ಸಾಂದರ್ಭಿಕ ಚಿತ್ರ  
ದೇಶ

ದೇಶದಲ್ಲಿ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಸುರಕ್ಷತೆ: ರಾಷ್ಟ್ರೀಯ ಕಾರ್ಯಪಡೆ ರಚಿಸಿದ ಸುಪ್ರೀಂ ಕೋರ್ಟ್

ಸರ್ಜನ್ ವೈಸ್ ಅಡ್ಮಿರಲ್ ಆರ್ತಿ ಸರಿನ್, ಡಾ ನಾಗೇಶ್ವರ ರೆಡ್ಡಿ-- ಏಷ್ಯನ್ ಇನ್‌ಸ್ಟಿಟ್ಯೂಟ್ ಆಫ್ ನ್ಯಾಷನಲ್ ಗ್ಯಾಸ್ಟ್ರೋಲಜಿಯ ವ್ಯವಸ್ಥಾಪಕ ನಿರ್ದೇಶಕರನ್ನು ಒಳಗೊಂಡ ರಾಷ್ಟ್ರೀಯ ಕಾರ್ಯಪಡೆಯನ್ನು ಸುಪ್ರೀಂ ಕೋರ್ಟ್ ರಚಿಸಿದೆ.

ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠವು ಕೋಲ್ಕತ್ತಾದಲ್ಲಿ ಯುವ ವೈದ್ಯೆಯ ಆಘಾತಕಾರಿ ಅತ್ಯಾಚಾರ-ಕೊಲೆ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿದೆ.

ಸರ್ಜನ್ ವೈಸ್ ಅಡ್ಮಿರಲ್ ಆರ್ತಿ ಸರಿನ್, ಡಾ ನಾಗೇಶ್ವರ ರೆಡ್ಡಿ-- ಏಷ್ಯನ್ ಇನ್‌ಸ್ಟಿಟ್ಯೂಟ್ ಆಫ್ ನ್ಯಾಷನಲ್ ಗ್ಯಾಸ್ಟ್ರೋಲಜಿಯ ವ್ಯವಸ್ಥಾಪಕ ನಿರ್ದೇಶಕರನ್ನು ಒಳಗೊಂಡ ರಾಷ್ಟ್ರೀಯ ಕಾರ್ಯಪಡೆಯನ್ನು ಸುಪ್ರೀಂ ಕೋರ್ಟ್ ರಚಿಸಿದೆ.

ರಾಷ್ಟ್ರೀಯ ಕಾರ್ಯಪಡೆಯು ದೇಶದಲ್ಲಿ ವೈದ್ಯೆಯರ ಸುರಕ್ಷತೆ ಮತ್ತು ಇತರ ಸಮಸ್ಯೆಗಳನ್ನು ಪರಿಶೀಲಿಸುತ್ತದೆ. ಲಿಂಗ ಆಧಾರಿತ ಹಿಂಸಾಚಾರ, ಇಂಟರ್ನಿಗಳು, ನಿವಾಸಿ, ಅನಿವಾಸಿ ವೈದ್ಯರಿಗೆ ಕೆಲಸದ ಸ್ಥಳದಲ್ಲಿ ಗೌರವ ಮತ್ತು ಸುರಕ್ಷತೆ ಒದಗಿಸಲು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲು ಪರಿಗಣಿಸುತ್ತದೆ.

ಅತ್ಯಾಚಾರ ಪ್ರಕರಣದ ತನಿಖೆಯ ಸ್ಥಿತಿಗತಿ ಕುರಿತು ವರದಿ ಸಲ್ಲಿಸುವಂತೆ ಸಿಬಿಐಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದು, ಆಸ್ಪತ್ರೆಗಳಲ್ಲಿ ಗುಂಪು ದಾಳಿಯ ಘಟನೆಗಳ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ಪಶ್ಚಿಮ ಬಂಗಾಳ ಸರ್ಕಾರವನ್ನು ಸುಪ್ರೀಂ ಕೋರ್ಟ್ ಕೇಳಿದೆ.

ಕಾರ್ಯಪಡೆಯು ವೈದ್ಯಕೀಯ ವೃತ್ತಿಪರರ ಸುರಕ್ಷತೆ, ಯೋಗಕ್ಷೇಮ ಮತ್ತು ಆರೋಗ್ಯ ರಕ್ಷಣೆ ಸಮಸ್ಯೆಗಳಿಗೆ ಸಂಬಂಧಿಸಿದ ಇತರ ವಿಷಯಗಳನ್ನು ಪರಿಶೀಲಿಸಬೇಕು ಎಂದು ಅದು ಹೇಳಿದೆ.

ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲು NTF ಈ ಕೆಳಗಿನವುಗಳನ್ನು ಪರಿಗಣಿಸುತ್ತದೆ:

  • ಲಿಂಗ ಆಧಾರಿತ ಹಿಂಸೆಯನ್ನು ತಡೆಯುವುದು.

  • ಇಂಟರ್ನ್‌ಗಳು, ನಿವಾಸಿ, ಅನಿವಾಸಿ ವೈದ್ಯರ ಗೌರವಾನ್ವಿತ ಕೆಲಸವನ್ನು ಸಿದ್ಧಪಡಿಸುವ ರಾಷ್ಟ್ರೀಯ ಯೋಜನೆ

  • ಹೆಚ್ಚುವರಿ ಭದ್ರತೆಗಾಗಿ ಅಗತ್ಯವಿರುವ ತುರ್ತು ಕೋಣೆಯ ಪ್ರದೇಶಗಳು

  • ಶಸ್ತ್ರಾಸ್ತ್ರಗಳು ಪ್ರವೇಶಿಸದಂತೆ ಬ್ಯಾಗೇಜ್ ಸ್ಕ್ರೀನಿಂಗ್

  • ರೋಗಿಗಳಲ್ಲದಿದ್ದರೆ ಮಿತಿ ಮೀರಿ ಜನರನ್ನು ಆಸ್ಪತ್ರೆಗಳಲ್ಲಿ ಬಿಡದಿರುವುದು

  • ಜನಸಂದಣಿಯನ್ನು ನಿರ್ವಹಿಸಲು ಭದ್ರತೆ

  • ವೈದ್ಯರಿಗೆ ವಿಶ್ರಾಂತಿ ಕೊಠಡಿಗಳು ಮತ್ತು ವೈದ್ಯರು, ದಾದಿಯರ ವಿಶ್ರಾಂತಿಗಾಗಿ ಲಿಂಗ-ತಟಸ್ಥ ಸ್ಥಳಗಳು

  • ಬಯೋಮೆಟ್ರಿಕ್ಸ್ ಮತ್ತು ಮುಖ ಗುರುತಿಸುವಿಕೆಯನ್ನು ಹೊಂದಿರುವ ಪ್ರದೇಶಗಳು

  • ಎಲ್ಲಾ ಪ್ರದೇಶಗಳಲ್ಲಿ ಸರಿಯಾದ ಬೆಳಕು, ಎಲ್ಲಾ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಕೆ

  • ವೈದ್ಯಕೀಯ ವೃತ್ತಿಯವರಿಗೆ ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಸಾರಿಗೆ ಲಭ್ಯತೆ

  • ದುಃಖ ಮತ್ತು ಬಿಕ್ಕಟ್ಟನ್ನು ನಿಭಾಯಿಸಲು ಕಾರ್ಯಾಗಾರಗಳನ್ನು ನಡೆಸುವುದು

  • ಸಾಂಸ್ಥಿಕ ಸುರಕ್ಷತಾ ಕ್ರಮಗಳ ತ್ರೈಮಾಸಿಕ ಲೆಕ್ಕಪರಿಶೋಧನೆ

  • ಕಾಲ್ತುಳಿತಕ್ಕೆ ಅನುಗುಣವಾಗಿ ಪೊಲೀಸ್ ಪಡೆಯನ್ನು ಸ್ಥಾಪಿಸುವುದು

  • ವೈದ್ಯಕೀಯ ಸಂಸ್ಥೆಗಳಿಗೆ POSH ಕಾಯಿದೆ ಅನ್ವಯವಾಗುವಂತೆ ICC ರಚನೆ

  • ತುರ್ತು ವೈದ್ಯಕೀಯ ವೃತ್ತಿಪರರಿಗೆ ಸಹಾಯವಾಣಿ ಸಂಖ್ಯೆ.

  • ಹೆಚ್ಚುವರಿ ಭದ್ರತೆಗಾಗಿ ಅಗತ್ಯವಿರುವ ತುರ್ತು ಕೋಣೆಯ ಪ್ರದೇಶಗಳು

ಎನ್‌ಟಿಎಫ್ ಈ ಆದೇಶದ ದಿನಾಂಕದಿಂದ 3 ವಾರಗಳಲ್ಲಿ ಮಧ್ಯಂತರ ವರದಿಯನ್ನು ಮತ್ತು 2 ತಿಂಗಳಲ್ಲಿ ಅಂತಿಮ ವರದಿಯನ್ನು ಸಲ್ಲಿಸಬೇಕಾಗಿದೆ ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ವೆನೆಜುವೆಲಾ ಪರಿಸ್ಥಿತಿ ನಿಮಗೂ ಬರಬಹುದು.. ತಡ ಮಾಡದೇ ನಮ್ ಜೊತೆ ಒಪ್ಪಂದ ಮಾಡ್ಕೊಳ್ಳಿ': ಕ್ಯೂಬಾಗೂ Donald Trump ಎಚ್ಚರಿಕೆ!

ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ತ್ರಿಪುರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ: ಉನಕೋಟಿಯಲ್ಲಿ ಮಸೀದಿ-ಮುಸ್ಲಿಂ ಅಂಗಡಿಗಳಿಗೆ ಬೆಂಕಿ

ಒಂದು ವಾರದ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್ಚಾರ್ಜ್!

Tubelight in his head: ಹಿಮಂತಾ ಬಿಸ್ವಾ ಶರ್ಮಾ ವಿರುದ್ಧ AIMIM ಮುಖ್ಯಸ್ಥ ಓವೈಸಿ ಕಿಡಿ! ಏನಿದು ವಿವಾದ?

SCROLL FOR NEXT