ಭಾರತೀಯ ಯೋಧನ ಕೈ ಮರು ಜೋಡಣೆ TNIE
ದೇಶ

ಭಾರತೀಯ ಯೋಧನ ತುಂಡರಿಸಿದ 'ಕೈ' ಮರು ಜೋಡಣೆ ಯಶಸ್ವಿ; ಸೇನೆ, IAF ಗೆ ಧನ್ಯವಾದ!

ಲಡಾಖ್‌ನಲ್ಲಿ ಯಂತ್ರವನ್ನು ನಿರ್ವಹಿಸುವಾಗ ಸೇನಾ ಯೋಧನೊಬ್ಬರ ಕೈ ತುಂಡಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿ, ತಕ್ಷಣವೇ ಯೋಧನನ್ನು ವಾಯುಪಡೆಯ ಸೂಪರ್ ಹರ್ಕ್ಯುಲಸ್ ವಿಮಾನ ಸಿ-130 ಜೆ ಮೂಲಕ ರಾತ್ರಿ ದೆಹಲಿಗೆ ಕರೆತರಲಾಯಿತು.

ಲಡಾಖ್‌ನಲ್ಲಿ ಯಂತ್ರವನ್ನು ನಿರ್ವಹಿಸುವಾಗ ಸೇನಾ ಯೋಧನೊಬ್ಬರ ಕೈ ತುಂಡಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿ, ತಕ್ಷಣವೇ ಯೋಧನನ್ನು ವಾಯುಪಡೆಯ ಸೂಪರ್ ಹರ್ಕ್ಯುಲಸ್ ವಿಮಾನ ಸಿ-130 ಜೆ ಮೂಲಕ ರಾತ್ರಿ ದೆಹಲಿಗೆ ಕರೆತರಲಾಯಿತು. ಸಮಯಕ್ಕೆ ಸರಿಯಾಗಿ ದೆಹಲಿ ತಲುಪಿದ ವೈದ್ಯರು ಇಲ್ಲಿನ ಸೈನಿಕ ಆಸ್ಪತ್ರೆಯಲ್ಲಿ ತುಂಡರಿಸಿದ ಕೈಯನ್ನು ಮರುಜೋಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬುಧವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಗಾಯಗೊಂಡ ಯೋಧನನ್ನು ಮೊದಲು ಲೇಹ್ ವಿಮಾನ ನಿಲ್ದಾಣಕ್ಕೆ ಕರೆತರಲಾಯಿತು. ಅಲ್ಲಿಂದ C-130J ಅವರನ್ನು ದೆಹಲಿಯ ಪಾಲಂ ಏರ್ ಫೋರ್ಸ್ ಸ್ಟೇಷನ್‌ಗೆ ಕರೆದೊಯ್ಯಿತು. ಇಲ್ಲಿನ ಸೇನೆಯ ರಿಸರ್ಚ್ ರೆಫರಲ್ (ಆರ್&ಆರ್) ಆಸ್ಪತ್ರೆಯಲ್ಲಿ ಯೋಧನಿಗೆ ತುರ್ತು ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಅದೇ ಸಮಯದಲ್ಲಿ, ಲೇಹ್ ವಿಮಾನ ನಿಲ್ದಾಣದಿಂದ ದೆಹಲಿಗೆ ತರಲು ಸುಮಾರು ನಾಲ್ಕು ಗಂಟೆಗಳನ್ನು ತೆಗೆದುಕೊಂಡಿತು ಎಂದು ಮೂಲವೊಂದು ತಿಳಿಸಿದೆ. ಸೈನ್ಯ ಮತ್ತು ವಾಯುಪಡೆಯ ನಡುವಿನ ಉತ್ತಮ ಸಮನ್ವಯವು ಗಾಯಗೊಂಡ ಯೋಧನಿಗೆ ಸಮಯಕ್ಕೆ ಸರಿಯಾಗಿ ತನ್ನ ಕೈಯನ್ನು ಒಟ್ಟಿಗೆ ಸೇರಿಸಲು ಸಾಧ್ಯವಾಯಿತು.

ತುರ್ತು ಪರಿಸ್ಥಿತಿಯಲ್ಲಿ ರೋಗಿಯನ್ನು ದೆಹಲಿಗೆ ವಿಮಾನದಲ್ಲಿ ಸಾಗಿಸುವ ಕುರಿತು ವಾಯುಪಡೆಯು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ. ಇದರಲ್ಲಿ ಯೋಧ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಚಿತ್ರವನ್ನೂ ಹಾಕಲಾಗಿದೆ. ಫಾರ್ವರ್ಡ್ ಏರಿಯಾ ಯೂನಿಟ್‌ನಲ್ಲಿ ಯಂತ್ರವನ್ನು ನಿರ್ವಹಿಸುವಾಗ ಸೇನಾ ಯೋಧ ತನ್ನ ಕೈಯನ್ನು ಕಳೆದುಕೊಂಡಿದ್ದರು ಎಂದು ಪೋಸ್ಟ್ ಹೇಳಿದೆ. ತುಂಡರಿಸಿದ ಕೈಯನ್ನು ಮತ್ತೆ ಮರುಜೋಡನೆಗೆ ತುರ್ತು ಶಸ್ತ್ರಚಿಕಿತ್ಸೆಗಾಗಿ ಆರರಿಂದ ಎಂಟು ಗಂಟೆಗಳ ಕಾಲಾವಕಾಶ ಇರುವುದರಿಂದ ಇದನ್ನು ಗಮನದಲ್ಲಿಟ್ಟುಕೊಂಡು ಒಂದು ಗಂಟೆಯೊಳಗೆ ವಾಯುಪಡೆಯ C-130J ವಿಮಾನವನ್ನು ದೆಹಲಿಗೆ ತಲುಪಲಾಯಿತು.

ದಟ್ಟವಾದ ಕತ್ತಲೆಯಲ್ಲಿ ರೋಗಿಯನ್ನು ವಿಮಾನದಲ್ಲಿ ಕರೆತರಲಾಯಿತು ಎಂದು ವಾಯುಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕತ್ತಲೆಯಲ್ಲಿ ವಿಮಾನವನ್ನು ನಿರ್ವಹಿಸಲು ರಾತ್ರಿ ದೃಷ್ಟಿ ಕನ್ನಡಕಗಳನ್ನು ಬಳಸಲಾಯಿತು. ಸಮಯಕ್ಕೆ ಸರಿಯಾಗಿ ಕತ್ತಲೆಯಲ್ಲಿ ಲಡಾಖ್‌ನಿಂದ ವಿಮಾನದ ಮೂಲಕ ಯೋಧನಿಗೆ ತಕ್ಷಣದ ವೈದ್ಯಕೀಯ ಚಿಕಿತ್ಸೆ ನೀಡಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT