ಎಲ್ ಇಟಿ ಉಗ್ರ ಅಬ್ದುಲ್ ಕರೀಂ ತುಂಡಾ (ಸಂಗ್ರಹ ಚಿತ್ರ) 
ದೇಶ

1993 ರ ಮುಂಬೈ ಸ್ಫೋಟ ಪ್ರಕರಣದಲ್ಲಿ ಅಬ್ದುಲ್ ತುಂಡಾ ನಿರ್ದೋಷಿ: ಟಿಎಡಿಎ ಕೋರ್ಟ್

1993 ರ ಮುಂಬೈ ಸರಣಿ ಸ್ಫೋಟ ಪ್ರಕರಣದಲ್ಲಿ ಅಬ್ದುಲ್ ತುಂಡಾ ನಿರ್ದೋಷಿ ಎಂದು ಭಯೋತ್ಪಾದಕ ಮತ್ತು ವಿಚ್ಛಿದ್ರಕಾರಕ ಚಟುವಟಿಕೆಗಳ ಕಾಯ್ದೆ (TADA) ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿದೆ.

ಮುಂಬೈ: 1993 ರ ಮುಂಬೈ ಸರಣಿ ಸ್ಫೋಟ ಪ್ರಕರಣದಲ್ಲಿ ಅಬ್ದುಲ್ ತುಂಡಾ ನಿರ್ದೋಷಿ ಎಂದು ಭಯೋತ್ಪಾದಕ ಮತ್ತು ವಿಚ್ಛಿದ್ರಕಾರಕ ಚಟುವಟಿಕೆಗಳ ಕಾಯ್ದೆ (TADA) ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ನ್ಯಾಯಾಲಯ ಆತನನ್ನು ಬಿಡುಗಡೆ ಮಾಡಲಾಗಿದೆ ಎಂದು ಕೋರ್ಟ್ ಹೇಳಿದೆ.

ಅಬ್ದುಲ್ ಕರಿಮ್ ತುಂಡಾ ವಿರುದ್ಧ ಸ್ಪಷ್ಟ ಸಾಕ್ಷ್ಯಗಳನ್ನು ಒದಗಿಸುವಲ್ಲಿ ಸಿಬಿಐ ವಿಫಲವಾಗಿದೆ ಎಂದು ಅಡ್ವೊಕೇಟ್ ಶಫಾಕ್ ಸುಲ್ತಾನಿ ಹೇಳಿದ್ದಾರೆ. "ಅಬ್ದುಲ್ ಕರೀಂ ತುಂಡಾ ನಿರಪರಾಧಿ ಎಂದು ಇಂದು ಕೋರ್ಟ್ ಈ ತೀರ್ಪು ನೀಡಿದೆ. ಅಬ್ದುಲ್ ಕರೀಂ ತುಂಡಾ ಎಲ್ಲಾ ಸೆಕ್ಷನ್‌ಗಳಲ್ಲಿ ಮತ್ತು ಎಲ್ಲಾ ಕೃತ್ಯಗಳಲ್ಲಿ ಖುಲಾಸೆಗೊಂಡಿದ್ದಾರೆ. ಸಿಬಿಐ ಪ್ರಾಸಿಕ್ಯೂಷನ್ ಗೆ ಟಾಡಾ, ಐಪಿಸಿ, ರೈಲ್ವೇ ಕಾಯಿದೆಗಳು, ಶಸ್ತ್ರಾಸ್ತ್ರ ಕಾಯ್ದೆಗಳಲ್ಲಿ, ಅಥವಾ ಸ್ಫೋಟಕ ವಸ್ತುಗಳ ಕಾಯಿದೆಯಲ್ಲಿ ಯಾವುದೇ ಸ್ಪಷ್ಟ ಪುರಾವೆಯನ್ನು ನ್ಯಾಯಾಲಯದ ಮುಂದೆ ಸಲ್ಲಿಸಲು ಸಾಧ್ಯವಾಗಲಿಲ್ಲ ಎಂದು ವಕೀಲ ಸುಲ್ತಾನಿ ಸುದ್ದಿಗಾರರಿಗೆ ತಿಳಿಸಿದರು.

1992ರ ಬಾಬರಿ ಮಸೀದಿ ಧ್ವಂಸದ ವಾರ್ಷಿಕ ದಿನದಂದು ನಾಲ್ಕು ರೈಲುಗಳಲ್ಲಿ ಸಂಭವಿಸಿದ ಸ್ಫೋಟದ ಹಿಂದಿನ ಮಾಸ್ಟರ್ ಮೈಂಡ್ ತುಂಡಾ ಎಂದು ಸಿಬಿಐ ಆರೋಪಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

SIR ಅಧಿಕಾರಿಗಳನ್ನೇ ಕೂಡಿ ಹಾಕಿದ ಜನತೆ: ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ಕೆಂಡಾಮಂಡಲ, ಸುರಕ್ಷತೆಗೆ ಕೇಂದ್ರ ಸಶಸ್ತ್ರ ಪಡೆ ನಿಯೋಜಿಸಲು ಸೂಚನೆ

ಕಾನೂನು ಸುವ್ಯವಸ್ಥೆಗೂ GDPಗೂ ನೇರ ಸಂಬಂಧವಿದೆ: ಸಿಎಂ ಸಿದ್ದರಾಮಯ್ಯ

ನಾನು ಸಿಎಂ ಆಗಿ ಮೊದಲ ಸಂಪುಟ ಸಭೆಯಲ್ಲಿಯೇ ಮುಸ್ಲಿಂರನ್ನು ಅಲ್ಪಸಂಖ್ಯಾತ ಪಟ್ಟಿಯಿಂದ ಹೊರಹಾಕುತ್ತೇನೆ: ಶಾಸಕ ಯತ್ನಾಳ್

ನಮ್ಮ ಭಾರತೀಯ ಸ್ನೇಹಿತರು ಸುರಕ್ಷಿತ, ಚಿಂತಿಸಬೇಡಿ: ಪಶ್ಚಿಮ-ಏಷ್ಯಾ ಯುದ್ಧದ ನಡುವೆ ಇರಾನ್ ಅಭಯ

ಮಾಲ್ಡಾದಲ್ಲಿ ಭಾರೀ ಅಶಾಂತಿ: 7 ನ್ಯಾಯಾಂಗ ಅಧಿಕಾರಿಗಳನ್ನು 9 ಗಂಟೆ ಒತ್ತೆಯಾಳಾಗಿಸಿದ ಉದ್ರಿಕ್ತರು; ದೀದಿ ವಿರುದ್ಧ CJI ಗರಂ

SCROLL FOR NEXT