ದೇಶ

ರಾಮಲಲ್ಲಾ ಪ್ರತಿಷ್ಠಾಪನಾ ಸಮಾರಂಭಕ್ಕೆ ಸಿಎಂ ಏಕನಾಥ್ ಶಿಂಧೆ ಗೈರು! ಆದರೆ...

Nagaraja AB

ಮುಂಬೈ:  ಅಯೋಧ್ಯೆಯಲ್ಲಿ ನಾಳೆ ನಡೆಯಲಿರುವ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನಾ ಸಮಾರಂಭದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಭಾಗವಹಿಸುತ್ತಿಲ್ಲ. ಆದರೆ, ಉದ್ಘಾಟನಾ ಸಮಾರಂಭ ಬಳಿಕ ಸಂಪುಟ ಸಚಿವರು, ಶಾಸಕರು ಮತ್ತು ಲೋಕಸಭೆ ಸಂಸದರೊಂದಿಗೆ ಅಯೋಧ್ಯೆ  ಪ್ರವಾಸ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಅಯೋಧ್ಯೆಯಲ್ಲಿ ನಡೆಯುವ ಬಾಲರಾಮನ ಪ್ರಾಣ ಪ್ರತಿಷ್ಠಾಪನಾ ಸಮಾರಂಭಕ್ಕೆ ಬೆರಳಿಕೆಯಷ್ಟು ಜನ ಸೇರುವ ಬದಲು ಸಂಪುಟದ ಸಚಿವರು, ಶಾಸಕರು ಮತ್ತು ಸಂಸದರನ್ನು ಕರೆದುಕೊಂಡು ಹೋಗಲು ನಿರ್ಧರಿಸಿದ್ದೇನೆ ಎಂದು ಹೇಳಿದರು. 

ರಾಮ ಮಂದಿರ ನಮ್ಮ ನಂಬಿಕೆ ಮತ್ತು ಹೆಮ್ಮೆಯ ಸಂಗತಿಯಾಗಿದೆ. ನಮ್ಮೊಂದಿಗೆ ಅಧಿಕಾರಿಗಳು ಮತ್ತು ಭಕ್ತರನ್ನು ಸಹ ಅಯೋಧ್ಯೆಗೆ  ಕರೆದೊಯ್ಯಲು ಬಯಸುತ್ತೇನೆ" ನಾಳಿನ ಸಮಾರಂಭಕ್ಕೂ ಮುನ್ನ ದೇವಾಲಯಗಳಲ್ಲಿ ಸ್ವಚ್ಛತಾ ಅಭಿಯಾನ ಕೈಗೊಳ್ಳುವಂತೆ ಹಾಗೂ ದೀಪಗಳಿಂದ ಅಲಂಕರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಿಂಧೆ ಹೇಳಿದರು.

SCROLL FOR NEXT