ದೇಶ

ಲೂಧಿಯಾನ: ಉದ್ಯಮಿ ಕಿಡ್ನಾಪ್ ಪ್ರಕರಣ, ಇಬ್ಬರು ವಾಂಟೆಡ್ ಗ್ಯಾಂಗ್ ಸ್ಟರ್ ಎನ್ ಕೌಂಟರ್ ನಲ್ಲಿ ಹತ್ಯೆ 

Nagaraja AB

ಲೂಧಿಯಾನ: ಉದ್ಯಮಿಯೊಬ್ಬರ ಅಪಹರಣ ಪ್ರಕರಣದಲ್ಲಿ ಬೇಕಾಗಿದ್ದ ಇಬ್ಬರು ಗ್ಯಾಂಗಸ್ಟರ್ ಬುಧವಾರ ಸಂಜೆ ನಗರದ ಹೊರವಲಯದಲ್ಲಿರುವ ಟಿಬ್ಬಾ ಸೇತುವೆಯ ಬಳಿ ಪೊಲೀಸರೊಂದಿಗೆ ನಡೆದ ಎನ್ ಕೌಂಟರ್ ನಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಉದ್ಯಮಿ ಸಂಭವ್ ಜೈನ್ ಅಪಹರಣ ಪ್ರಕರಣದಲ್ಲಿ ಬೇಕಾಗಿದ್ದ ದರೋಡೆಕೋರರಿಬ್ಬರನ್ನೂ ಎನ್‌ಕೌಂಟರ್‌ನಲ್ಲಿ ಕೊಲ್ಲಲಾಗಿದೆ ಎಂದು ಲುಧಿಯಾನ ಪೊಲೀಸ್ ಕಮಿಷನರ್ ಕುಲದೀಪ್ ಚಹಾಲ್ ಹೇಳಿದ್ದಾರೆ. ದರೋಡೆಕೋರರನ್ನು ಸಂಜೀವ್ ಅಲಿಯಾಸ್ ಸಂಜು ಬ್ರಾಹ್ಮಣ ಮತ್ತು ಶುಭಂ ಅಲಿಯಾಸ್ ಗೋಪಿ ಎಂದು ಗುರುತಿಸಲಾಗಿದೆ.

ಲೂಧಿಯಾನದ ಟಿಬ್ಬಾ ರಸ್ತೆಯಲ್ಲಿ ಸಂಜೆ 5.50ಕ್ಕೆ ಎನ್‌ಕೌಂಟರ್ ನಡೆದಿದ್ದು, ಮೊದಲಿಗೆ ದರೋಡೆಕೋರರು ಪೊಲೀಸರ ಮೇಲೆ ಗುಂಡು ಹಾರಿಸಿದ್ದು, ನಂತರ ಅವರನ್ನು ಬೆನ್ನಟ್ಟಿದ್ದ ಪೊಲೀಸರು ಟಿಬ್ಬಾ ಸೇತುವೆ ಬಳಿ ನಡೆದ ಗುಂಡಿನ ಚಕಮಕಿಯಲ್ಲಿ ಅವರಿಬ್ಬರೂ ಹತ್ಯೆಗೈದರು ಎಂದು ಅವರು ಚಹಾಲ್ ತಿಳಿಸಿದ್ದಾರೆ. 

ಗುಂಡಿನ ಚಕಮಕಿಯಲ್ಲಿ ಏರ್ವ ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸುಖಜಿತ್ ಸಿಂಗ್ ಕೂಡ ಗಾಯಗೊಂಡಿದ್ದು, ಅವರನ್ನು ಇಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಉದ್ಯಮಿ ಅಪಹರಣ ಪ್ರಕರಣದಲ್ಲಿ ಏಳು ಜನರನ್ನು ಗುರುತಿಸಲಾಗಿದೆ ಮತ್ತು ಅವರಲ್ಲಿ ಐವರನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಚಹಾಲ್ ಹೇಳಿದರು.

SCROLL FOR NEXT