ಮಾಧವಿ ಪುರಿ ಬುಚ್ TNIE
ದೇಶ

ಮಾಧವಿ SEBIಗೆ ಸೇರುವ ಮೊದಲೇ IIFL ಫಂಡ್‌ನಲ್ಲಿ ಖಾಸಗಿ ವ್ಯಕ್ತಿಯಾಗಿ ಹೂಡಿಕೆ ಮಾಡಲಾಗಿತ್ತು: ಬುಚ್ ದಂಪತಿ

ಐಐಎಫ್‌ಎಲ್ ವೆಲ್ತ್ ಮ್ಯಾನೇಜ್‌ಮೆಂಟ್‌ನಿಂದ ಪ್ರಚಾರ ಮಾಡಿದ ಫಂಡ್‌ನಲ್ಲಿ ತಮ್ಮ ಹೂಡಿಕೆಯನ್ನು ಸಿಂಗಾಪುರ ಮೂಲದ ಖಾಸಗಿ ಪ್ರಜೆಗಳಾಗಿದ್ದಾಗ ಮಾಡಲಾಗಿತ್ತು. ಅದು ಮಾಧವಿ ಸೆಬಿಗೆ ಸೇರುವ ಎರಡು ವರ್ಷಗಳ ಮೊದಲು ಎಂದು ಹೇಳಿದ್ದಾರೆ.

ನವದೆಹಲಿ: ಅಮೆರಿಕದ ಶಾರ್ಟ್‌ ಶೆಲ್ಲರ್‌ ಕಂಪನಿ ಹಿಂಡೆನ್‌ಬರ್ಗ್ ಮಾರುಕಟ್ಟೆಯ ಕಾವಲುಗಾರ ಸೆಬಿಯ ವಿಶ್ವಾಸಾರ್ಹತೆಯ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಿದೆ. ಅಲ್ಲದೆ ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಮತ್ತು ಅವರ ಪತಿ ಧವಲ್ ಅವರ ಚಾರಿತ್ರ್ಯ ಹರಣದಲ್ಲಿ ತೊಡಗಿದೆ ಎಂದು ಬುಚ್ ದಂಪತಿ ಹೇಳಿದ್ದಾರೆ.

ಹಿಂಡೆನ್‌ಬರ್ಗ್ ಮಾಡಿದ ಆರೋಪಗಳಿಗೆ ಪ್ರತಿಕ್ರಿಯೆಯಾಗಿ ಬಚ್‌ ದಂಪತಿ ಸುದೀರ್ಘವಾಗಿ ವಿವರಿಸಿದ್ದು, ಐಐಎಫ್‌ಎಲ್ ವೆಲ್ತ್ ಮ್ಯಾನೇಜ್‌ಮೆಂಟ್‌ನಿಂದ ಪ್ರಚಾರ ಮಾಡಿದ ಫಂಡ್‌ನಲ್ಲಿ ತಮ್ಮ ಹೂಡಿಕೆಯನ್ನು ಸಿಂಗಾಪುರ ಮೂಲದ ಖಾಸಗಿ ಪ್ರಜೆಗಳಾಗಿದ್ದಾಗ ಮಾಡಲಾಗಿತ್ತು. ಅದು ಮಾಧವಿ ಸೆಬಿಗೆ ಸೇರುವ ಎರಡು ವರ್ಷಗಳ ಮೊದಲು ಎಂದು ಹೇಳಿದ್ದಾರೆ. 2019ರಿಂದ ಅಮೆರಿಕದ ಖಾಸಗಿ ಈಕ್ವಿಟಿ ಪ್ರಮುಖ ಬ್ಲಾಕ್‌ಸ್ಟೋನ್‌ನ ಹಿರಿಯ ಸಲಹೆಗಾರ ಧವಲ್, ಅಮೆರಿಕ ಪ್ರಧಾನ ಕಛೇರಿಯ ಹೂಡಿಕೆದಾರರ ರಿಯಲ್ ಎಸ್ಟೇಟ್ ಭಾಗದೊಂದಿಗೆ ಸಂಬಂಧ ಹೊಂದಿಲ್ಲ ಎಂದು ಅವರು ಹೇಳಿದರು.

ಮಾಧವಿ ಅವರು 2017ರಲ್ಲಿ SEBI ನಲ್ಲಿ ಸಂಪೂರ್ಣ ಸಮಯದ ಸದಸ್ಯರಾಗಿ ನೇಮಕಗೊಂಡ ನಂತರ, ಅವರ ಎರಡು ಸಲಹಾ ಕಂಪನಿಗಳು ನಿಷ್ಕ್ರಿಯಗೊಂಡವು. ಭಾರತದಲ್ಲಿ ವಿವಿಧ ನಿಯಂತ್ರಕ ಉಲ್ಲಂಘನೆಗಳಿಗಾಗಿ ಹಿಂಡೆನ್‌ಬರ್ಗ್‌ಗೆ ಶೋಕಾಸ್ ನೋಟಿಸ್ ಕಳುಹಿಸಲಾಗಿದೆ. ನೋಟಿಸ್‌ಗೆ ಪ್ರತಿಕ್ರಿಯಿಸುವ ಬದಲು, ಸೆಬಿಯ ವಿಶ್ವಾಸಾರ್ಹತೆಯ ಮೇಲೆ ದಾಳಿ ಮಾಡಿ ಸೆಬಿ ಅಧ್ಯಕ್ಷರ ಚಾರಿತ್ರ್ಯ ಹರಣ ಮಾಡಲು ಪ್ರಯತ್ನಿಸುತ್ತಿರುವುದು ದುರದೃಷ್ಟಕರ ಎಂದು ಬುಚ್ ದಂಪತಿ ಹೇಳಿದ್ದಾರೆ.

ಹಿಂಡೆನ್‌ಬರ್ಗ್ ತನ್ನ ಇತ್ತೀಚಿನ ವರದಿಯನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ಬುಚ್ ಆರೋಪಗಳನ್ನು ಆಧಾರರಹಿತ ಎಂದು ಹೇಳಿದ್ದರು. ಹಿಂಡೆನ್‌ಬರ್ಗ್ ಪ್ರಕಾರ, ಮಾಧವಿ ಮತ್ತು ಅವರ ಪತಿ ಬರ್ಮುಡಾ ಮತ್ತು ಮಾರಿಷಸ್‌ನಲ್ಲಿ ನೆರಳಿನ ಕಡಲಾಚೆಯ ನಿಧಿಗಳಲ್ಲಿ ಅಘೋಷಿತ ಹೂಡಿಕೆಗಳನ್ನು ಮಾಡಿದ್ದಾರೆ. ಅದಾನಿ ಸಮೂಹದ ಕಂಪನಿಗಳ ಷೇರುಗಳ ಬೆಲೆಯನ್ನು ಹೆಚ್ಚಿಸಲು ಮತ್ತು ಹಣವನ್ನು ದುರುಪಯೋಗಪಡಿಸಿಕೊಳ್ಳಲು ವಿನೋದ್ ಅದಾನಿ ಬಳಸಿದ್ದಾರೆ ಎನ್ನಲಾದ ಅದೇ ನಿಧಿಗಳಾಗಿವೆ ಎಂದು ಅವರು ಹೇಳಿದರು.

ಹಿಂಡೆನ್‌ಬರ್ಗ್‌ನ ಹೊಸ ವರದಿ ಏನು?

ಆಗಸ್ಟ್ 10 ರಂದು ಬಿಡುಗಡೆಯಾದ ಇತ್ತೀಚಿನ ಹಿಂಡೆನ್‌ಬರ್ಗ್ ಸಂಶೋಧನಾ ವರದಿಯು ಪ್ರಸ್ತುತ ಸೆಬಿ ಮುಖ್ಯಸ್ಥ ಮಾಧಬಿ ಬುಚ್ ಮತ್ತು ಅವರ ಪತಿ ಅದಾನಿ ಹಣ ದುರುಪಯೋಗ ಹಗರಣದಲ್ಲಿ ಬಳಸಲಾದ ಕಡಲಾಚೆಯ ನಿಧಿಗಳಲ್ಲಿ ಪಾಲನ್ನು ಹೊಂದಿದ್ದಾರೆ ಎಂದು ಆರೋಪಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT