ಉದಯನಿಧಿ ಸ್ಟಾಲಿನ್ 
ದೇಶ

 ಹಿಟ್ಲರ್ ಗೆ ಉದಯನಿಧಿ ಸ್ಟಾಲಿನ್ ಹೋಲಿಸಿದ ಬಿಜೆಪಿ!

ಸನಾತನ ಧರ್ಮ ನಿರ್ಮೂಲನೆ ಹೇಳಿಕೆ ಹಿನ್ನೆಲೆಯಲ್ಲಿ ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ಅವರನ್ನು ನಾಜಿ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಗೆ ಬಿಜೆಪಿ ಹೋಲಿಸಿದೆ.  

ನವದೆಹಲಿ: ಸನಾತನ ಧರ್ಮ ನಿರ್ಮೂಲನೆ ಹೇಳಿಕೆ ಹಿನ್ನೆಲೆಯಲ್ಲಿ ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ಅವರನ್ನು ನಾಜಿ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಗೆ ಬಿಜೆಪಿ ಹೋಲಿಸಿದೆ.  

ಉದಯನಿಧಿ ಸ್ಟಾಲಿನ್ ಹೇಳಿಕೆಯು "ಕಲಬೆರಕೆ ರಹಿತ ದ್ವೇಷದ ಭಾಷಣವಾಗಿದೆ. ಅಲ್ಲದೇ, ದೇಶದ ಶೇ. 80 ರಷ್ಟಿರುವ ಸನಾತನ ಧರ್ಮದವರ 'ಜನಾಂಗೀಯ ಹತ್ಯೆಯ ಕರೆಯಾಗಿದೆ ಎಂದು ಆರೋಪಿಸಲಾಗಿದೆ.

"ಹಿಟ್ಲರ್ ಯಹೂದಿಗಳ ವರ್ಣನೆ ಮತ್ತು ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ಹೇಗೆ ಬಣ್ಣಿಸಿದ್ದಾರೆ ಎಂಬುದರ ನಡುವೆ ವಿಲಕ್ಷಣವಾದ ಹೋಲಿಕೆಯಿದೆ. ಹಿಟ್ಲರನಂತೆ ಉದಯ ನಿಧಿ ಸ್ಟಾಲಿನ್ ಕೂಡಾ  ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ನಾಜಿ ದ್ವೇಷವು ಹತ್ಯಾಕಾಂಡದಲ್ಲಿ ಹೇಗೆ ಪರಾಕಾಷ್ಠೆಯಾಯಿತು, ಸುಮಾರು 6 ಮಿಲಿಯನ್ ಯುರೋಪಿಯನ್ ಯಹೂದಿಗಳು ಮತ್ತು ಕನಿಷ್ಠ 5 ಮಿಲಿಯನ್ ಸೋವಿಯತ್ ಯುದ್ಧ ಕೈದಿಗಳು ಮತ್ತು ಇತರ ಸಂತ್ರಸ್ತರನ್ನು ಕೊಂದರು ಎಂದು ನಮಗೆ ತಿಳಿದಿದೆ ಎಂದು ಬಿಜೆಪಿ ಅಧಿಕೃತ ಎಕ್ಸ್ ಖಾತೆಯಲ್ಲಿ ಹೇಳಲಾಗಿದೆ.

ಹೊಸದಾಗಿ ರಚನೆಗೊಂಡಿರುವ INDIA ಮೈತ್ರಿಕೂಟದ ವಿರುದ್ಧವೂ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದ್ದು, ಸ್ಟಾಲಿನ್ ಗೆ ಕಾಂಗ್ರೆಸ್ ಮತ್ತು ವಿಪಕ್ಷಗಳ ಮೈತ್ರಿಕೂಟದ  ಬೆಂಬಲವು ಅತ್ಯಂತ ಗೊಂದಲಕಾರಿಯಾಗಿದೆ' ಎಂದು ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT