ನಕ್ಸಲ್ 
ದೇಶ

ಜಾರ್ಖಂಡ್‌ನಲ್ಲಿ ಐವರು ನಕ್ಸಲೀಯರ ಬಂಧನ: ಅಮೆರಿಕ ನಿರ್ಮಿತ M1 ರೈಫಲ್ ಸೇರಿ 5 ಬಂದೂಕುಗಳ ವಶ

ಜಾರ್ಖಂಡ್‌ನ ಚತ್ರಾ ಜಿಲ್ಲೆಯಲ್ಲಿ ಇಬ್ಬರು ಸ್ವಯಂ-ಘೋಷಿತ ಉಪ ವಲಯ ಕಮಾಂಡರ್‌ಗಳು ಸೇರಿದಂತೆ ನಿಷೇಧಿತ ನಕ್ಸಲೀಯ ಸಂಘಟನೆ ಟಿಎಸ್‌ಪಿಸಿಯ ಐವರು ಉಗ್ರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಚತ್ರಾ(ಜಾರ್ಖಂಡ್): ಜಾರ್ಖಂಡ್‌ನ ಚತ್ರಾ ಜಿಲ್ಲೆಯಲ್ಲಿ ಇಬ್ಬರು ಸ್ವಯಂ-ಘೋಷಿತ ಉಪ ವಲಯ ಕಮಾಂಡರ್‌ಗಳು ಸೇರಿದಂತೆ ನಿಷೇಧಿತ ನಕ್ಸಲೀಯ ಸಂಘಟನೆ ಟಿಎಸ್‌ಪಿಸಿಯ ಐವರು ಉಗ್ರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಂಧಿತರಿಂದ ಅಮೆರಿಕನ್ ನಿರ್ಮಿತ ರೈಫಲ್‌ಗಳು, ಕಾರ್ಟ್ರಿಡ್ಜ್‌ಗಳು ಮತ್ತು ಸಂಘಟನೆಯ ಕರಪತ್ರಗಳು ಸೇರಿದಂತೆ ಹಲವಾರು ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಿದಾಳು-ಸತ್ಪಹಾರಿ ಬೆಟ್ಟದಲ್ಲಿ ನಿಷೇಧಿತ ಸಂಘಟನೆಯ 10 ಮಂದಿ ಇರುವ ಬಗ್ಗೆ ಮಾಹಿತಿ ಲಭಿಸಿತ್ತು ಎಂದು ಛತ್ರದ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ರಾಕೇಶ್ ರಂಜನ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಇದರ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿ ಐವರು ನಕ್ಸಲೀಯರನ್ನು ಬಂಧಿಸಿದ್ದಾರೆ ಎಂದು ಹೇಳಿದರು.

ಬಂಧಿತ ಮಾವೋವಾದಿಗಳಲ್ಲಿ ಟಿಎಸ್‌ಪಿಸಿ ಉಪ ವಲಯ ಕಮಾಂಡರ್ ಪ್ರಭಾತ್ ಅಲಿಯಾಸ್ ಪ್ರೇಮ್ ಕುಮಾರ್ ಗಂಜು ಮತ್ತು ವಿಷು ಗಂಜು ಅಲಿಯಾಸ್ ಅಶೋಕ್ ಗಂಜು ಸೇರಿದ್ದಾರೆ ಎಂದು ಅವರು ಹೇಳಿದರು. ಪ್ರಭಾತ್ 14 ಪ್ರಕರಣಗಳಲ್ಲಿ ಬೇಕಾಗಿದ್ದರೆ ವಿಷು 11 ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದಾನೆ ಎಂದು ಅಧಿಕಾರಿ ಹೇಳಿದರು.

ಇದಲ್ಲದೇ ಸಂಘಟನೆಯ ಇತರ ಮೂವರನ್ನು ಅರುಣ್ ಪ್ರಜಾಪತಿ, ನರೇಶ್ ಕುಮಾರ್ ಭೋಕ್ತ ಮತ್ತು ಜಿತೇಂದ್ರ ಕುಮಾರ್ ರಜಾಕ್ ಎಂದು ಗುರುತಿಸಲಾಗಿದೆ ಎಂದು ಹೇಳಿದರು.

ಬಂಧಿತರಿಂದ ಒಂದು ಎಕೆ-56 ರೈಫಲ್, ಒಂದು ಅರೆ-ಸ್ವಯಂಚಾಲಿತ ಎಸ್‌ಎಲ್‌ಆರ್ ರೈಫಲ್, ಒಂದು ಅಮೆರಿಕನ್ ನಿರ್ಮಿತ ಎಂ1 ರೈಫಲ್, ಒಂದು .315 ಬೋಲ್ಟ್ ರೈಫಲ್, ಎರಡು ದೇಶ ನಿರ್ಮಿತ ಪಿಸ್ತೂಲ್‌ಗಳು, 275 ಕಾರ್ಟ್ರಿಡ್ಜ್‌ಗಳು ಮತ್ತು ಸಂಘಟನೆಯ 80 ಕರಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

SCROLL FOR NEXT