ಶ್ರೀಲಂಕಾ ಮೀನುಗಾರ ವ್ಯಕ್ತಿಯ ಸ್ಥಳಾಂತರ 
ದೇಶ

ದಿಕ್ಕು ತಪ್ಪಿದ್ದ ದೋಣಿಯಿಂದ ಅನಾರೋಗ್ಯ ಪೀಡಿತ ಶ್ರೀಲಂಕಾ ಮೀನುಗಾರನ ರಕ್ಷಿಸಿದ ಭಾರತೀಯ ಕೋಸ್ಟ್ ಗಾರ್ಡ್!

ಇಂಜಿನ್ ವೈಫಲ್ಯದಿಂದ ಭಾರತೀಯ ಸಮುದ್ರದಲ್ಲಿ ದಿಕ್ಕು ತಪ್ಪಿದ್ದ ಶ್ರೀಲಂಕಾ ಮೀನುಗಾರಿಕಾ ದೋಣಿಯಲ್ಲಿ ವೈದ್ಯಕೀಯ ತುರ್ತುಸ್ಥಿತಿಯಿಂದ ಬಳಲುತ್ತಿದ್ದ ಶ್ರೀಲಂಕಾದ ಮೀನುಗಾರರೊಬ್ಬರನ್ನು ಭಾರತೀಯ ಕರಾವಳಿ ಕಾವಲು ಪಡೆ (ಐಸಿಜಿ) ಸ್ಥಳಾಂತರಿಸಿದೆ.

ನವದೆಹಲಿ: ಇಂಜಿನ್ ವೈಫಲ್ಯದಿಂದ ಭಾರತೀಯ ಸಮುದ್ರದಲ್ಲಿ ದಿಕ್ಕು ತಪ್ಪಿದ್ದ ಶ್ರೀಲಂಕಾ ಮೀನುಗಾರಿಕಾ ದೋಣಿಯಲ್ಲಿ ವೈದ್ಯಕೀಯ ತುರ್ತುಸ್ಥಿತಿಯಿಂದ ಬಳಲುತ್ತಿದ್ದ ಶ್ರೀಲಂಕಾದ ಮೀನುಗಾರರೊಬ್ಬರನ್ನು ಭಾರತೀಯ ಕರಾವಳಿ ಕಾವಲು ಪಡೆ (ಐಸಿಜಿ) ಸ್ಥಳಾಂತರಿಸಿದೆ.

ಇಂಜಿನ್ ವೈಫಲ್ಯದಿಂದ ದಿಕ್ಕು ತಪ್ಪಿದ ಶ್ರೀಲಂಕಾದ ಮೀನುಗಾರಿಕಾ ದೋಣಿ ‘ಕಲ್ಪೇನಿ’ ಬಗ್ಗೆ ಏಪ್ರಿಲ್ 1 ರಂದು ಕೊಲಂಬೋ(ಎಂಆರ್ ಸಿಸಿ) ದಿಂದ ಚೆನ್ನೈನಲ್ಲಿರುವ ಐಸಿಜಿಯ ಕಡಲ ಪಾರುಗಾಣಿಕಾ ಸಮನ್ವಯ ಕೇಂದ್ರಕ್ಕೆ (ಎಂಆರ್‌ಸಿಸಿ) ಮಾಹಿತಿ ಸ್ವೀಕರಿಸಲಾಯಿತು ಎಂದು ಐಜಿಸಿ ಹೇಳಿದೆ.

ಆರು ಸಿಬ್ಬಂದಿಯನ್ನೊಳಗೊಂಡ ಬೋಡ್ ಮಾರ್ಚ್ 22ರಂದು ಶ್ರೀಲಂಕಾದ 'ಕಾಡ್ಬೇ' ಬಂದರಿನಿಂದ ಹೊರಟಿತ್ತು. ಮಾರ್ಚ್ 28 ರಿಂದ ಯಾವುದೇ ಸಂಪರ್ಕಕ್ಕೆ ಸಿಕ್ಕಿರಲಿಲ್ಲ ಎಂದು ಕೋಸ್ಟ್ ಗಾರ್ಡ್ ಹೇಳಿದೆ. ಮಾಹಿತಿ ಪಡೆದ ನಂತರ

ICG ಗಸ್ತಿನಲ್ಲಿದ್ದ ಹಡಗುಗಳನ್ನು ಸಂಭವನೀಯ ಪ್ರದೇಶಕ್ಕೆ ತಿರುಗಿಸಿದ್ದು, ಏಪ್ರಿಲ್ 2 ರಂದು ಪುದುಚೇರಿಯಿಂದ ಸುಮಾರು 40 Nm ದೂರದಲ್ಲಿ ಶ್ರೀಲಂಕಾದ C-449 ದೋಣಿಯನ್ನು ಐಸಿಜಿ ನೋಡಿದೆ. ಕೋಸ್ಟ್ ಗಾರ್ಡ್ ತಾಂತ್ರಿಕ ತಂಡವು ಆ ದೋಣಿ ಹತ್ತಿ ಎಂಜಿನ್ ಸರಿಪಡಿಸಲು ಪ್ರಯತ್ನಿಸಿದೆ. ಆದರೆ ಬಿಡಿಭಾಗಗಳ ಕೊರತೆಯಿಂದಾಗಿ ಅದು ಕಾರ್ಯಸಾಧ್ಯವಾಗಲಿಲ್ಲ. ನಂತರ ಶ್ರೀಲಂಕಾದ ಅಧಿಕಾರಿಗಳಿಗೆ ಮಾಹಿತಿ ನೀಡಿತ್ತು.

ದೋಣಿಯಲ್ಲಿದ್ದ 44 ವರ್ಷದ ಸುಮಿತ್ ಲಲಿತಾ ಎಂಬವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ಈ ವೇಳೆಗೆ, ಬೋಟ್ ಚೆನ್ನೈನಿಂದ 100 ಎನ್ಎಂಗೆ ಚಲಿಸಿತ್ತು. ಐಸಿಜಿ ಹಡಗು ರಾಣಿ ಅಬಕ್ಕವನ್ನು ತಿರುಗಿಸಿ ಕೆಲವೇ ಗಂಟೆಗಳಲ್ಲಿ ರೋಗಿಯನ್ನು ಸ್ಥಳಾಂತರಿಸಲಾಗಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಅವರು ಗಂಭೀರ ಹೃದಯದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಶಂಕಿಸಲಾಗಿದೆ. ICGS ರಾಣಿ ಅಬ್ಬಕ್ಕ ಉತ್ತಮ ವೇಗದಲ್ಲಿ ಚೆನ್ನೈ ಕಡೆಗೆ ಸಾಗಿದರೆ, ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಅನ್ನು ಚೆನ್ನೈನಿಂದ ಪ್ರಾರಂಭಿಸಲಾಯಿತು. ಹೆಲಿಕಾಪ್ಟರ್ ರೋಗಿಯನ್ನು ಐಸಿಜಿ ಹಡಗಿನಿಂದ ಯಶಸ್ವಿಯಾಗಿ ಏರ್-ಲಿಫ್ಟ್ ಮಾಡಿ ಚೆನ್ನೈನ ಕೋಸ್ಟ್ ಗಾರ್ಡ್ ಏರ್ ಸ್ಟೇಷನ್‌ಗೆ ಕರೆತರಲಾಯಿತು. ತದನಂತರ ಶ್ರೀಲಂಕಾದ ರಾಯಭಾರಿ ಕಚೇರಿಯು ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT