ಉಮಾಭಾರತಿ 
ದೇಶ

ಬಿಜೆಪಿ ಯಾತ್ರೆಗೆ ಅಹ್ವಾನ ನೀಡಿದರೂ ಹೋಗುವುದಿಲ್ಲ: ಫ್ರೈರ್ ಬ್ರಾಂಡ್ ಉಮಾಭಾರತಿ!

ಮಧ್ಯಪ್ರದೇಶದಲ್ಲಿ ತಮ್ಮದೇ ಬಿಜೆಪಿ ಪಕ್ಷ ಹಮ್ಮಿಕೊಂಡಿರುವ ಜನಾಶೀರ್ವಾದ್ ಯಾತ್ರೆಗೆ ಆಹ್ವಾನಿಸದಿದ್ದಕ್ಕೆ ನಿರಾಶೆ ವ್ಯಕ್ತಪಡಿಸಿದ್ದ ಬಿಜೆಪಿ ಫೈರ್ ಬ್ರಾಂಡ್ ನಾಯಕಿ ಉಮಾಭಾರತಿ ಇದೀಗ ಯಾತ್ರೆಗೆ ಆಹ್ವಾನ ನೀಡಿದರೂ ಹೋಗುವುದಿಲ್ಲ ಎಂದು ಖಜಕ್ ಆಗಿ ಹೇಳಿದ್ದಾರೆ.

ನವದೆಹಲಿ: ಮಧ್ಯಪ್ರದೇಶದಲ್ಲಿ ತಮ್ಮದೇ ಬಿಜೆಪಿ ಪಕ್ಷ ಹಮ್ಮಿಕೊಂಡಿರುವ ಜನಾಶೀರ್ವಾದ್ ಯಾತ್ರೆಗೆ ಆಹ್ವಾನಿಸದಿದ್ದಕ್ಕೆ ನಿರಾಶೆ ವ್ಯಕ್ತಪಡಿಸಿದ್ದ ಬಿಜೆಪಿ ಫೈರ್ ಬ್ರಾಂಡ್ ನಾಯಕಿ ಉಮಾಭಾರತಿ ಇದೀಗ ಯಾತ್ರೆಗೆ ಆಹ್ವಾನ ನೀಡಿದರೂ ಹೋಗುವುದಿಲ್ಲ ಎಂದು ಖಜಕ್ ಆಗಿ ಹೇಳಿದ್ದಾರೆ.

ಉಮಾಭಾರತಿ ಅವರ ಹೇಳಿಕೆ ಪಕ್ಷದೊಳಗೆ ಬಿರುಗಾಳಿ ಎಬ್ಬಿಸಿದ್ದು, ಅವರು ಯಾತ್ರೆಯ ಸಮಯದಲ್ಲಿ ಹಾಜರಿದ್ದರೆ ಬಿಜೆಪಿ ನಾಯಕರು ಮುಜುಗರಕ್ಕೊಳಪಡಬೇಕಾಗುತ್ತದೆ ಎಂದು ಆಗ ಅಲ್ಲಿ ನೆರೆದಿದ್ದವರೆಲ್ಲರ ಗಮನ ನನ್ನ ಮೇಲೆ ಕೇಂದ್ರಿತವಾಗುತ್ತದೆ.  ನಾನು ಅಲ್ಲಿದ್ದರೆ, ಇಡೀ ಸಾರ್ವಜನಿಕ ಗಮನವು ನನ್ನ ಮೇಲೆ ಬೀಳುತ್ತದೆ. ಇದರಿಂದ ನಾಯಕರು ಹೆದರುತ್ತಾರೆ" ಎಂದು 64 ವರ್ಷದ ಬಿಜೆಪಿ ನಾಯಕಿ ಉಮಾಭಾರತಿ ಹೇಳಿದ್ದಾರೆ.

ಇಂದು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯ ಬಿಜೆಪಿ ನಾಯಕತ್ವದ ವಿರುದ್ಧ ಹಿರಿಯ ನಾಯಕಿ ತಮ್ಮ ವಾಗ್ದಾಳಿ ಮುಂದುವರೆಸಿದ್ದು, ''ಆರಂಭದಲ್ಲಿ ನನಗೆ ಜನಾಶೀರ್ವಾದ ಯಾತ್ರೆಗೆ ಆಹ್ವಾನ ಬಂದಿರಲಿಲ್ಲ ನಿಜ.ಆದರೆ, ಆಮಂತ್ರಣ ಬಂದಿರೋ ಇಲ್ಲವೋ ನನಗೆ ಯಾವುದೇ ಪ್ರಾಮುಖ್ಯತೆ ಇಲ್ಲ, ಈಗ ಆಹ್ವಾನ ಬಂದರೆ ಹೋಗುವುದಿಲ್ಲ. ನಾನು ಸೆಪ್ಟೆಂಬರ್ 25 ರಂದು ಪ್ರಾರಂಭ ಅಥವಾ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂದು ಅವರು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಭಾನುವಾರ ಯಾತ್ರೆಗೆ ಚಾಲನೆ ನೀಡಿದ್ದು, 2018 ರ ವಿಧಾನಸಭಾ ಚುನಾವಣೆಯಲ್ಲಿ 30 ಸ್ಥಾನಗಳ ಪೈಕಿ 24 ಸ್ಥಾನಗಳನ್ನು ಬಿಜೆಪಿ ಗೆದ್ದಿರುವ ರಾಜ್ಯದ ವಿಂಧ್ಯ ಪ್ರದೇಶದ ಮೂಲಕ ಯಾತ್ರೆ ಸಾಗಲಿದೆ. 2003ರಲ್ಲಿ, ದಿಗ್ವಿಜಯ ಸಿಂಗ್ ನೇತೃತ್ವದ ಕಾಂಗ್ರೆಸ್ ಪಕ್ಷದ 10 ವರ್ಷಗಳ ಆಡಳಿತವನ್ನು ಕೊನೆಗೊಳಿಸಿ ಉಮಾ ಭಾರತಿ ನೇತೃತ್ವದ ಮಧ್ಯಪ್ರದೇಶ ಬಿಜೆಪಿಯನ್ನು ಪ್ರಚಂಡ ವಿಜಯದತ್ತ ಮುನ್ನಡೆಸಿದ್ದರು. ಆದರೆ, 2005ರಲ್ಲಿ ಅಶಿಸ್ತಿನ ಕಾರಣಕ್ಕಾಗಿ ಬಿಜೆಪಿಯಿಂದ ಉಚ್ಛಾಟನೆಗೊಳಗಾಗಿದ್ದರು. ಬಳಿಕ ಅವರನ್ನು 2011ರಲ್ಲಿ ಪಕ್ಷಕ್ಕೆ ಮರುಸೇರ್ಪಡೆಸಲಾಯಿತು.

ರಾಜ್ಯ ಬಿಜೆಪಿ ಘಟಕದ ಟೀಕೆಗಳ ಹೊರತಾಗಿಯೂ, ಫೈರ್‌ಬ್ರಾಂಡ್ ನಾಯಕಿ ಅವರು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರೊಂದಿಗಿನ ತನ್ನ ಬಾಂಧವ್ಯವನ್ನು ಮುಂದುವರಿಸುವುದಾಗಿ ಮತ್ತು ಕೇಳಿದಾಗ ಮತ್ತು ಪಕ್ಷದ ಪರವಾಗಿ ಪ್ರಚಾರ ಮಾಡುವುದಾಗಿ ಹೇಳಿದರು.

ರಾಜಕೀಯ ನಾಯಕರ ಮೇಲಿನ ದಾಳಿಯನ್ನು ಮುಂದುವರಿಸಿದ ಉಮಾ ಭಾರತಿ, 'ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ನಡುವಿನ ವ್ಯತ್ಯಾಸವನ್ನು ಒತ್ತಿ ಹೇಳಿದರು. ಅವರು ರಾಜಕಾರಣಿಗಳಲ್ಲಿ ಪ್ರಚಲಿತದಲ್ಲಿರುವ "5-ಸ್ಟಾರ್ ಹೋಟೆಲ್" ಸಂಸ್ಕೃತಿಯನ್ನು ಟೀಕಿಸಿದರು.

ನಮ್ಮೆಲ್ಲ ನಾಯಕರು, ಶಾಸಕರು, ಸಂಸದರು, ಸಚಿವರು, ಮುಖ್ಯಮಂತ್ರಿಗಳು, ಎಲ್ಲ ಅಧಿಕಾರಿಗಳು ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ನಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಓದಿಸಬೇಕು, ಆಗ ಮಾತ್ರ ಈ ವ್ಯವಸ್ಥೆ ಸುಧಾರಿಸಲು ಸಾಧ್ಯ. ಮದುವೆಗಳ ವ್ಯರ್ಥ ಖರ್ಚು ಮತ್ತು ನಮ್ಮ ನಾಯಕರು 5-ಸ್ಟಾರ್ ಹೋಟೆಲ್‌ಗಳಲ್ಲಿ ಉಳಿಯುವುದನ್ನು ನಾನು ಯಾವಾಗಲೂ ತಪ್ಪು ಎಂದು ಪರಿಗಣಿಸುತ್ತೇನೆ. ಪ್ರಧಾನಿ ಮೋದಿ ಕೂಡ ಈ ಜೀವನಶೈಲಿಯನ್ನು ಬಲವಾಗಿ ಇಷ್ಟಪಡುವುದಿಲ್ಲ. ನಾನು ಇದನ್ನು ಭವಿಷ್ಯದಲ್ಲಿಯೂ ಹೇಳುತ್ತೇನೆ. ನಾವು ನಿರ್ಲಕ್ಷಿಸಲಾಗುವುದಿಲ್ಲ ಮಹಾತ್ಮಾ ಗಾಂಧೀಜಿ, ದೀನದಯಾಳ್ ಉಪಾಧ್ಯಾಯ ಜಿ ಮತ್ತು ಪ್ರಧಾನಿ ಮೋದಿ ಜಿ ಅವರ ಬೋಧನೆಗಳು" ಎಂದು ಅವರು ಬರೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Shocking: ಹೆಣ್ಣಿನ ಶವ ಎಳೆದೊಯ್ದು ಶವಾಗಾರದಲ್ಲೇ ಅತ್ಯಾಚಾರ, 25ರ ಯುವಕನಿಂದ ಪೈಶಾಚಿಕ ಕೃತ್ಯ, CCTV Video

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

SCROLL FOR NEXT