ಮನಮೋಹನ್ ಸಿಂಗ್ - ಮಲ್ಲಿಕಾರ್ಜುನ ಖರ್ಗೆ 
ದೇಶ

ಮನಮೋಹನ್ ಸಿಂಗ್ ನಿವೃತ್ತಿ: ನೀವು ಯಾವಾಗಲೂ ಜ್ಞಾನದ ಮೂಲವಾಗಿದ್ದೀರಿ; ಮಲ್ಲಿಕಾರ್ಜುನ ಖರ್ಗೆ ಪತ್ರ

33 ವರ್ಷಗಳಿಂದ ರಾಜ್ಯಸಭೆಯ ಸದಸ್ಯರಾಗಿದ್ದ ಮಾಜಿ ಪ್ರಧಾನಿ ಮತ್ತು ಕಾಂಗ್ರೆಸ್ ನಾಯಕ ಮನಮೋಹನ್ ಸಿಂಗ್ ಅವರ ಅವಧಿ ನೆನ್ನೆಗೆ (ಏಪ್ರಿಲ್ 2) ಕೊನೆಗೊಂಡಿದ್ದು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯಿಂದ ನಿವೃತ್ತರಾಗಿರುವ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ.

ನವದೆಹಲಿ: 33 ವರ್ಷಗಳಿಂದ ರಾಜ್ಯಸಭೆಯ ಸದಸ್ಯರಾಗಿದ್ದ ಮಾಜಿ ಪ್ರಧಾನಿ ಮತ್ತು ಕಾಂಗ್ರೆಸ್ ನಾಯಕ ಮನಮೋಹನ್ ಸಿಂಗ್ ಅವರ ಅವಧಿ ನೆನ್ನೆಗೆ (ಏಪ್ರಿಲ್ 2) ಕೊನೆಗೊಂಡಿದ್ದು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯಿಂದ ನಿವೃತ್ತರಾಗಿರುವ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ.

ಮಾಜಿ ಪ್ರಧಾನಿಗೆ ಬರೆದ ಪತ್ರದಲ್ಲಿ, 'ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ನಂತರ, ಒಂದು ಯುಗ ಅಂತ್ಯಗೊಂಡಿದೆ. ಭಾರತದ ಪ್ರಧಾನಿ ಮಾತನಾಡುವಾಗಲೆಲ್ಲಾ ಇಡೀ ಜಗತ್ತು ಅವರ ಮಾತನ್ನು ಕೇಳುತ್ತದೆ ಎಂದು ಅಮೆರಿಕದ ಅಂದಿನ ಅಧ್ಯಕ್ಷ ಒಬಾಮಾ ನಿಮ್ಮ ಬಗ್ಗೆ ಪ್ರಸ್ತಾಪಿಸಿದ್ದು ನನಗೆ ನೆನಪಿದೆ' ಎಂದು ತಿಳಿಸಿದ್ದಾರೆ.

ರಾಜ್ಯಸಭೆಯಿಂದ ನಿವೃತ್ತಿ

91 ವರ್ಷದ ಮನಮೋಹನ್ ಸಿಂಗ್ ಅವರ ರಾಜ್ಯಸಭೆ ಸದಸ್ಯತ್ವದ ಅವಧಿ ಏಪ್ರಿಲ್ 3ಕ್ಕೆ ಕೊನೆಗೊಂಡಿದೆ. ದೇಶದ ಆರ್ಥಿಕತೆಯ ಸುಧಾರಣೆಗೆ ಹಲವು ದಿಟ್ಟ ಕ್ರಮಗಳನ್ನು ತೆಗೆದುಕೊಂಡಿದ್ದ ಮನಮೋಹನ್ ಸಿಂಗ್ ಅವರು, 1991ರ ಅಕ್ಟೋಬರ್‌ನಲ್ಲಿ ಮೊದಲ ಬಾರಿಗೆ ರಾಜ್ಯಸಭೆ ಸದಸ್ಯರಾಗಿದ್ದರು. ನರಸಿಂಹರಾವ್ ಅವರ ಸರ್ಕಾರದಲ್ಲಿ (1991ರಿಂದ 1996ರವರೆಗೆ) ಹಣಕಾಸು ಸಚಿವರಾಗಿದ್ದ ಅವರು 2004ರಿಂದ 2014ರವರೆಗೆ ಪ್ರಧಾನಿಯಾಗಿದ್ದರು.

'ನಿಮ್ಮ ಸಂಪುಟದ ಭಾಗವಾಗಿದ್ದು ವೈಯಕ್ತಿಕವಾಗಿ ನನಗೆ ಸಿಕ್ಕ ಭಾಗ್ಯವಾಗಿದೆ. ಕಳೆದ 10 ವರ್ಷಗಳಲ್ಲಿ ನಾನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕನಾಗಿದ್ದು, ನೀವು ಯಾವಾಗಲೂ ಜ್ಞಾನದ ಮೂಲವಾಗಿದ್ದೀರಿ ಮತ್ತು ನಾನು ನಿಮ್ಮ ಸಲಹೆಯನ್ನು ಗೌರವಿಸಿದ್ದೇನೆ. ವೈಯಕ್ತಿಕ ಅನಾನುಕೂಲತೆಗಳ ನಡುವೆಯೂ ಕಳೆದ ಕೆಲವು ವರ್ಷಗಳಿಂದ ನೀವು ಕಾಂಗ್ರೆಸ್ ಪಕ್ಷಕ್ಕೆ ಲಭ್ಯವಾಗುವಂತೆ ಇದ್ದೀರಿ. ಇದಕ್ಕಾಗಿ ಪಕ್ಷ ಮತ್ತು ನಾನು ಯಾವಾಗಲೂ ಕೃತಜ್ಞರಾಗಿರುತ್ತೇವೆ' ಎಂದು ಖರ್ಗೆ ಬರೆದಿದ್ದಾರೆ.

ನೀವು ಪ್ರಧಾನಿ ಕಚೇರಿಗೆ ತಂದ ಶಾಂತ ಮತ್ತು ಬಲವಾದ ಘನತೆಯನ್ನು ದೇಶ ಕಳೆದುಕೊಳ್ಳುತ್ತಿದೆ. ಸಂಸತ್ತು ನಿಮ್ಮ ಜ್ಞಾನ ಮತ್ತು ಅನುಭವವನ್ನು ಕಳೆದುಕೊಳ್ಳುತ್ತದೆ. ನಿಮ್ಮ ಘನತೆಯ, ಅಳತೆಯ, ರಾಜಕಾರಣಿಯಾಗಿ ನಿಮ್ಮ ಮೃದು ಮಾತುಗಳು ಸದ್ಯದ ರಾಜಕೀಯವನ್ನು ಸೂಚಿಸುವ ಸುಳ್ಳುಗಳಿಂದ ತುಂಬಿದ ದೊಡ್ಡ ಧ್ವನಿಗಳಿಗೆ ವಿರುದ್ಧವಾಗಿವೆ ಎಂದಿದ್ದಾರೆ.

ಸದ್ಯದ ರಾಜಕೀಯ ಪರಿಸ್ಥಿತಿಯನ್ನು ಅನೈತಿಕತೆ ಎಂದು ಕರೆದ ಖರ್ಗೆ, 'ಸಂಘಟಿತ ಲೂಟಿ ಮತ್ತು ಕಾನೂನುಬದ್ಧ ಲೂಟಿ' ಎಂದು ನೀವು ಕರೆದ ನೋಟು ಅಮಾನ್ಯೀಕರಣದ ಕುರಿತಾದ ನಿಮ್ಮ ಭಾಷಣವನ್ನು ನಾನು ಇನ್ನೂ ನೆನಪಿಸಿಕೊಳ್ಳುತ್ತೇನೆ. ಇದು ಕಠೋರ ವಾಸ್ತವವೆಂದು ಸಾಬೀತಾಗಿದೆ. ವೈಯಕ್ತಿಕವಾಗಿಲ್ಲದೆಯೂ ಟೀಕೆ ಮಾಡಲು ಸಾಧ್ಯ ಎಂದು ತೋರಿಸಿಕೊಟ್ಟಿದ್ದೀರಿ. ಸದ್ಯದ ಸರ್ಕಾರದ ಸುಳ್ಳನ್ನು ರಾಷ್ಟ್ರ ಮತ್ತು ಜನರು ಶೀಘ್ರದಲ್ಲೇ ನೋಡುತ್ತಾರೆ. ಸೂರ್ಯ ಮತ್ತು ಚಂದ್ರರನ್ನು ಹೇಗೆ ಮರೆಮಾಚಲು ಸಾಧ್ಯವಿಲ್ಲವೋ ಹಾಗೆಯೇ ಸತ್ಯವನ್ನು ಕೂಡ ಮರೆಮಾಡಲು ಸಾಧ್ಯವಿಲ್ಲ. ನಿಮ್ಮ ಮಾತಿನ ಮಹತ್ವವನ್ನು ಜನರು ಶೀಘ್ರದಲ್ಲೇ ಅರಿತುಕೊಳ್ಳುತ್ತಾರೆ' ಎಂದು ಖರ್ಗೆ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಮಧ್ಯಮ ವರ್ಗ ಮತ್ತು ಮಹತ್ವಾಕಾಂಕ್ಷೆಯ ಯುವಕರಿಗೆ ನೀವು ಹೀರೋ ಆಗಿದ್ದೀರ ಎಂದ ಅವರು, ಕೈಗಾರಿಕೋದ್ಯಮಿಗಳು ಮತ್ತು ಉದ್ಯಮಿಗಳಿಗೆ ನಾಯಕ ಮತ್ತು ಮಾರ್ಗದರ್ಶಿಯಾಗಿದ್ದೀರಿ ಮತ್ತು ನಿಮ್ಮ ಆರ್ಥಿಕ ನೀತಿಗಳಿಂದ ಬಡತನದಿಂದ ಹೊರಬರಲು ಸಾಧ್ಯವಾದ ಎಲ್ಲಾ ಬಡವರಿಗೆ ಹಿತಚಿಂತಕರಾಗಿದ್ದೀರಿ ಎಂದು ಬರೆದಿದ್ದಾರೆ.

ನೀವು ಸಕ್ರಿಯ ರಾಜಕಾರಣದಿಂದ ನಿವೃತ್ತರಾಗಿದ್ದರೂ ಸಹ, ನೀವು ನಮ್ಮ ದೇಶದ ನಾಗರಿಕರೊಂದಿಗೆ ಆಗಾಗ್ಗೆ ಮಾತನಾಡುವ ಮೂಲಕ ರಾಷ್ಟ್ರಕ್ಕೆ ಬುದ್ಧಿವಂತಿಕೆಯ ಮತ್ತು ನೈತಿಕ ದಿಕ್ಸೂಚಿಯ ಧ್ವನಿಯಾಗಿ ಮುಂದುವರಿಯುತ್ತೀರಿ ಎಂದು ನಾನು ಭಾವಿಸುತ್ತೇನೆ. ನಾನು ನಿಮಗೆ ಶಾಂತಿ, ಆರೋಗ್ಯ ಮತ್ತು ಸಂತೋಷವನ್ನು ಬಯಸುತ್ತೇನೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT