ಹೈಬ್ರಿಡ್ ಮರುಬಳಕೆ ರಾಕೆಟ್ 'RHUMI-1' 
ದೇಶ

Video: ಭಾರತದ ಮೊದಲ ಹೈಬ್ರಿಡ್ ಮರುಬಳಸಬಹುದಾದ ರಾಕೆಟ್ RHUMI-1 ಉಡಾವಣೆ ಯಶಸ್ವಿ

ತಮಿಳುನಾಡಿನ ಚೆನ್ನೈನ ಈಸ್ಟ್ ಕೋಸ್ಟ್​ಲೈನ್​ನಿಂದ 'RHUMI-1' ರಾಕೆಟ್ ಅನ್ನು ಇಂದು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದ್ದು, ಖಾಸಗಿ ಸಂಸ್ಥೆಯಾದ ಸ್ಪೇಸ್​ಝೋನ್ ಈ ಮರುಬಳಕೆ ರಾಕೆಟ್ ಅನ್ನು ಅಭಿವೃದ್ಧಿಪಡಿಸಿದೆ.

ಚೆನ್ನೈ: ಭಾರತದ ಮೊಟ್ಟ ಮೊದಲ ಹೈಬ್ರಿಡ್ ರೀ ಯೂಸಬಲ್ ರಾಕೆಟ್ 'RHUMI-1' ಯಶಸ್ವಿಯಾಗಿ ಶನಿವಾರ ಉಡಾವಣೆ ಮಾಡಲಾಗಿದೆ.

ತಮಿಳುನಾಡಿನ ಚೆನ್ನೈನ ಈಸ್ಟ್ ಕೋಸ್ಟ್​ಲೈನ್​ನಿಂದ 'RHUMI-1' ರಾಕೆಟ್ ಅನ್ನು ಇಂದು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದ್ದು, ಖಾಸಗಿ ಸಂಸ್ಥೆಯಾದ ಸ್ಪೇಸ್​ಝೋನ್ ಈ ಮರುಬಳಕೆ ರಾಕೆಟ್ ಅನ್ನು ಅಭಿವೃದ್ಧಿಪಡಿಸಿದೆ.

ರುಮಿ-1 ರಾಕೆಟ್ ಶನಿವಾರ ಮೂರು ಕ್ಯೂಬ್ ಸೆಟಿಲೈಟ್ ಮತ್ತು 50 ಪಿಕೋ ಸೆಟಿಲೈಟ್​ಗಳನ್ನು ಹೊತ್ತು ಭೂಮಿಯಿಂದ 35 ಕಿಮೀ ಎತ್ತರದ ಕಕ್ಷೆವರೆಗೂ ಹೋಗಿ ಅಲ್ಲಿ ಆ ಎಲ್ಲಾ ಪೇಲೋಡ್​ಗಳನ್ನು ಅವುಗಳ ನಿಗದಿತ ಜಾಗಕ್ಕೆ ಬಿಟ್ಟು ವಾಪಸ್ ಬರಲಿದೆ. ದೇಶೀಯವಾಗಿ ನಿರ್ಮಿಸಲಾಗಿರುವ ಈ ರಾಕೆಟ್​ಗೆ ಪ್ಯಾರಾಚೂಟ್ ಅಳವಡಿಸಲಾಗಿದೆ.

ಪೇಲೋಡ್​ಗಳನ್ನು ಭೂಕಕ್ಷೆಗೆ ಬಿಟ್ಟು ಇದು ನಿಗದಿತ ಸಮುದ್ರ ಸ್ಥಳಕ್ಕೆ ಪ್ಯಾರಚೂಟ್ ಸಹಾಯದಿಂದ ನಿಧಾನವಾಗಿ ಬೀಳುತ್ತದೆ. ಬಳಿಕ ನೀತಿನಿಂದ ಈ ರಾಕೆಟ್​ನ ಭಾಗಗಳನ್ನು ಸಂಗ್ರಹಿಸಿ ಮತ್ತೆ ಹೊಸ ರಾಕೆಟ್ ತಯಾರಿಕೆಗೆ ಅದನ್ನು ಬಳಸಿಕೊಳ್ಳಲಾಗುತ್ತದೆ.

ಈ ರಾಕೆಟ್​ನಲ್ಲಿ ಹೈಬ್ರಿಡ್ ಪ್ರೊಪಲ್ಷನ್ ಸಿಸ್ಟಂ ಇದ್ದು, ಲಿಕ್ವಿಡ್ ಆಕ್ಸಿಡೈಸರ್ ಮತ್ತು ಸಾಲಿಡ್ ಫುಯೆಲ್ ಹೀಗೆ ಎರಡು ರೀತಿಯ ಇಂಧನದ ವ್ಯವಸ್ಥೆ ಮಾಡಲಾಗಿರುತ್ತದೆ. ಇದರ ಏರ್​ಫ್ರೇಮ್ ಅನ್ನು ಕಾರ್ಬನ್ ಫೈಬರ್, ಗ್ಲಾಸ್ ಫೈಬರ್ ಇತ್ಯಾದಿ ಸುಧಾರಿತ ವಸ್ತುಗಳಿಂದ ನಿರ್ಮಿಸಲಾಗಿದೆ. ಇದರ ನಿರ್ಮಾಣ ವೆಚ್ಚವೂ ಸಾಂಪ್ರದಾಯಿಕ ರಾಕೆಟ್​ಗಿಂತ ಬಹಳ ಕಡಿಮೆ ಎಂದು ಸ್ಪೇಸ್​ಝೋನ್ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ರುಮಿ-1 ರಾಕೆಟ್ ಅಭಿವೃದ್ದಿಗೆ ಬಳಸಲಾಗಿರುವ ತಂತ್ರಜ್ಞಾನವನ್ನು ಕ್ಷಿಪಣಿ ಕ್ಷೇತ್ರಕ್ಕೂ ಅಳವಡಿಸಬಹುದು. ಇದರಿಂದ ಉತ್ಕೃಷ್ಟವಾದ ಕ್ಷಿಪಣಿಗಳನ್ನು ದೇಶೀಯವಾಗಿ ನಿರ್ಮಿಸಬಹುದು ಎಂದು ರುಮಿ-1 ರಾಕೆಟ್ ಯೋಜನೆಯ ಉತ್ತೇಜಕರಲ್ಲಿ ಒಬ್ಬರಾಗಿರುವ ಮಾರ್ಟಿನ್ ಗ್ರೂಪ್ ಸಂಸ್ಥೆಗಳ ನಿರ್ದೇಶಕ ಜೋಸ್ ಚಾರ್ಲ್ಸ್ ಮಾರ್ಟಿನ್ ಹೇಳಿದ್ದಾರೆ.

ರುಮಿ ಹೆಸರೇಕೆ?

ರುಮಿ-1 ರಾಕೆಟ್ ಅನ್ನು ತಯಾರಿಸಿದ್ದು ಸ್ಪೇಸ್ ಝೋನ್ ಇಂಡಿಯಾ ಸಂಸ್ಥೆ. ಇದರ ಸಿಇಒ ಆನಂದ್ ಮೇಗಲಿಂಗಂ. ಈ ರಾಕೆಟ್​ಗೆ ಇಡಲಾಗಿರುವ ರುಮಿ ಹೆಸರು ಆನಂದ್ ಮೇಗಲಿಂಗಂ ಅವರ ಮಗನದ್ದು. ಅವರ ಮಗನ ಹೆಸರು ರುಮೇಂದ್ರನ್. ಈ ರಾಕೆಟ್ ತಯಾರಿಕೆಗೆ ಅಪ್ಪ ಸಾಕಷ್ಟು ಸಮಯ ಮತ್ತು ಶ್ರಮ ವ್ಯಯಿಸಿದ್ದಾರೆ. ಆ ಸಮಯವನ್ನು ಮಗ ತನಗಾಗಿ ತ್ಯಾಗ ಮಾಡಿದ ಕೃತಾರ್ಥತೆ ಅಪ್ಪ ಆನಂದ್ ಮೇಗಲಿಂಗಂ ಅವರದ್ದು. ಇದೇ ಕಾರಣಕ್ಕೆ ಈ ರಾಕೆಟ್ ಗೆ ರುಮಿ ಎಂದು ಹೆಸರಿಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾವು ನಮ್ಮ ರೈತರನ್ನು ರಕ್ಷಿಸಬೇಕು, ನ್ಯಾಯಾಲಯದ ತೀರ್ಪನ್ನೂ ಪಾಲಿಸಬೇಕು: CWRC ಆದೇಶಕ್ಕೆ ಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ

ಗಡಿಯ ಸ್ಥಿತಿ ದ್ವಿಪಕ್ಷೀಯ ಸಂಬಂಧಗಳನ್ನು ಪ್ರತಿಬಿಂಬಿಸುತ್ತೆ: ಚೀನಾ ವಿರುದ್ಧ ಕೆರಳಿದ ಭಾರತ

ಇದು ಮುದಿ ಗುಳ್ಳೆ ನರಿ: ಬಾಲಿವುಡ್ ನಟ ನಸೀರುದ್ದೀನ್ ಶಾ ವಿರುದ್ಧ BJP ಸಂಸದೆ ಕಂಗನಾ ಕಿಡಿ!

ನೂತನ ಸಚಿವರಿಗೆ ಸರ್ಕಾರಿ ನಿವಾಸ, ಕಾರು ಹಂಚಿಕೆ ಮಾಡಿ ಆದೇಶ; ನಿಮ್ಮ ಜಿಲ್ಲೆಯ ಮಿನಿಸ್ಟರ್ ಮನೆ ಎಲ್ಲಿದೆ? ಇಲ್ಲಿದೆ ವಿವರ

ತಮಿಳುನಾಡಿಗೆ ಕಾವೇರಿ ನೀರು: CWMA ನಿರ್ದೇಶನದ ವಿರುದ್ಧ ಕಾನೂನು ಆಯ್ಕೆಗಳ ಪರಿಶೀಲನೆ: ಸಹಾಯಕ ಆಯುಕ್ತ ಗೌರವ್ ಗುಪ್ತ