ಒಂದು ಹಾವಿನ ಮೇಲೆರಗಿದ 3 ಮುಂಗುಸಿಗಳು 
ದೇಶ

Patna Airport ರನ್ ವೇ ನಲ್ಲಿ ಬದ್ಧ ವೈರಿಗಳ ಕಾಳಗ: ನಾಗರ ಹಾವಿನ ಮೇಲೆ 3 ಮುಂಗುಸಿಗಳ ದಾಳಿ, ಅಪರೂಪದ Video

ಹಾವು ಮತ್ತು ಮುಂಗುಸಿ ಜೈವಿಕವಾಗಿ ಬದ್ಧವೈರಿಗಳು.. ಇವುಗಳ ಕದನ ಮನುಷ್ಯಕ ಕಣ್ಣಿಗೆ ಕಾಣಸಿಗುವುದು ಅಪರೂಪ. ಆದರೆ ಬಿಹಾರ ರಾಜಧಾನಿ ಪಾಟ್ನಾದ ವಿಮಾನ ನಿಲ್ದಾಣದ ರನ್ ವೇ ಮೇಲೆಯೇ ಇಂತಹ ಅಪರೂಪದ ದೃಶ್ಯ ಕಂಡಿದೆ.

ಪಾಟ್ನಾ: ವಿಮಾನ ನಿಲ್ದಾಣದ ರನ್ ವೇ ನಲ್ಲಿಯೇ ಬದ್ಧ ವೈರಿಗಳಾದ ಹಾವು ಮತ್ತು ಮುಂಗುಸಿಗಳು ಕಾದಾಡಿರುವ ವಿಡಿಯೋ ವೈರಲ್ ಆಗುತ್ತಿದೆ.

ಹೌದು.. ಹಾವು ಮತ್ತು ಮುಂಗುಸಿ ಜೈವಿಕವಾಗಿ ಬದ್ಧವೈರಿಗಳು.. ಇವುಗಳ ಕದನ ಮನುಷ್ಯಕ ಕಣ್ಣಿಗೆ ಕಾಣಸಿಗುವುದು ಅಪರೂಪ. ಆದರೆ ಬಿಹಾರ ರಾಜಧಾನಿ ಪಾಟ್ನಾದ ವಿಮಾನ ನಿಲ್ದಾಣದ ರನ್ ವೇ ಮೇಲೆಯೇ ಇಂತಹ ಅಪರೂಪದ ದೃಶ್ಯ ಕಂಡಿದೆ.

ಹೌದು.. ಒಂದು ನಾಗರಹಾವಿನೊಂದಿಗೆ ಮೂರು ಮುಂಗುಸಿಗಳು ಕಾದಾಡಿರುವ ಅಪರೂಪದ ವಿಡಿಯೋವನ್ನು ಪಾಟ್ನಾ ವಿಮಾನ ನಿಲ್ದಾಣದ ಸಿಬ್ಬಂದಿಗಳು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದ್ದಾರೆ. ಆರಂಭದಲ್ಲಿ ನಾಗರ ಹಾವು ರನ್ ವೇ ಮೇಲೆ ಬಂದಿದ್ದು, ಕೆಲ ಹೊತ್ತು ಹಾವು ತನ್ನ ಮಾರ್ಗದಲ್ಲಿ ಸಾಗಿತ್ತು. ಆದರೆ ಇದನ್ನು ಕಂಡ ಮುಂಗುಸಿಯೊಂದು ಮೊದಲು ಹಾವಿನ ಮೇಲೆರಗಿದೆ. ಕೂಡಲೇ ಮತ್ತೆ ಎರಡು ಮುಂಗುಸಿಗಳು ಅದರೊಟ್ಟಿಗೆ ಸೇರಿ ಹಾವಿನ ಮೇಲೆ ದಾಳಿ ಮಾಡಿವೆ.

ಮೂರು ಮುಂಗುಸಿಗಳನ್ನು ಏಕಕಾಲದಲ್ಲಿ ಎದುರಿಸಿದ ಹಾವು ತನ್ನ ಹೆಡೆ ಬಿಚ್ಚಿ ತನ್ನನ್ನು ತಾನು ಕಾಪಾಡಿಕೊಳ್ಳಲು ಹರಸಾಹಸಪಟ್ಟಿದೆ. ಇವಿಷ್ಟೂ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.

ನೈಸರ್ಗಿಕ ಶತ್ರುಗಳು

ಮುಂಗುಸಿಗಳು ಮತ್ತು ಹಾವುಗಳು ಶತಮಾನಗಳಿಂದ ನೈಸರ್ಗಿಕ ಶತ್ರುಗಳಾಗಿವೆ. ಅವುಗಳ ಪೈಪೋಟಿಗೆ ಮುಖ್ಯ ಕಾರಣವೆಂದರೆ ಪರಭಕ್ಷಕ: ಹಾವುಗಳು ಮುಂಗುಸಿಗಳು ಮತ್ತು ಅವುಗಳ ಮರಿಗಳನ್ನು ಬೇಟೆಯಾಡುತ್ತವೆ, ಆದರೆ ಮುಂಗುಸಿಗಳು ಹಾವುಗಳನ್ನು ಬೇಟೆಯಾಡಿ ತಿನ್ನುತ್ತವೆ. ಈ ಪರಭಕ್ಷಕ-ಬೇಟೆಯ ಸಂಬಂಧವು ಆಕ್ರಮಣ ಮತ್ತು ರಕ್ಷಣೆಯ ಚಕ್ರಕ್ಕೆ ದಾರಿ ಮಾಡಿಕೊಟ್ಟಿದೆ, ಪ್ರತಿ ಜಾತಿಯು ಇತರರ ತಂತ್ರಗಳನ್ನು ಎದುರಿಸಲು ಹೊಂದಿಕೊಳ್ಳುತ್ತದೆ.

ಅವರ ದ್ವೇಷಕ್ಕೆ ಇನ್ನೊಂದು ಕಾರಣವೆಂದರೆ ಸಂಪನ್ಮೂಲಗಳಿಗಾಗಿ ಪೈಪೋಟಿ. ಮುಂಗುಸಿಗಳು ಮತ್ತು ಹಾವುಗಳೆರಡೂ ಆಹಾರ, ಆಶ್ರಯ ಮತ್ತು ಪ್ರದೇಶಕ್ಕಾಗಿ ಪೈಪೋಟಿ ನಡೆಸುತ್ತವೆ. ಮುಂಗುಸಿಗಳು ನೈಸರ್ಗಿಕ ನುರಿತ ಬೇಟೆಗಾರ ಪ್ರಾಣಿಗಳಾಗಿವೆ. ಅವು ಸಣ್ಣ ಸಸ್ತನಿಗಳು, ಪಕ್ಷಿಗಳು ಮತ್ತು ಸರೀಸೃಪಗಳನ್ನು ತಿನ್ನುತ್ತವೆ, ಆದರೆ ಹಾವುಗಳು ಮಾಂಸಾಹಾರಿಗಳಾಗಿದ್ದು, ಒಂದೇ ರೀತಿಯ ಪ್ರಾಣಿಗಳನ್ನು ಬೇಟೆಯಾಡುತ್ತವೆ.

ಈ ಸ್ಪರ್ಧೆಯು ಅವರ ಪೈಪೋಟಿಯನ್ನು ಇನ್ನಷ್ಟು ತೀವ್ರಗೊಳಿಸುತ್ತದೆ, ಏಕೆಂದರೆ ಅವರು ತಮ್ಮ ಆವಾಸಸ್ಥಾನಗಳಲ್ಲಿ ಅದೇ ಸಂಪನ್ಮೂಲಗಳಿಗಾಗಿ ಸ್ಪರ್ಧಿಸುತ್ತಲೇ ಇರುತ್ತವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!