ನವದೆಹಲಿ: ಎನ್ಇಇಟಿ ವಿರುದ್ಧ ಡಿಎಂಕೆ ಸಹಿ ಅಭಿಯಾನವನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲ ಡಿಎಂಕೆ ಸಹಿ ಸಂಗ್ರಹ ಅಭಿಯಾನವನ್ನು ವಿರೋಧಿಸಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಜಾಗೊಳಿಸಿರುವ ಕೋರ್ಟ್, ಸರಿಯಾದ ತಿಳುವಳಿಕೆ ಇರುವ ವಿದ್ಯಾರ್ಥಿಗಳ ಮೇಲೆ ರಾಷ್ಟ್ರೀಯ ಮಟ್ಟದ ಪರೀಕ್ಷೆಯೊಂದರ ವಿರುದ್ಧದ ಈ ರೀತಿಯ ಸಹಿ ಸಂಗ್ರಹ ಅಭಿಯಾನಗಳು ಪರಿಣಾಮ ಉಂಟುಮಾಡುವುದಿಲ್ಲ ಎಂದು ಹೇಳಿದೆ.
"ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಚೆನ್ನಾಗಿ ತಿಳುವಳಿಕೆ ಹೊಂದಿದ್ದಾರೆ ಮತ್ತು ಜಾಗೃತರಾಗಿದ್ದಾರೆ. ಕೇಂದ್ರೀಯ ಯೋಜನೆಯೊಂದಿಗೆ ರಾಷ್ಟ್ರೀಯ ಮಟ್ಟದ ಪರೀಕ್ಷೆಯ ವಿರುದ್ಧ ಇಂತಹ ಅಭಿಯಾನಗಳು ಅವರ ಮೇಲೆ ಪರಿಣಾಮ ಬೀರುವುದಿಲ್ಲ. ಪ್ರಚಾರ ಮಾಡಲು ಬಯಸುವವರು ಅದನ್ನು ಮುಂದುವರಿಸಲಿ" ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಉನ್ನತ ನ್ಯಾಯಾಲಯದ ಪೀಠ ಹೇಳಿದೆ.
ಇದನ್ನೂ ಓದಿ: ಕೋಚಿಂಗ್ ಪಡೆಯಲು ಆರ್ಥಿಕ ಮುಗ್ಗಟ್ಟು: ಯೂಟ್ಯೂಬ್ ತರಗತಿ, ಪುಸ್ತಕಗಳ ನೆರವಿನಿಂದಲೇ ಎನ್ಇಇಟಿ ತೇರ್ಗಡೆಯಾದ ರಿತಿಕಾ!
ವಿದ್ಯಾರ್ಥಿಗಳ ಸಹಿ ತೆಗೆದುಕೊಳ್ಳಲು ಅವರ ಪೋಷಕರಿಂದ ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕಾಗಿ ಅರ್ಜಿದಾರರಾಗಿರುವ ಸಾಮಾಜಿಕ ಕಾರ್ಯಕರ್ತ ಮತ್ತು ವಕೀಲ ಎಂಎಲ್ ರವಿ ನೀಟ್ ವಿರುದ್ಧ ಡಿಎಂಕೆ ಸಹಿ ಅಭಿಯಾನವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
"ಈ ಕಾಯ್ದೆಯಿಂದ ವಿದ್ಯಾರ್ಥಿಗಳು ತೊಂದರೆಗೊಳಗಾಗುತ್ತಾರೆ ಮತ್ತು ನಂತರ ಅವರು ನೀಟ್ ಪರೀಕ್ಷೆಗಳನ್ನು ಎದುರಿಸಬೇಕಾಗಬಹುದು, ವಿದ್ಯಾರ್ಥಿಗಳು ಖಿನ್ನತೆಗೆ ಒಳಗಾಗಬಹುದು ಮತ್ತು ಮಾನಸಿಕ ಸಂಕಟಕ್ಕೆ ಒಳಗಾಗಬಹುದು ಮತ್ತು ಅವರ ವೃತ್ತಿಜೀವನವನ್ನು ಹಾಳುಮಾಡಬಹುದು" ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.