ಭಾರತೀಯ ಸೇನೆ TNIE
ದೇಶ

ಸೇನೆಗೆ 84,560 ಕೋಟಿ ರೂ ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಡಿಎಸಿ ಒಪ್ಪಿಗೆ

ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ) 84,560 ಕೋಟಿ ರೂ ಮೌಲ್ಯದ ವಿವಿಧ ಹಾರ್ಡ್ವೇರ್ (ಯಂತ್ರಾಂಶ)ಗಳನ್ನು ಖರೀದಿಸುವುದಕ್ಕೆ ಅನುಮೋದನೆ ನೀಡಿದೆ. ರಕ್ಷಣಾ ಸಚಿವಾಲಯದ ಹೇಳಿಕೆಯ ಪ್ರಕಾರ, 'ಆತ್ಮನಿರ್ಭರ'ದ ನೈಜ ಉದ್ದೇಶದಲ್ಲಿ ಈ ಅನುಮೋದನೆಗಳಲ್ಲಿ ಭಾರತೀಯ ಮಾರಾಟಗಾರರಿಂದ ವಿವಿಧ ಉಪಕರಣಗಳ ಖರೀದಿಗೆ ವಿಶೇಷ ಒತ್ತು ನೀಡಿವೆ.

ಭೂಕಂಪನ ಸಂವೇದಕಗಳನ್ನು ಹೊಂದಿರುವ ಹೊಸ ತಲೆಮಾರಿನ ಟ್ಯಾಂಕ್ ನಿರೋಧಕ ಮೈನ್ (Anti-tank mines) ಖರೀದಿಸುವುದಕ್ಕೆ ಅನುಮೋದನೆ ನೀಡಲಾಗಿದೆ. ಇದೇ ವೇಳೆ ಹೆಚ್ಚುವರಿ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ರಿಮೋಟ್ ನಿಷ್ಕ್ರಿಯಗೊಳಿಸುವಿಕೆಯನ್ನು ಒದಗಿಸಲು ಡಿಎಸಿ ಎಒಎನ್ ನ್ನು ಖರೀದಿ (ಭಾರತೀಯ-ದೇಶೀಯವಾಗಿ ವಿನ್ಯಾಸಗೊಳಿಸಿದ ಮತ್ತು ತಯಾರಿಸಿದ (ಐಡಿಡಿಎಂ) ವಿಭಾಗದ ಅಡಿಯಲ್ಲಿ ಅನುಮೋದನೆ ನೀಡಲಾಗಿದೆ.

ಯಾಂತ್ರೀಕೃತ ಪಡೆಗಳಿಂದ ದೃಶ್ಯ ಗೋಚರತೆಯನ್ನು ಮೀರಿದ ಗುರಿಗಳನ್ನು ತಲುಪಲು, ಕಾರ್ಯಾಚರಣೆಯ ದಕ್ಷತೆ ಮತ್ತು ಪ್ರಾಬಲ್ಯವನ್ನು ಹೆಚ್ಚಿಸಲು, Buy (ಭಾರತೀಯ-ಐಡಿಡಿಎಂ) ವಿಭಾಗದ ಅಡಿಯಲ್ಲಿ ಕ್ಯಾನಿಸ್ಟರ್ ಆಂಟಿ-ಆರ್ಮರ್ ಲೋಯ್ಟರ್ ಮ್ಯೂನಿಷನ್ ಸಿಸ್ಟಮ್ ಅನ್ನು ಖರೀದಿಸಲು ಡಿಎಸಿ ಒಪ್ಪಿಗೆ ನೀಡಿದೆ. ರಕ್ಷಣಾ ಮೂಲಗಳ ಪ್ರಕಾರ, 15 ಕಡಲ ಗಸ್ತು ವಿಮಾನಗಳನ್ನು ಮೇಡ್ ಇನ್ ಇಂಡಿಯಾ ಸಿ -295 ಸಾರಿಗೆ ವಿಮಾನ ಯೋಜನೆಯಡಿಯಲ್ಲಿ 29,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT