ಸಾಂದರ್ಭಿಕ ಚಿತ್ರ 
ದೇಶ

ಗ್ರಹಚಾರ: ಡೋರ್ ಓಪನ್ ಆಯ್ತು, ಆದ್ರೆ ಲಿಫ್ಟ್ ಬರ್ಲಿಲ್ಲ; 4 ಮಹಡಿ ಕೆಳಗೆ ಬಿದ್ದು ವ್ಯಕ್ತಿ ಸಾವು!

4ನೇ ಮಹಡಿಯಿಂದ ಕೆಳಗಿಳಿಯಲು ಹೋದ ವ್ಯಕ್ತಿ ಲಿಫ್ಟ್ ನಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ರಾಂಚಿಯ ಶೈಲೇಶ್ ಕುಮಾರ್ ಮೃತ ವ್ಯಕ್ತಿ.

ರಾಂಚಿ: 4ನೇ ಮಹಡಿಯಿಂದ ಕೆಳಗಿಳಿಯಲು ಹೋದ ವ್ಯಕ್ತಿ ಲಿಫ್ಟ್ ನಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ರಾಂಚಿಯ ಶೈಲೇಶ್ ಕುಮಾರ್ ಮೃತ ವ್ಯಕ್ತಿ.

ಶೈಲೇಶ್ ಕುಮಾರ್, 4ನೇ ಮಹಡಿಯಲ್ಲಿ ನಿಂತು ಲಿಫ್ಟ್ ಗುಂಡಿ ಒತ್ತಿದ್ದಾರೆ, ಈ ವೇಳೆ ಲಿಫ್ಟ್ ಬಾಗಿಲು ತೆಗೆದಿದೆ, ಆದರೆ ಲಿಫ್ಟ್ ಮಾತ್ರ ಕೆಳಗೆ ಬರಲಿಲ್ಲ, ಇದನ್ನು ಗಮನಿಸದ ಶೈಲೇಶ್ ಕಾಲಿಟ್ಟಿದ್ದಾರೆ. ಇದರಿಂದ 4ನೇ ಮಹಡಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ.

ಶೈಲೇಶ್ ಶುಕ್ರವಾರ ನೆಲಮಹಡಿಗೆ ಬರಲು ನಾಲ್ಕನೇ ಮಹಡಿಯಲ್ಲಿದ್ದ ಲಿಫ್ಟ್ ಬಟನ್ ಒತ್ತಿದರು, ನಂತರ ತಕ್ಷಣ ಲಿಫ್ಟ್ ಬಾಗಿಲು ತೆರೆದುಕೊಂಡಿತು. ಆದರೆ ಲಿಫ್ಟ್  ಬರಲಿಲ್ಲ, ಶೈಲೇಶ್ ಎಲಿವೇಟರ್ ಡಕ್ಟ್  ಪ್ರವೇಶಿಸಿದರು , ಈ ವೇಳೆ ಶಾಫ್ಟ್ ನಿಂದ ನೆಲಕ್ಕೆ ಬಿದ್ದಿದ್ದಾರೆ ಎಂದು ರಾಂಚಿ ಎಸ್ ಪಿ ತಿಳಿಸಿದ್ದಾರೆ.

ಜೋರಾದ ಶಬ್ದ ಕೇಳಿದ ಕೂಡಲೇ ಕಟ್ಟಡದ ಭದ್ರತಾ ಸಿಬ್ಬಂದಿ ಓಡಿ ಬಂದಿದ್ದಾರೆ. ಆದರೆ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು ಎಂದು ತಿಳಿದು ಬಂದಿದೆ. ಅಂದಿನಿಂದ ಲಿಫ್ಟ್  ಮುಚ್ಚಲಾಗಿದೆ ಎಂದು  ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ  ದೂರು ದಾಖಲಾಗಿದೆ. ಈ ಸಂಬಂಧ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Madhya Pradesh: ದುರ್ಗಾದೇವಿ ಮೂರ್ತಿ ವಿಸರ್ಜನೆ ವೇಳೆ ದುರಂತ, ಮಹಿಳೆಯರು, ಮಕ್ಕಳು ಸೇರಿದಂತೆ 14 ಮಂದಿ ಸಾವು!Video

ಈ ಬಾರಿ 'ಮೈಸೂರು ದಸರಾ' ಯಶಸ್ವಿ; ಬೆಳೆ ಹಾನಿಯಾದ ಎಲ್ಲ 10 ಲಕ್ಷ ಹೆಕ್ಟೇರ್ ಗೂ ಸಮೀಕ್ಷೆ ನಂತರ ಪರಿಹಾರ: ಸಿಎಂ ಸಿದ್ದರಾಮಯ್ಯ

'RSS ನಲ್ಲಿ ಒಬ್ಬ ವ್ಯಕ್ತಿಯೂ ಇಲ್ಲ': ಪ್ರಧಾನಿ ಮೋದಿ ಹೇಳಿಕೆಗೆ ಓವೈಸಿ ತಿರುಗೇಟು!

2026 T20 World Cup: ಅರ್ಹತೆ ಪಡೆದ ನಮೀಬಿಯಾ, ಜಿಂಬಾಬ್ವೆ!

ಅಂಬೇಡ್ಕರ್ ಸಿದ್ಧಾಂತದಂತೆ ಬದುಕಿದ್ದೇವೆ; RSS ಕಾರ್ಯಕ್ರಮಕ್ಕೆ ಹೋಗಲ್ಲ: CJI ಗವಾಯಿ ತಾಯಿ ಪತ್ರ

SCROLL FOR NEXT