ರಾಮ ಮಂದಿರದಲ್ಲಿ ಪೂಜಾ ಕೈಂಕರ್ಯಗಳು 
ದೇಶ

ರಾಮ ಮಂದಿರದಲ್ಲಿನ ಪ್ರಾಣಪ್ರತಿಷ್ಠಾಪನೆಗೆ ಮೋದಿಯೇ ಮುಖ್ಯ ಯಜಮಾನ!

ಅಯೋಧ್ಯೆಯಲ್ಲಿ ಜ.22 ರಂದು ನಡೆಯಲಿರುವ ವಿಗ್ರಹ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರೇ ಮುಖ್ಯ ಯಜಮಾನ ಎಂದು ಪ್ರಾಣಪ್ರತಿಷ್ಠಾಪನೆ ವಿಧಾನಗಳನ್ನು ನಡೆಸಿಕೊಡುವ ಮುಖ್ಯ ಅರ್ಚಕರಾದ ಲಕ್ಷ್ಮಿಕಾಂತ್ ದೀಕ್ಷಿತ್ ಹೇಳಿದ್ದಾರೆ.

ಅಯೋಧ್ಯೆ: ಅಯೋಧ್ಯೆಯಲ್ಲಿ ಜ.22 ರಂದು ನಡೆಯಲಿರುವ ವಿಗ್ರಹ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರೇ ಮುಖ್ಯ ಯಜಮಾನ ಎಂದು ಪ್ರಾಣಪ್ರತಿಷ್ಠಾಪನೆ ವಿಧಾನಗಳನ್ನು ನಡೆಸಿಕೊಡುವ ಮುಖ್ಯ ಅರ್ಚಕರಾದ ಲಕ್ಷ್ಮಿಕಾಂತ್ ದೀಕ್ಷಿತ್ ಹೇಳಿದ್ದಾರೆ.

ಟ್ರಸ್ಟ್ ಸದಸ್ಯ ಅನಿಲ್ ಮಿಶ್ರಾ ಪತ್ನಿ ಸಹಿತರಾಗಿ ಪ್ರಾಣಪ್ರತಿಷ್ಠಾಪನೆ ವಿಧಾನಗಳಲ್ಲಿ ಭಾಗವಹಿಸಲಿದ್ದು ಅವರೇ ಮುಖ್ಯ ಯಜಮಾನರಾಗಿರಲಿದ್ದಾರೆ ಎಂಬ ವರದಿಗಳನ್ನು ದೀಕ್ಷಿತರು ತಳ್ಳಿಹಾಕಿದ್ದಾರೆ. ಯಾರ ಪರವಾಗಿ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆಯೋ ಅವರನ್ನು ಯಜಮಾನ ಎಂದು ಹೇಳಲಾಗುತ್ತದೆ.

ಅಯೋಧ್ಯೆಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ದೀಕ್ಷಿತ್, ಪ್ರಧಾನ 'ಅರ್ಚಕ' ಅಯೋಧ್ಯೆಯಲ್ಲಿ 'ಪ್ರಾಣ ಪ್ರತಿಷ್ಠಾ' ಆಚರಣೆಗಳಿಗೆ ಪ್ರಧಾನಿ ಮೋದಿ ಮುಖ್ಯ "ಯಜಮಾನ" ಎಂದು ಸ್ಪಷ್ಟಪಡಿಸಿದರು.

ದೀಕ್ಷಿತ್ ಈ ಹಿಂದೆ ರಾಜಸ್ಥಾನದ ಲಕ್ಷ್ಮಣಗಢದ ರಾಮ ಮಂದಿರದಲ್ಲಿ ಮತ್ತು ಒಡಿಶಾ ದೇವಸ್ಥಾನದಲ್ಲಿ 'ಪ್ರಾಣ ಪ್ರತಿಷ್ಠೆ' ನಡೆಸಿದ್ದರು.

ದೇವಾಲಯದ ಟ್ರಸ್ಟ್‌ನ ಸದಸ್ಯ ಮತ್ತು ಅವರ ಪತ್ನಿ ನೇತೃತ್ವದಲ್ಲಿ ರಾಮ ಮಂದಿರದ ಸಮಾರಂಭವು ಮಂಗಳವಾರದಂದು ವಿಧಿವಿಧಾನಗಳೊಂದಿಗೆ ಪ್ರಾರಂಭವಾಗಿದೆ. ಈ ಆಚರಣೆಗಳು ಅಯೋಧ್ಯೆಯ ಹೊಸ ದೇವಾಲಯದಲ್ಲಿ ರಾಮ ಲಲ್ಲಾನ ವಿಗ್ರಹದ 'ಪ್ರಾಣ ಪ್ರತಿಷ್ಠಾ'ದೊಂದಿಗೆ ಅಂತಿಮ ಹಂತವನ್ನು ತಲುಪುತ್ತವೆ.

"ಅನುಷ್ಠಾನ" ಪ್ರಾರಂಭವಾಗಿದೆ ಮತ್ತು ಜನವರಿ 22 ರವರೆಗೆ ಪವಿತ್ರಾಭಿಷೇಕ ಸಮಾರಂಭದ ದಿನ ಮುಂದುವರಿಯುತ್ತದೆ. ಹನ್ನೊಂದು ಅರ್ಚಕರು ಎಲ್ಲಾ ದೇವತೆಗಳು ಮತ್ತು ದೇವರುಗಳನ್ನು ಆವಾಹನೆ ಮಾಡುವ ಆಚರಣೆಗಳನ್ನು ನಡೆಸುತ್ತಿದ್ದಾರೆ" ಎಂದು ರಾಮ ಮಂದಿರದ ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

SCROLL FOR NEXT