ಆಪಲ್ ಐಫೋನ್ online desk
ದೇಶ

ಭಾರತ ಸೇರಿ 90 ರಾಷ್ಟ್ರಗಳಲ್ಲಿ ಐಫೋನ್ ಸ್ಪೈವೇರ್ ಅಲರ್ಟ್

ಐಫೋನ್ ತಯಾರಕ ಸಂಸ್ಥೆ ಆಪಲ್ ಭಾರತ ಸೇರಿದಂತೆ 91 ರಾಷ್ಟ್ರಗಳಲ್ಲಿರುವ ಬಳಕೆದಾರರಿಗೆ ಹೊಸ ನೊಟಿಫಿಕೇಶನ್ ನೀಡಿದ್ದು, ಸ್ಪೈ ವೇರ್ ಬಗ್ಗೆ ಎಚ್ಚರಿಕೆ ನೀಡಿದೆ.

ನವದೆಹಲಿ: ಐಫೋನ್ ತಯಾರಕ ಸಂಸ್ಥೆ ಆಪಲ್ ಭಾರತ ಸೇರಿದಂತೆ 91 ರಾಷ್ಟ್ರಗಳಲ್ಲಿರುವ ಬಳಕೆದಾರರಿಗೆ ಹೊಸ ನೊಟಿಫಿಕೇಶನ್ ನೀಡಿದ್ದು, ಸ್ಪೈ ವೇರ್ ಬಗ್ಗೆ ಎಚ್ಚರಿಕೆ ನೀಡಿದೆ. ಇತ್ತೀಚಿನ ದಿನಗಳಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಪೆಗಾಸಸ್ ಮಾಲ್ವೇರ್ ಬಗ್ಗೆಯೂ ಇದೇ ವೇಳೆ ಐಫೋನ್ ತಯಾರಕ ಸಂಸ್ಥೆ ಆಪಲ್ ಎಚ್ಚರಿಕೆ ರವಾನಿಸಿದೆ.

ಭಾರತದಲ್ಲಿ ಹಲವು ಗ್ರಾಹಕರಿಗೆ ತಮ್ಮ ಖಾಸಗಿತನ ಹಾಗೂ ಡೇಟಾ ಭದ್ರತೆ ಅಪಾಯದಲ್ಲಿರುವುದರ ಬಗ್ಗೆ ಅಲರ್ಟ್ ಬಂದಿದೆ.

2023 ರ ಅಕ್ಟೋಬರ್ ನಲ್ಲಿ ಆಪಲ್ ಇದೇ ಮಾದರಿಯಲ್ಲಿ ನೋಟಿಫಿಕೇಶನ್ ಗಳನ್ನು ಕಾಂಗ್ರೆಸ್ ನಾಯಕ ಶಶಿ ತರೂರ್, ಆಮ್ ಆದ್ಮಿ ಪಕ್ಷದ ರಾಘವ್ ಚಡ್ಡಾ, ಟಿಎಂಸಿಯ ಮಹುವಾ ಮೊಯಿತ್ರಾ ಸೇರಿದಂತೆ ಹಲವು ನಾಯಕರಿಗೆ ಕಳಿಸಿತ್ತು. ಐಫೋನ್‌ಗಳನ್ನು ಗುರಿಯಾಗಿಸಿಕೊಂಡು "ಸಂಭಾವ್ಯ ಸರ್ಕಾರಿ ಪ್ರಾಯೋಜಿತ ಸ್ಪೈವೇರ್ ದಾಳಿ" ನಡೆಯುವ ಸಾಧ್ಯತೆ ಇದೆ ಎಂದು ಎಚ್ಚರಿಸಿತ್ತು.

2021 ರಲ್ಲಿ, ಇಸ್ರೇಲಿ ಸಂಸ್ಥೆ NSO ಗ್ರೂಪ್ ಅಭಿವೃದ್ಧಿಪಡಿಸಿದ ಪೆಗಾಸಸ್ ಸಾಫ್ಟ್‌ವೇರ್ ಅನ್ನು ಬಳಸಿಕೊಂಡು ಅನಧಿಕೃತ ಕಣ್ಗಾವಲು ಆರೋಪಗಳನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ತಾಂತ್ರಿಕ ತಜ್ಞರ ಸಮಿತಿಯನ್ನು ರಚಿಸಿತ್ತು. ಆಗಸ್ಟ್ 2022 ರಲ್ಲಿ, ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯು ಸ್ಪೈವೇರ್ ಕಂಡುಬಂದಿಲ್ಲ ಎಂದು ಹೇಳಿತ್ತು. 29 ಮೊಬೈಲ್ ಫೋನ್‌ಗಳನ್ನು ಪರಿಶೀಲಿಸಲಾಗಿದೆ, ಆದರೆ ಐದು ಮೊಬೈಲ್ ಫೋನ್‌ಗಳಲ್ಲಿ ಮಾಲ್‌ವೇರ್ ಪತ್ತೆಯಾಗಿತ್ತು.

ಈಗ ಆಪಲ್ ಸಂಸ್ಥೆ ತನ್ನ ಬಳಕೆದಾರರಿಗೆ ಇತ್ತೀಚಿನ ಭದ್ರತಾ ಪ್ಯಾಚ್‌ಗಳೊಂದಿಗೆ ತಮ್ಮ ಸಾಧನಗಳನ್ನು ನವೀಕರಿಸಲು ಸಲಹೆ ನೀಡಿದೆ ಮತ್ತು ಅನುಮಾನಾಸ್ಪದ ಲಿಂಕ್‌ಗಳು ಅಥವಾ ಸಂದೇಶಗಳೊಂದಿಗೆ ಸಂವಹನ ನಡೆಸುವಾಗ ಎಚ್ಚರಿಕೆಯಿಂದಿರಿ ಎಂದು ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಪರಸ್ತ್ರೀ ಮೋಹ, ನಂಬಿಕೆ ದ್ರೋಹ: ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

SCROLL FOR NEXT