ಜಮ್ಮು ಮತ್ತು ಕಾಶ್ಮೀರದ ದಾಲ್ ಸರೋವರ 
ದೇಶ

ಜಾಗತಿಕ ತಾಪಮಾನ ಏರಿಕೆ: ಮೈನಸ್ 3 ಡಿಗ್ರಿ; ಹೆಪ್ಪುಗಟ್ಟಿದ ದಾಲ್ ಸರೋವರ, ಜಮ್ಮು-ಕಾಶ್ಮೀರದಲ್ಲಿ ಚಳಿ ವಾಡಿಕೆಗಿಂತ ಕಡಿಮೆ!

ಜಾಗತಿಕ ತಾಪಮಾನ ಏರಿಕೆ ಬಿಸಿ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರಕ್ಕೂ ತಾಗಿದ್ದು, ಅಲ್ಲಿ ತಾಪಮಾನ ಕುಸಿದಿದೆಯಾದರೂ ಸಾಮಾನ್ಯ ಋತುಗಳಿಗೆ ಹೋಲಿಕೆ ಮಾಡಿದರೆ ಇದು ತೀವ್ರ ಕಡಿಮೆ ಎಂದು ಹೇಳಲಾಗುತ್ತಿದೆ.

ಶ್ರೀನಗರ: ಜಾಗತಿಕ ತಾಪಮಾನ ಏರಿಕೆ ಬಿಸಿ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರಕ್ಕೂ ತಾಗಿದ್ದು, ಅಲ್ಲಿ ತಾಪಮಾನ ಕುಸಿದಿದೆಯಾದರೂ ಸಾಮಾನ್ಯ ಋತುಗಳಿಗೆ ಹೋಲಿಕೆ ಮಾಡಿದರೆ ಇದು ತೀವ್ರ ಕಡಿಮೆ ಎಂದು ಹೇಳಲಾಗುತ್ತಿದೆ.

ಹೌದು.. ಜಾಗತಿಕ ತಾಪಮಾನದ ಎಫೆಕ್ಟ್ ಈ ಬಾರಿ ಜಮ್ಮು ಮತ್ತು ಕಾಶ್ಮೀರವನ್ನೂ ಕಾಡುತ್ತಿದ್ದು ಸಾಮಾನ್ಯ ಈ ಋತುವಿನಲ್ಲಿ ಇರಬೇಕಿದ್ದ ತಾಪಮಾನ ಇಲ್ಲ ಎಂದು ಪರಿಸರ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಹಾಲಿ ಪರಿಸ್ಥಿತಿಯಲ್ಲಿ ಕಣಿವೆರಾಜ್ಯ ಜಮ್ಮು ಮತ್ತು ಕಾಶ್ಮೀರ ತೀವ್ರವಾದ ಚಳಿಯಲ್ಲಿದೆಯಾದರೂ ಇದು ವಾಡಿಕೆಗಿಂತ ಕಡಿಮೆ ಎಂದು ಹೇಳಲಾಗಿದೆ. ಗುರುವಾರ ಶ್ರೀನಗರದಲ್ಲಿ-4.7ರಷ್ಟಿದ್ದ ತಾಪಮಾನ ಶುಕ್ರವಾರ -3 ಡಿಗ್ರಿಗೆ ಏರಿಕೆಯಾಗಿದೆ. ರಾಜಧಾನಿ ಶ್ರೀನಗರದ ಐತಿಹಾಸಿಕ ದಾಲ್ ಸರೋವರ ಚಳಿಯಿಂದಾಗಿ ಹೆಪ್ಪುಗಟ್ಟಿದ್ದು, ಈ ಹೆಪ್ಪುಗಟ್ಟುವಿಕೆ ಪ್ರಕ್ರಿಯೆ ಕೂಡ ನಿಧಾನವಾಗಿ ಸಾಗಿದೆ ಎಂದು ಹೇಳಲಾಗಿದೆ.

ಕಾಶ್ಮೀರದಾದ್ಯಂತ ಹೆಚ್ಚಿನ ಸ್ಥಳಗಳಲ್ಲಿ ತಾಪಮಾನ ಋತುವಿನ ಈ ಸಮಯದಲ್ಲಿ ಇನ್ನೂ ಸಾಮಾನ್ಯಕ್ಕಿಂತ ಕಡಿಮೆಯಾಗಿದೆ. ಮುಂದುವರಿದ ಉಪ-ಶೂನ್ಯ ತಾಪಮಾನವು ದಾಲ್ ಸರೋವರವನ್ನು ಒಳಗೊಂಡಂತೆ ಹಲವಾರು ಜಲಮೂಲಗಳ ಘನೀಕರಣಕ್ಕೆ ಕಾರಣವಾಗಿದೆ. ಅವುಗಳ ಮೇಲ್ಮೈಯಲ್ಲಿ ಮಂಜುಗಡ್ಡೆಯ ತೆಳುವಾದ ಪದರವು ರೂಪುಗೊಂಡಿದೆ. ಶ್ರೀನಗರ ನಗರದಲ್ಲಿ ಬುಧವಾರ ರಾತ್ರಿ ಕನಿಷ್ಠ ತಾಪಮಾನ ಮೈನಸ್ 3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಹಿಂದಿನ ರಾತ್ರಿ ಮೈನಸ್ 3.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂತೆಯೇ ವಾರ್ಷಿಕ ಅಮರನಾಥ ಯಾತ್ರೆಯ ಬೇಸ್ ಕ್ಯಾಂಪ್‌ಗಳಲ್ಲಿ ಒಂದಾಗಿರುವ ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ನಲ್ಲಿ ಕನಿಷ್ಠ ಮೈನಸ್ 4.5 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ದಾಖಲಾಗಿದೆ. ಇದೇ ಜಾಗದಲ್ಲಿ ಹಿಂದಿನ ರಾತ್ರಿ ಮೈನಸ್ 5.1 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು.  ಅಂತೆಯೇ ಉತ್ತರ ಕಾಶ್ಮೀರದ ಗುಲ್ಮಾರ್ಗ್ ಸ್ಕೀಯಿಂಗ್ ರೆಸಾರ್ಟ್‌ನಲ್ಲಿ ಹಿಂದಿನ ರಾತ್ರಿಯ ಮೈನಸ್ 4.2 ಡಿಗ್ರಿ ಸೆಲ್ಸಿಯಸ್‌ನಿಂದ ಕನಿಷ್ಠ ಮೈನಸ್ 3.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೆ ಖಾಜಿಗುಂಡ್‌ನಲ್ಲಿ ಕನಿಷ್ಠ ಮೈನಸ್ 3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಕೊಕರ್ನಾಗ್ ಪಟ್ಟಣದಲ್ಲಿ ಕನಿಷ್ಠ ಮೈನಸ್ 2 ಡಿಗ್ರಿ ಸೆಲ್ಸಿಯಸ್ ಮತ್ತು ಕುಪ್ವಾರದಲ್ಲಿ ಕನಿಷ್ಠ ಮೈನಸ್ 2.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕಾಶ್ಮೀರವು ಸುದೀರ್ಘವಾದ ಒಣಹವೆಯನ್ನು ಅನುಭವಿಸುತ್ತಿದೆ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಮಳೆಯ ಮೇಲೆ ಶೇಕಡಾ 79 ರಷ್ಟು ತಾಪಮಾನ ಕೊರತೆಯಿದೆ. ಕಾಶ್ಮೀರದ ಬಹುತೇಕ ಬಯಲು ಪ್ರದೇಶಗಳಲ್ಲಿ ಹಿಮಪಾತವಾಗಿಲ್ಲ. ಆದರೆ ಕಣಿವೆಯ ಮೇಲಿನ ಭಾಗಗಳು ಡಿಸೆಂಬರ್ ಅಂತ್ಯದ ವೇಳೆಗೆ ಸಾಮಾನ್ಯ ಪ್ರಮಾಣಕ್ಕಿಂತ ಕಡಿಮೆ ಹಿಮವನ್ನು ಪಡೆದಿವೆ ಎಂದಿ ತಜ್ಞರು ಹೇಳಿದ್ದಾರೆ.

ಲಘು ಹಿಮಾಪಾತ ಸಾಧ್ಯತೆ
ಹವಾಮಾನ ಇಲಾಖೆಯು ಶುಕ್ರವಾರದಂದು ಪ್ರತ್ಯೇಕವಾದ ಅತಿ ಎತ್ತರದ ಪ್ರದೇಶಗಳ ಮೇಲೆ ಅತ್ಯಂತ ಲಘುವಾದ ಹಿಮದ ಸಾಧ್ಯತೆಯಿದೆ ಎಂದು ಹೇಳಿದೆ. ಜನವರಿ 7 ರ ಸಂಜೆಯವರೆಗೆ ಹವಾಮಾನವು ಮುಖ್ಯವಾಗಿ ಶುಷ್ಕ ವಾತಾವರಣದಲ್ಲಿ ಉಳಿಯುತ್ತದೆ, ಜನವರಿ 8-9 ರಂದು ಜಮ್ಮು ಮತ್ತು ಕಾಶ್ಮೀರದ ಹೆಚ್ಚಿನ ಪ್ರದೇಶಗಳಲ್ಲಿ ಪ್ರತ್ಯೇಕ ಪ್ರದೇಶಗಳಲ್ಲಿ ಲಘು ಹಿಮದ ಸಾಧ್ಯತೆಯಿದೆ ಎಂದು ಅದು ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ವೆನೆಜುವೆಲಾ ಪರಿಸ್ಥಿತಿ ನಿಮಗೂ ಬರಬಹುದು.. ತಡ ಮಾಡದೇ ನಮ್ ಜೊತೆ ಒಪ್ಪಂದ ಮಾಡ್ಕೊಳ್ಳಿ': ಕ್ಯೂಬಾಗೂ Donald Trump ಎಚ್ಚರಿಕೆ!

ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ತ್ರಿಪುರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ: ಉನಕೋಟಿಯಲ್ಲಿ ಮಸೀದಿ-ಮುಸ್ಲಿಂ ಅಂಗಡಿಗಳಿಗೆ ಬೆಂಕಿ

ಒಂದು ವಾರದ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್ಚಾರ್ಜ್!

Tubelight in his head: ಹಿಮಂತಾ ಬಿಸ್ವಾ ಶರ್ಮಾ ವಿರುದ್ಧ AIMIM ಮುಖ್ಯಸ್ಥ ಓವೈಸಿ ಕಿಡಿ! ಏನಿದು ವಿವಾದ?

SCROLL FOR NEXT