ನ್ಯಾಯಾಧೀಶರು ರವಿ ದಿವಾಕರ್ 
ದೇಶ

ಜ್ಞಾನವಾಪಿಯಲ್ಲಿ ASI ಸಮೀಕ್ಷೆಗೆ ತೀರ್ಪು ನೀಡಿದ್ದ ನ್ಯಾಯಾಧೀಶರಿಗೆ ವಿದೇಶಗಳಿಂದ ಜೀವ ಬೆದರಿಕೆ ಕರೆ!

ಜ್ಞಾನವಾಪಿ ಪ್ರಕರಣದ ತೀರ್ಪು ನೀಡಿದ ನ್ಯಾಯಾಧೀಶ ರವಿ ದಿವಾಕರ್ ಅವರಿಗೆ ವಿದೇಶಿ ಕರೆಗಳಿಂದ ಬೆದರಿಕೆಗಳು ಬರುತ್ತಿವೆ. ಈ ಸಂಬಂಧ ನ್ಯಾಯಾಧೀಶ ರವಿ ದಿವಾಕರ್ ಅವರು ಬರೇಲಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದು ಮಾಹಿತಿ ನೀಡಿದ್ದಾರೆ.

ನವದೆಹಲಿ: ಜ್ಞಾನವಾಪಿ ಪ್ರಕರಣದ ತೀರ್ಪು ನೀಡಿದ ನ್ಯಾಯಾಧೀಶ ರವಿ ದಿವಾಕರ್ ಅವರಿಗೆ ವಿದೇಶಿ ಕರೆಗಳಿಂದ ಬೆದರಿಕೆಗಳು ಬರುತ್ತಿವೆ. ಈ ಸಂಬಂಧ ನ್ಯಾಯಾಧೀಶ ರವಿ ದಿವಾಕರ್ ಅವರು ಬರೇಲಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದು ಮಾಹಿತಿ ನೀಡಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಏಪ್ರಿಲ್ 15ರಂದು ರಾತ್ರಿ 8:42ಕ್ಕೆ ನ್ಯಾಯಾಧೀಶ ರವಿ ದಿವಾಕರ್ ಅವರ ವೈಯಕ್ತಿಕ ಸಂಖ್ಯೆಗೆ ಅಂತಾರಾಷ್ಟ್ರೀಯ ಸಂಖ್ಯೆಯಿಂದ ಕರೆ ಬಂದಿತ್ತು. ಕರೆ ಮಾಡಿದವರು ಜೀವ ಬೆದರಿಕೆ ಹಾಕಿದ್ದಾರೆ. ಆದರೆ, ಈ ಕರೆಯ ನಂತರ ನ್ಯಾಯಾಧೀಶರು ಯಾವುದೇ ಕರೆಗೆ ಉತ್ತರಿಸಲಿಲ್ಲ. ಈ ಬಗ್ಗೆ ಮಾಹಿತಿ ನೀಡಿದ ನ್ಯಾಯಾಧೀಶ ರವಿ ದಿವಾಕರ್ ಸಿಬ್ಬಂದಿ, ಕೆಲ ದಿನಗಳ ಹಿಂದೆ ಅಪರಿಚಿತ ಫೋನ್‌ನಿಂದ ಬೆದರಿಕೆ ಬಂದಿತ್ತು. ಈ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದು ಘಟನೆಯ ಬಗ್ಗೆ ಮಾಹಿತಿ ನೀಡಿದ್ದೇನೆ ಎಂದರು.

ಈ ಹಿಂದೆಯೂ ನ್ಯಾಯಾಧೀಶ ರವಿ ದಿವಾಕರ್ ಅವರಿಗೆ ಬೆದರಿಕೆಗಳು ಬಂದಿದ್ದವು. ಜ್ಞಾನವಾಪಿ ಪ್ರಕರಣದ ತೀರ್ಪು ನೀಡಿದ ನಂತರ, ರವಿ ದಿವಾಕರ್ ಅವರನ್ನು ಬರೇಲಿಗೆ ವರ್ಗಾಯಿಸಲಾಯಿತು. ಇದಾದ ಬಳಿಕ ನ್ಯಾಯಾಧೀಶ ರವಿ ದಿವಾಕರ್ ಹಾಗೂ ಅವರ ಕುಟುಂಬಕ್ಕೆ ಸರ್ಕಾರ ಭದ್ರತೆ ಒದಗಿಸಿತ್ತು.

ನ್ಯಾಯಾಧೀಶ ರವಿ ದಿವಾಕರ್ ಪರವಾಗಿ, ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದು ಸಂಪೂರ್ಣ ವಿಷಯದ ಬಗ್ಗೆ ತಿಳಿಸಲಾಗಿದೆ. ಏಪ್ರಿಲ್ 15ರಂದು ರಾತ್ರಿ 8:42 ಕ್ಕೆ ಅಂತರಾಷ್ಟ್ರೀಯ ಸಂಖ್ಯೆಯಿಂದ ಖಾಸಗಿ ಸಂಖ್ಯೆಗೆ ಕರೆ ಬಂದಿತ್ತು ಎಂದು ಪತ್ರದಲ್ಲಿ ಬರೆಯಲಾಗಿದೆ. ಕಳೆದ 20-25 ದಿನಗಳಲ್ಲಿ ಅಂತಾರಾಷ್ಟ್ರೀಯ ಸಂಖ್ಯೆಗಳಿಂದ ಹಲವು ಕರೆಗಳು ಮತ್ತು ಬೆದರಿಕೆಗಳು ಬಂದಿವೆ.

ನ್ಯಾಯಾಧೀಶ ರವಿ ದಿವಾಕರ್ ಅವರು 2010ರ ಬರೇಲಿ ಗಲಭೆ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಸ್ವೀಕರಿಸಿದರು. ದಂಗೆಯ ಆರೋಪದಲ್ಲಿ ಮೌಲಾನಾ ತೌಕೀರ್ ರಜಾನನ್ನು ಪ್ರಮುಖ ಆರೋಪಿ ಎಂದು ಪರಿಗಣಿಸಿದ್ದಾರೆ. ಆದರೆ, ಈ ಇಡೀ ವಿಚಾರದಲ್ಲಿ ಮೌಲಾನಾ ತೌಕೀರ್‌ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದು, ಅಲ್ಲಿ ಅವರಿಗೆ ರಿಲೀಫ್ ಸಿಕ್ಕಿತ್ತು. 2010ರ ಗಲಭೆಯಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿ ಬೆಂಕಿಗಾಹುತಿಯಾಗಿತ್ತು. ಬರೇಲಿಯಲ್ಲಿ 27 ದಿನಗಳ ಕಾಲ ಕರ್ಫ್ಯೂ ಹೇರಲಾಗಿತ್ತು. ಮೌಲಾನಾ ತೌಕೀರ್ ರಜಾ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಧೀಶ ರವಿ ದಿವಾಕರ್ ಹೆಚ್ಚು ಸುದ್ದಿ ಮಾಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT