ಸಂಭಾಲ್ ನಲ್ಲಿ ಪತ್ತೆಯಾದ ಮೆಟ್ಟಿಲು ಬಾವಿ  online desk
ದೇಶ

ಸಂಭಾಲ್: ಬಗೆದಷ್ಟೂ ತೆರೆದುಕೊಳ್ಳುತ್ತಿದೆ ಇತಿಹಾಸ!: 150 ವರ್ಷದ ಪುರಾತನ ಮೆಟ್ಟಿಲುಬಾವಿ ಪತ್ತೆ!

ದೇವಾಲಯದ ಬಾಗಿಲು ತೆರೆದ ಬಳಿಕ ಇಲ್ಲಿನ ಸಂಭಾಲ್‌ನ ಚಂದೌಸಿಯ ಲಕ್ಷ್ಮಣ್ ಗಂಜ್ ಪ್ರದೇಶದಲ್ಲಿ ಉತ್ಖನನದ ಸಮಯದಲ್ಲಿ ಸುಮಾರು 125 ರಿಂದ 150 ವರ್ಷಗಳಷ್ಟು ಹಳೆಯದಾದ ಮತ್ತು 400 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿರುವ ಮೆಟ್ಟಿಲುಬಾವಿ ಪತ್ತೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಂಭಾಲ್: ಇತ್ತೀಚೆಗೆ ಭಾರಿ ಸುದ್ದಿಯಾಗುತ್ತಿರುವ ಉತ್ತರ ಪ್ರದೇಶದ ಸಂಭಾಲ್ ನಲ್ಲಿ ಬಗೆದಷ್ಟೂ ಹಿಂದೂ ಸಂಸ್ಕೃತಿ- ಇತಿಹಾಸಗಳನ್ನು ಸಾರಿ ಹೇಳುವ ಕುರುಹುಗಳು ಪತ್ತೆಯಾಗುತ್ತಿವೆ.

ದೇವಾಲಯದ ಬಾಗಿಲು ತೆರೆದ ಬಳಿಕ ಇಲ್ಲಿನ ಸಂಭಾಲ್‌ನ ಚಂದೌಸಿಯ ಲಕ್ಷ್ಮಣ್ ಗಂಜ್ ಪ್ರದೇಶದಲ್ಲಿ ಉತ್ಖನನದ ಸಮಯದಲ್ಲಿ ಸುಮಾರು 125 ರಿಂದ 150 ವರ್ಷಗಳಷ್ಟು ಹಳೆಯದಾದ ಮತ್ತು 400 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿರುವ ಮೆಟ್ಟಿಲುಬಾವಿ ಪತ್ತೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸ್ಥಳದಲ್ಲಿ ಉತ್ಖನನ ಕಾರ್ಯ ಶನಿವಾರ ಆರಂಭವಾಗಿದೆ ಎಂದು ಚಂದೌಸಿ ನಗರ ಪಾಲಿಕೆ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಕುಮಾರ್ ಸೋಂಕರ್ ತಿಳಿಸಿದ್ದಾರೆ. 46 ವರ್ಷಗಳ ಕಾಲ ಮುಚ್ಚಲ್ಪಟ್ಟಿದ್ದ ಸಂಭಾಲ್‌ನಲ್ಲಿರುವ ಭಸ್ಮ ಶಂಕರ ದೇವಸ್ಥಾನವನ್ನು ಡಿಸೆಂಬರ್ 13 ರಂದು ಪುನಃ ತೆರೆದ ನಂತರ ಉತ್ಖನನ ನಡೆಸಲಾಗುತ್ತಿದೆ.

ಒತ್ತುವರಿ ತಡೆ ಕಾರ್ಯಾಚರಣೆ ವೇಳೆ ಈ ರಚನೆಯನ್ನು ಪತ್ತೆ ಹಚ್ಚಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ದೇವಾಲಯದ ಬಾವಿಯೊಳಗೆ ಎರಡು ಹಾನಿಗೊಳಗಾದ ವಿಗ್ರಹಗಳೂ ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳೀಯ ಮೂಲಗಳ ಪ್ರಕಾರ, ಬಿಲಾರಿ ರಾಜನ ಅಜ್ಜನ ಆಳ್ವಿಕೆಯಲ್ಲಿ ಮೆಟ್ಟಿಲುಬಾವಿಯನ್ನು ನಿರ್ಮಿಸಲಾಗಿದೆ.

ಸಂಭಾಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಂದರ್ ಪೆನ್ಸಿಯಾ ಅವರು ಈ ಸ್ಥಳದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಸಮೀಕ್ಷೆ ನಡೆಸುವ ಸಾಧ್ಯತೆಯನ್ನು ಪರಿಗಣಿಸಲಾಗುತ್ತಿದೆ ಮತ್ತು ಅಗತ್ಯವಿದ್ದರೆ ಎಎಸ್‌ಐಗೆ ವಿನಂತಿಯನ್ನು ಸಲ್ಲಿಸಬಹುದು ಎಂದು ಹೇಳಿದರು.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಪೆನ್ಸಿಯಾ, ಈ ಹಿಂದೆ ಈ ನಿವೇಶನವನ್ನು ಕೆರೆ ಎಂದು ನೋಂದಣಿ ಮಾಡಿರುವುದನ್ನು ಖಚಿತಪಡಿಸಿದ್ದಾರೆ. ಬಾವಿಯ ಮೇಲಿನ ಮಹಡಿ ಇಟ್ಟಿಗೆಗಳಿಂದ ಮಾಡಲಾಗಿದ್ದು, ಎರಡನೇ ಮತ್ತು ಮೂರನೇ ಮಹಡಿ ಅಮೃತಶಿಲೆಯಿಂದ ಕೂಡಿದೆ. ಈ ರಚನೆಯು ನಾಲ್ಕು ಕೊಠಡಿಗಳು ಮತ್ತು ಬಾವಿಯನ್ನು ಸಹ ಒಳಗೊಂಡಿದೆ ಎಂದು ಅವರು ಹೇಳಿದರು.

ರಚನೆಗೆ ಹಾನಿಯಾಗದಂತೆ ಕೆಲಸವನ್ನು ಎಚ್ಚರಿಕೆಯಿಂದ ನಡೆಸಲಾಗುತ್ತಿದೆ ಎಂದು ಪೆನ್ಸಿಯಾ ತಿಳಿಸಿದ್ದಾರೆ.

"ಇದುವರೆಗೆ 210 ಚದರ ಮೀಟರ್ ಪ್ರದೇಶವನ್ನು ಹೊರತೆಗೆಯಲಾಗಿದೆ. ಉತ್ಖನನವು ಮುಂದುವರಿಯುತ್ತದೆ ಮತ್ತು ಪ್ರದೇಶದಲ್ಲಿನ ಒತ್ತುವರಿಗಳನ್ನು ತೆಗೆದುಹಾಕಲಾಗುತ್ತದೆ. ಪ್ರಾಥಮಿಕ ಅಂದಾಜಿನ ಪ್ರಕಾರ ಮೆಟ್ಟಿಲುಬಾವಿ ಸುಮಾರು 125 ರಿಂದ 150 ವರ್ಷಗಳಷ್ಟು ಹಳೆಯದು" ಎಂದು ಡಿಎಂ ಹೇಳಿದರು.

ಮೆಟ್ಟಿಲುಬಾವಿಯ ಸಮೀಪದಲ್ಲಿರುವ ಬಂಕೆ ಬಿಹಾರಿ ದೇವಸ್ಥಾನವು ಶಿಥಿಲಾವಸ್ಥೆಯಲ್ಲಿದೆ ಎಂದು ಅಧಿಕಾರಿಯು ಕಳವಳ ವ್ಯಕ್ತಪಡಿಸಿದ್ದಾರೆ. ಸುಮಾರು 150 ವರ್ಷಗಳಷ್ಟು ಹಳೆಯದಾದ ದೇವಾಲಯದಲ್ಲಿ ಎರಡು ವಿಗ್ರಹಗಳನ್ನು ಸುರಕ್ಷಿತವಾಗಿ ಪ್ರತ್ಯೇಕ ದೇವಾಲಯಗಳಲ್ಲಿ ಇರಿಸಲಾಗಿದೆ ಎಂದು ಡಿಎಂ ಹೇಳಿದರು. ದೇವಸ್ಥಾನದ ಜೀರ್ಣೋದ್ಧಾರಕ್ಕೆ ಕ್ರಮಕೈಗೊಳ್ಳಲಾಗುವುದು ಹಾಗೂ ಸುತ್ತಲಿನ ಒತ್ತುವರಿಯನ್ನು ತೆರವುಗೊಳಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಎರಡು ದಿನಗಳ ಹಿಂದೆ ನಡೆದ ಸಾರ್ವಜನಿಕ ಸಭೆಯಲ್ಲಿ ಚಂದೌಸಿ ನಿವಾಸಿ ಕೌಶಲ್ ಕಿಶೋರ್ ಪುರಾತನ ಮೆಟ್ಟಿಲುಬಾವಿಯ ಬಗ್ಗೆ ಜಿಲ್ಲಾ ಕಚೇರಿಗೆ ಮಾಹಿತಿ ನೀಡಿ ಸಮೀಪದ ಬಂಕೆ ಬಿಹಾರಿ ದೇವಸ್ಥಾನದ ಹದಗೆಟ್ಟ ಸ್ಥಿತಿಯನ್ನು ಎತ್ತಿ ತೋರಿಸಿದರು. ಹಿಂದಿನ ಕಾಲದಲ್ಲಿ ಈ ಪ್ರದೇಶದಲ್ಲಿ ಹಿಂದೂ ಸಮುದಾಯದವರು ವಾಸಿಸುತ್ತಿದ್ದರು ಮತ್ತು ಬಿಲಾರಿ ರಾಣಿ ಅಲ್ಲಿಯೇ ಇರುತ್ತಿದ್ದರು ಎಂದು ಕಿಶೋರ್ ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT