ಹೇಮಾ ಮಾಲಿನಿ 
ದೇಶ

ಅಯೋಧ್ಯೆಯಲ್ಲಿ ರಾಮ ರಾಗ ಸೇವೆ: ಹೇಮಾ ಮಾಲಿನಿ, ಅನುಪ್ ಜಲೋಟಾ ಸೇರಿ 100 ಕಲಾವಿದರು ಭಾಗಿ

ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮಮಂದಿರದಲ್ಲಿ ಆಯೋಜಿಸಲಾದ "ಶ್ರೀ ರಾಮ್ ರಾಗ್ ಸೇವೆ"ಯಲ್ಲಿ ಬಾಲಿವುಡ್ ಹಿರಿಯ ನಟಿ ಹೇಮಾ ಮಾಲಿನಿ, ಮಾಲಿನಿ ಅವಸ್ಥಿ, ಅನುಪ್ ಜಲೋಟಾ, ಅನುರಾಧಾ ಪೌಡ್ವಾಲ್ ಮತ್ತು ಸೋನಾಲ್...

ಅಯೋಧ್ಯೆ: ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮಮಂದಿರದಲ್ಲಿ ಆಯೋಜಿಸಲಾದ "ಶ್ರೀ ರಾಮ್ ರಾಗ್ ಸೇವೆ"ಯಲ್ಲಿ ಬಾಲಿವುಡ್ ಹಿರಿಯ ನಟಿ ಹೇಮಾ ಮಾಲಿನಿ, ಮಾಲಿನಿ ಅವಸ್ಥಿ, ಅನುಪ್ ಜಲೋಟಾ, ಅನುರಾಧಾ ಪೌಡ್ವಾಲ್ ಮತ್ತು ಸೋನಾಲ್ ಮಾನ್ಸಿಂಗ್ ಸೇರಿದಂತೆ 100 ಕಲಾವಿದರು ಭಾಗವಹಿಸಲಿದ್ದಾರೆ.

ಭಗವಾನ್ ರಾಮನಿಗಾಗಿ ಇಂದಿನಿಂದ ಪ್ರಾರಂಭವಾಗುವ 45 ದಿನಗಳ ಭಕ್ತಿ ಸಂಗೀತ ಉತ್ಸವವು ಮಾರ್ಚ್ 10 ರಂದು ಮುಕ್ತಾಯಗೊಳ್ಳಲಿದೆ.

ಇದನ್ನು ಓದಿ: 

ಜನವರಿ 26 ರಿಂದ ಶ್ರೀರಾಮ ಜನ್ಮಭೂಮಿ ದೇವಸ್ಥಾನದಲ್ಲಿ ಶಾಸ್ತ್ರೀಯ ಸಂಪ್ರದಾಯದಂತೆ ರಾಗ ಸೇವೆಯನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಗುಡಿ ಮಂಟಪದಲ್ಲಿ ದೇವರ ಸನ್ನಿಧಿಯಲ್ಲಿ ಆಯೋಜಿಸಲಾಗಿದೆ. ಇದರಲ್ಲಿ ವಿವಿಧ ಪ್ರಾಂತ್ಯಗಳ 100ಕ್ಕೂ ಹೆಚ್ಚು ಪ್ರಸಿದ್ಧ ಕಲಾವಿದರು ಭಾಗವಹಿಸುತ್ತಾರೆ. ದೇಶದಾದ್ಯಂತದ ವಿವಿಧ ಕಲಾ ಸಂಪ್ರದಾಯಗಳು ಮುಂದಿನ 45 ದಿನಗಳ ಕಾಲ ಭಗವಾನ್ ರಾಮನಿಗಾಗಿ 'ರಾಗ ಸೇವೆ'ಯನ್ನು ನೀಡಲಿವೆ" ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಸದಸ್ಯರೊಬ್ಬರು ತಿಳಿಸಿದ್ದಾರೆ.

'ಗುಡಿ ಮಂಟಪ'ವು 'ಗರ್ಭ ಗುಡಿ' ಮುಂಭಾಗದಲ್ಲಿದೆ. ಗರ್ಭ ಗುಂಡಿಯಲ್ಲಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ರಾಮಲಲ್ಲಾನ ಹೊಸ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ.

ವೈಜಯಂತಿ ಮಾಲಾ, ಸಿಕ್ಕಿಲ್ ಗುರ್ಚರಣ್, ಪಂಡಿತ್ ಸಜನ್ ಮಿಶ್ರಾ, ಜಸ್ಬೀರ್ ಜಸ್ಸಿ, ಅರುಣಾ ಸಾಯಿರಾಂ, ಸ್ವಪ್ನ ಸುಂದರಿ, ರಾಹುಲ್ ದೇಶಪಾಂಡೆ, ಸುರೇಶ್ ವಾಡ್ಕರ್, ದರ್ಶನಾ ಝವೇರಿ, ಉದಯ್ ಭವಾಲ್ಕರ್, ಜಯಂತ್ ಕುಮಾರೇಶ್, ಪೂರ್ಣ ದಾಸ್ ಬೌಲ್, ಗಾಯತ್ರಿ ಮತ್ತು ದೇವಕಿ ಪಂಡಿತ್ 'ರಾಗ ಸೇವೆ' ಪ್ರದರ್ಶಿಸುವ ಕಲಾವಿದರಲ್ಲಿ ಪ್ರಮುಖರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?