭ್ಯರ್ಥಿಗಳಿಗೆ ಪ್ರಾರ್ಥನೆ ಸಲ್ಲಿಸುವುದು ಸಾಮಾನ್ಯದ ಸಂಗತಿ, ಆದರೆ ಮಿಜೊರಾಮ್ ನಲ್ಲಿ ಮತ ಎಣಿಕೆ ದಿನಾಂಕವನ್ನೇ ಬದಲು ಮಾಡುವುದಕ್ಕೆ ಮಂದಿ ದೇವರ ಮೊರೆ ಹೋಗಿದ್ದಾರೆ. 

ಇದಕ್ಕೆ ಕಾರಣ ಭಾನುವಾರ...!  ಮಿಜೊರಾಮ್ ಕ್ರೈಸ್ತ ಮತ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ರಾಜ್ಯ. ಕ್ರೈಸ್ತರಿಗೆ ಭಾನುವಾರ ವಿಶೇಷ ದಿನವಾಗಿದ್ದು ಬಹುತೇಕ ಮಂದಿ ಚರ್ಚ್ ಗೆ ತೆರಳಿ ಪ್ರಾರ್ಥನೆ ಸಲ್ಲಿಸುವುದು ಕಡ್ಡಾಯವಾಗಿದೆ.

ನವಂಬರ್ 7 ರಂದು ಚುನಾವಣೆ ನಡೆದಿರುವ ಮಿಜೊರಾಮ್ ನಲ್ಲಿ ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ.   

ನಿವೃತ್ತ ಪಾಸ್ಟರ್ ಆಗಿರುವ ರೆವರೆಂಡ್ ಕೆಸಿ ವನಲಾಲ್ದುಹಾ, ಭಾನುವಾರದಂದು ಮತ ಎಣಿಕೆ ನಿಗದಿಯಾಗಿರುವುದು ಹಲವರಲ್ಲಿ ಅಸಮಾಧಾನ ಮೂಡಿಸಿದೆ. ಭಾನುವಾರದಂದು ಚರ್ಚ್ ಸೇವೆಗಳು ದಿನದ ಮೂರು ಹೊತ್ತು ನಡೆಯುತ್ತವೆ. ಅದೇ ದಿನ ಮತ ಎಣಿಕೆಯೂ ನಡೆದರೆ, ಈ ಪ್ರಕ್ರಿಯೆಯಿಂದಾಗಿ ಹಲವರಿಗೆ ಚರ್ಚ್ ಗೆ ಬರುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.
 
ನಮ್ಮ ಮನವಿಗೆ ಸ್ಪಂದಿಸಿರುವ ನಮ್ಮ ಸದಸ್ಯರು ರಾಜ್ಯಾದ್ಯಂತ ನ.26 ರಂದು ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ರೆವರೆಂಡ್ ವನಲಾಲ್ದುಹಾ ಹೇಳಿದ್ದಾರೆ.

ಮಿಜೋರಾಂ ಎನ್‌ಜಿಒ ಸಮನ್ವಯ ಸಮಿತಿಯ ನಿಯೋಗವೊಂದು ಪ್ರಸ್ತುತ ನವದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದು, ಮಂಗಳವಾರ ಚುನಾವಣಾ ಅಧಿಕಾರಿಗಳನ್ನು ಭೇಟಿ ಮಾಡಲು ಸಮಯ ಪಡೆದುಕೊಂಡಿದೆ. ಇದಕ್ಕೂ ಮೊದಲು, ಚರ್ಚ್ ಸಂಘಟನೆಯಾದ ಮಿಜೋರಾಂ ಕೊಹ್ರಾನ್ ಹ್ರುಯಿತುಟ್ ಸಮಿತಿಯು ರಾಜ್ಯದ ಚರ್ಚ್‌ಗಳನ್ನು ಪ್ರಾರ್ಥನೆಯ ಮೂಲಕ ಮತ ಎಣಿಕೆ ದಿನಾಂಕ ಬದಲಾವಣೆಗೆ ದೇವರ ಮೊರೆ ಹೋಗಿತ್ತು.

ಚುನಾವಣಾ ವೇಳಾಪಟ್ಟಿ ಹೊರಬಿದ್ದ ಬೆನ್ನಲ್ಲೇ, ಎಣಿಕೆ ದಿನಾಂಕವನ್ನು ಬದಲಾಯಿಸುವಂತೆ ಚುನಾವಣಾ ಆಯೋಗಕ್ಕೆ ಹಲವು ಮನವಿಗಳನ್ನು ಕಳುಹಿಸಲಾಗಿದ್ದು, ಯಾವುದೇ ಪ್ರಯೋಜನವಾಗಿರಲಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಲ್ಲಾ 329 ಅಭ್ಯರ್ಥಿಗಳಿಗೆ CID ಶಾಕ್, ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!