ಸೂಪರ್ ಬ್ಲೂ ಮೂನ್ (ಸಂಗ್ರಹ ಚಿತ್ರ) 
ದೇಶ

ಅತ್ಯಪರೂಪದ Super Blue Moon; ಆಕಾಶದಲ್ಲಿನ ಪವಾಡಕ್ಕೆ ಕ್ಷಣಗಣನೆ

ಆಕಾಶದಲ್ಲಿ ಅಪರೂಪದ ವಿಸ್ಮಯ ಘಟನೆಗೆ ಕ್ಷಣಗಣನೆ ಆರಂಭವಾಗಿದ್ದು, ಈ ಬಾರಿ ಆಗಸ್ಟ್ 19ರ ರಾಖಿ ಹುಣ್ಣಿಮೆಯಂದು ಆಕಾಶದಲ್ಲಿ ನೀಲಿ ಚಂದ್ರ ನೋಡಲು ಕಾಣಸಿಗಲಿದ್ದಾನೆ.

ನವದೆಹಲಿ: ಇಂದು ರಾಖಿ ಹುಣ್ಣಿಮೆಯಂದು ಆಕಾಶದಲ್ಲಿ ಅಪರೂಪದ ದೃಶ್ಯ ಕಾಣಿಸಲಿದ್ದು, ''ಸೂಪರ್ ಬ್ಲೂ ಮೂನ್''ಗೆ ಕ್ಷಣಗಣನೆ ಆರಂಭವಾಗಿದೆ.

ಈ ಬಾರಿ ಆಗಸ್ಟ್ 19ರ ರಾಖಿ ಹುಣ್ಣಿಮೆಯಂದು ಆಕಾಶದಲ್ಲಿ ನೀಲಿ ಚಂದ್ರ ನೋಡಲು ಕಾಣಸಿಗಲಿದ್ದಾನೆ. ಸೂಪರ್‌ಮೂನ್‌ಗಳು ಸಾಮಾನ್ಯವಾಗಿ ವರ್ಷಕ್ಕೆ 3-4 ಬಾರಿ ಸಂಭವಿಸುತ್ತವೆ.

ಈ ತಿಂಗಳು, ಸೂಪರ್ ಮೂನ್ ಮತ್ತು ಬ್ಲೂ ಮೂನ್ ಒಂದುಗೂಡುವ ಅಪರೂಪದ ಖಗೋಳ ಘಟನೆಯನ್ನು ನಾವು ವೀಕ್ಷಿಸಬಹುದು. ಈ ಅಪರೂಪದ ಖಗೋಳ ವಿದ್ಯಮಾನವನ್ನು ಹಲವು ವರ್ಷಗಳಿಗೊಮ್ಮೆ ಮಾತ್ರ ಕಾಣಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಸಾಮಾನ್ಯವಾಗಿ, ಆಗಸ್ಟ್‌ನಲ್ಲಿ ಬರುವ ಹುಣ್ಣಿಮೆಯನ್ನು ’ಸ್ಟರ್ಜನ್ ಮೂನ್ ಎಂದು ಕರೆಯಲಾಗುತ್ತದೆ. ಸೂಪರ್ ಬ್ಲೂ ಮೂನ್ ಆಗಸ್ಟ್‌ನಲ್ಲಿ ಕಾಣಿಸಿಕೊಳ್ಳುವುದರಿಂದ ಇದನ್ನು 'ಸ್ಟರ್ಜನ್ ಮೂನ್ ಎಂದೂ ಕರೆಯಲಾಗುತ್ತದೆ.

ಯಾವಾಗ ಸಂಭವಿಸುತ್ತದೆ ''ಸೂಪರ್ ಬ್ಲೂ ಮೂನ್''?

ಭಾರತದ ಕಾಲಮಾನದ ಪ್ರಕಾರ ಆಗಸ್ಟ್ 19 ಅಂದರೆ ಇಂದು ರಾತ್ರಿ 11-56ಕ್ಕೆ ಚಂದ್ರನು ಸಾಮಾನ್ಯ ದಿನಗಳಿಗಿಂತ 30 ಪ್ರತಿಶತದಷ್ಟು ಪ್ರಕಾಶಮಾನವಾಗಿ ಮತ್ತು 14 ಪ್ರತಿಶತದಷ್ಟು ದೊಡ್ಡದಾಗಿ ಕಾಣಿಸುತ್ತಾನೆ. ಈ ವರ್ಷದ 4 ಸೂಪರ್ ಮೂನ್‌ಗಳಲ್ಲಿ ಇದು ಮೊದಲನೆಯದಾಗಿದೆ.ಇನ್ನುಳಿದ ಮೂರು ಮುಂಬರುವ ಸೆಪ್ಟೆಂಬರ್ 17, ಅಕ್ಟೋಬರ್ 17 ಮತ್ತು ನವೆಂಬರ್ 15 ರಂದು ಕಾಣಿಸಲಿದೆ ಎಂದು ಹೇಳಲಾಗಿದೆ.

ಚಂದ್ರನು ಭೂಮಿಗೆ ಹತ್ತಿರ ಬಂದಾಗ ಈ ಸೂಪರ್ ಮೂನ್‌ಗಳು ರೂಪುಗೊಳ್ಳುತ್ತವೆ. ಚಂದ್ರನು ಭೂಮಿಗೆ 90 ಪ್ರತಿಶತದಷ್ಟು ಹತ್ತಿರ ಬಂದಾಗ ಸೂಪರ್ ಮೂನ್ ಸಂಭವಿಸುತ್ತದೆ. ಸೂಪರ್‌ಮೂನ್ ಎಂಬ ಪದವನ್ನು ಖಗೋಳಶಾಸ್ತ್ರಜ್ಞ ರಿಚರ್ಡ್ ನೊಲ್ಲೆ ಅವರು 1979 ರಲ್ಲಿ ಸೃಷ್ಟಿಸಿದ್ದರು.

ಈ ಸೂಪರ್ ಬ್ಲೂ ಮೂನ್ ಎಲ್ಲರಿಗೂ ಕಾಣಲಿದ್ದು, ವಾಯುಮಾಲಿನ್ಯವಿಲ್ಲದ ಪ್ರದೇಶಗಳಲ್ಲಿ ಇದು ಹೆಚ್ಚು ಸ್ಪಷ್ಟವಾಗಿದೆ ಕಾಣಲಿದೆ. ಸೂಪರ್ ಮೂನ್ ನಾವು ನಮ್ಮ ಬರಿ ಕಣ್ಣುಗಳಿಂದ ನೋಡಬಹುದಾದರೂ, ಬೈನಾಕ್ಯುಲರ್ ಅಥವಾ ದೂರದರ್ಶಕವನ್ನು ಬಳಸಿಕೊಂಡು ನಾವು ಅದನ್ನು ಹೆಚ್ಚು ಸ್ಪಷ್ಟವಾಗಿ ನೋಡಬಹುದು. ಈ ಸೂಪರ್ ಮೂನ್ ಕಣ್ಣಿಗೆ ಹಾನಿಯಾಗದ ರೀತಿಯಲ್ಲಿ ನೋಡಲು ವಿಜ್ಞಾನಿಗಳು ಸೂಚಿಸಿದ್ದು, ಈ ಸೂಪರ್ ಬ್ಲೂ ಮೂನ್ ನೋಡಲು ಪ್ರಪಂಚದಾದ್ಯಂತ ಜನರು ಕಾತರದಿಂದ ಕಾಯುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT