ಶ್ರೀಲಂಕಾ ಮೀನುಗಾರ ವ್ಯಕ್ತಿಯ ಸ್ಥಳಾಂತರ 
ದೇಶ

ದಿಕ್ಕು ತಪ್ಪಿದ್ದ ದೋಣಿಯಿಂದ ಅನಾರೋಗ್ಯ ಪೀಡಿತ ಶ್ರೀಲಂಕಾ ಮೀನುಗಾರನ ರಕ್ಷಿಸಿದ ಭಾರತೀಯ ಕೋಸ್ಟ್ ಗಾರ್ಡ್!

ಇಂಜಿನ್ ವೈಫಲ್ಯದಿಂದ ಭಾರತೀಯ ಸಮುದ್ರದಲ್ಲಿ ದಿಕ್ಕು ತಪ್ಪಿದ್ದ ಶ್ರೀಲಂಕಾ ಮೀನುಗಾರಿಕಾ ದೋಣಿಯಲ್ಲಿ ವೈದ್ಯಕೀಯ ತುರ್ತುಸ್ಥಿತಿಯಿಂದ ಬಳಲುತ್ತಿದ್ದ ಶ್ರೀಲಂಕಾದ ಮೀನುಗಾರರೊಬ್ಬರನ್ನು ಭಾರತೀಯ ಕರಾವಳಿ ಕಾವಲು ಪಡೆ (ಐಸಿಜಿ) ಸ್ಥಳಾಂತರಿಸಿದೆ.

ನವದೆಹಲಿ: ಇಂಜಿನ್ ವೈಫಲ್ಯದಿಂದ ಭಾರತೀಯ ಸಮುದ್ರದಲ್ಲಿ ದಿಕ್ಕು ತಪ್ಪಿದ್ದ ಶ್ರೀಲಂಕಾ ಮೀನುಗಾರಿಕಾ ದೋಣಿಯಲ್ಲಿ ವೈದ್ಯಕೀಯ ತುರ್ತುಸ್ಥಿತಿಯಿಂದ ಬಳಲುತ್ತಿದ್ದ ಶ್ರೀಲಂಕಾದ ಮೀನುಗಾರರೊಬ್ಬರನ್ನು ಭಾರತೀಯ ಕರಾವಳಿ ಕಾವಲು ಪಡೆ (ಐಸಿಜಿ) ಸ್ಥಳಾಂತರಿಸಿದೆ.

ಇಂಜಿನ್ ವೈಫಲ್ಯದಿಂದ ದಿಕ್ಕು ತಪ್ಪಿದ ಶ್ರೀಲಂಕಾದ ಮೀನುಗಾರಿಕಾ ದೋಣಿ ‘ಕಲ್ಪೇನಿ’ ಬಗ್ಗೆ ಏಪ್ರಿಲ್ 1 ರಂದು ಕೊಲಂಬೋ(ಎಂಆರ್ ಸಿಸಿ) ದಿಂದ ಚೆನ್ನೈನಲ್ಲಿರುವ ಐಸಿಜಿಯ ಕಡಲ ಪಾರುಗಾಣಿಕಾ ಸಮನ್ವಯ ಕೇಂದ್ರಕ್ಕೆ (ಎಂಆರ್‌ಸಿಸಿ) ಮಾಹಿತಿ ಸ್ವೀಕರಿಸಲಾಯಿತು ಎಂದು ಐಜಿಸಿ ಹೇಳಿದೆ.

ಆರು ಸಿಬ್ಬಂದಿಯನ್ನೊಳಗೊಂಡ ಬೋಡ್ ಮಾರ್ಚ್ 22ರಂದು ಶ್ರೀಲಂಕಾದ 'ಕಾಡ್ಬೇ' ಬಂದರಿನಿಂದ ಹೊರಟಿತ್ತು. ಮಾರ್ಚ್ 28 ರಿಂದ ಯಾವುದೇ ಸಂಪರ್ಕಕ್ಕೆ ಸಿಕ್ಕಿರಲಿಲ್ಲ ಎಂದು ಕೋಸ್ಟ್ ಗಾರ್ಡ್ ಹೇಳಿದೆ. ಮಾಹಿತಿ ಪಡೆದ ನಂತರ

ICG ಗಸ್ತಿನಲ್ಲಿದ್ದ ಹಡಗುಗಳನ್ನು ಸಂಭವನೀಯ ಪ್ರದೇಶಕ್ಕೆ ತಿರುಗಿಸಿದ್ದು, ಏಪ್ರಿಲ್ 2 ರಂದು ಪುದುಚೇರಿಯಿಂದ ಸುಮಾರು 40 Nm ದೂರದಲ್ಲಿ ಶ್ರೀಲಂಕಾದ C-449 ದೋಣಿಯನ್ನು ಐಸಿಜಿ ನೋಡಿದೆ. ಕೋಸ್ಟ್ ಗಾರ್ಡ್ ತಾಂತ್ರಿಕ ತಂಡವು ಆ ದೋಣಿ ಹತ್ತಿ ಎಂಜಿನ್ ಸರಿಪಡಿಸಲು ಪ್ರಯತ್ನಿಸಿದೆ. ಆದರೆ ಬಿಡಿಭಾಗಗಳ ಕೊರತೆಯಿಂದಾಗಿ ಅದು ಕಾರ್ಯಸಾಧ್ಯವಾಗಲಿಲ್ಲ. ನಂತರ ಶ್ರೀಲಂಕಾದ ಅಧಿಕಾರಿಗಳಿಗೆ ಮಾಹಿತಿ ನೀಡಿತ್ತು.

ದೋಣಿಯಲ್ಲಿದ್ದ 44 ವರ್ಷದ ಸುಮಿತ್ ಲಲಿತಾ ಎಂಬವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ಈ ವೇಳೆಗೆ, ಬೋಟ್ ಚೆನ್ನೈನಿಂದ 100 ಎನ್ಎಂಗೆ ಚಲಿಸಿತ್ತು. ಐಸಿಜಿ ಹಡಗು ರಾಣಿ ಅಬಕ್ಕವನ್ನು ತಿರುಗಿಸಿ ಕೆಲವೇ ಗಂಟೆಗಳಲ್ಲಿ ರೋಗಿಯನ್ನು ಸ್ಥಳಾಂತರಿಸಲಾಗಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಅವರು ಗಂಭೀರ ಹೃದಯದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಶಂಕಿಸಲಾಗಿದೆ. ICGS ರಾಣಿ ಅಬ್ಬಕ್ಕ ಉತ್ತಮ ವೇಗದಲ್ಲಿ ಚೆನ್ನೈ ಕಡೆಗೆ ಸಾಗಿದರೆ, ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಅನ್ನು ಚೆನ್ನೈನಿಂದ ಪ್ರಾರಂಭಿಸಲಾಯಿತು. ಹೆಲಿಕಾಪ್ಟರ್ ರೋಗಿಯನ್ನು ಐಸಿಜಿ ಹಡಗಿನಿಂದ ಯಶಸ್ವಿಯಾಗಿ ಏರ್-ಲಿಫ್ಟ್ ಮಾಡಿ ಚೆನ್ನೈನ ಕೋಸ್ಟ್ ಗಾರ್ಡ್ ಏರ್ ಸ್ಟೇಷನ್‌ಗೆ ಕರೆತರಲಾಯಿತು. ತದನಂತರ ಶ್ರೀಲಂಕಾದ ರಾಯಭಾರಿ ಕಚೇರಿಯು ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT