ಸಾಂದರ್ಭಿಕ ಚಿತ್ರ  
ದೇಶ

ಜುಲೈ ತಿಂಗಳಲ್ಲಿ ಸಾಮಾನ್ಯಕ್ಕಿಂತ ಅಧಿಕ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಉತ್ತರ ತಮಿಳುನಾಡು, ಕರಾವಳಿ ಆಂಧ್ರಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಸರಾಸರಿಗಿಂತ ಕಡಿಮೆ ಮಳೆಯಾಗುವ ಮುನ್ಸೂಚನೆ ಇದೆ. ಜೂನ್ ನಲ್ಲಿ ವಾಡಿಕೆಗಿಂತ ಕಡಿಮೆ ಮಳೆ ದಾಖಲಾಗಿದೆ.

ನವದೆಹಲಿ: ಭಾರತದ ಈಶಾನ್ಯ ಮತ್ತು ಪೂರ್ವ ರಾಜ್ಯಗಳಾದ ಬಿಹಾರ, ಉತ್ತರ ಪ್ರದೇಶ ಮತ್ತು ಜಾರ್ಖಂಡ್‌ನ ಕೆಲವು ಭಾಗಗಳನ್ನು ಹೊರತುಪಡಿಸಿ ದೇಶದ ಬಹುತೇಕ ಭಾಗಗಳಲ್ಲಿ ಈ ಜುಲೈ ತಿಂಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉತ್ತರ ತಮಿಳುನಾಡು, ಕರಾವಳಿ ಆಂಧ್ರಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಸರಾಸರಿಗಿಂತ ಕಡಿಮೆ ಮಳೆಯಾಗುವ ಮುನ್ಸೂಚನೆ ಇದೆ. ಜೂನ್ ನಲ್ಲಿ ವಾಡಿಕೆಗಿಂತ ಕಡಿಮೆ ಮಳೆ ದಾಖಲಾಗಿದೆ.

ಒಟ್ಟಾರೆಯಾಗಿ ದೇಶದಾದ್ಯಂತ ಜುಲೈ ಸರಾಸರಿ ಮಳೆಯು ಸಾಮಾನ್ಯಕ್ಕಿಂತ ಹೆಚ್ಚಾಗಿ ಇರುತ್ತದೆ -- 280.4 ಮಿಮೀ ದೀರ್ಘಾವಧಿಯ ಸರಾಸರಿ (LPA)ಯ ಶೇಕಡಾ 106ಕ್ಕಿಂತ ಹೆಚ್ಚು ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಒಡಿಶಾ, ಕರ್ನಾಟಕ, ಹರಿಯಾಣ, ಉತ್ತರ ಪ್ರದೇಶ, ಛತ್ತೀಸ್‌ಗಢ ಮತ್ತು ಜಾರ್ಖಂಡ್‌ನ ಕೆಲವು ಭಾಗಗಳಲ್ಲಿ ವಿಪರೀತ ಮಳೆಯಾಗುವ ಸಾಧ್ಯತೆಯ ಬಗ್ಗೆ IMD ಎಚ್ಚರಿಕೆ ನೀಡಿದೆ.

ಮುಂಗಾರು ಕಾಲದ ದ್ವಿತೀಯಾರ್ಧದಲ್ಲಿ (ಆಗಸ್ಟ್-ಸೆಪ್ಟೆಂಬರ್) ಮಾನ್ಸೂನ್ ಮತ್ತಷ್ಟು ತೀವ್ರಗೊಳ್ಳುತ್ತದೆ, ಏಕೆಂದರೆ ಲಾ ನಿನಾ ಪರಿಸ್ಥಿತಿಗಳು ಅಭಿವೃದ್ಧಿಗೊಳ್ಳುವ ಸಾಧ್ಯತೆಯಿದೆ ಮತ್ತು ಸಮಭಾಜಕ ಪೆಸಿಫಿಕ್ ಮೇಲೆ ಎಲ್ ನಿನೋ ಪರಿಸ್ಥಿತಿಗಳು ತಟಸ್ಥ ಹಂತದಲ್ಲಿವೆ.

ಭಾರತದಲ್ಲಿ, ಎಲ್ ನಿನೊ ವಿದ್ಯಮಾನವು ಕಳಪೆ ಮಾನ್ಸೂನ್‌ಗೆ ಸಮಾನಾರ್ಥಕವಾಗಿದೆ ಆದರೆ ಲಾ ನಿನಾ ಸಮೃದ್ಧ ಮಾನ್ಸೂನ್ ನ್ನು ಸೂಚಿಸುತ್ತದೆ.

ಇದಲ್ಲದೆ, ಮಧ್ಯ ಭಾರತ ಮತ್ತು ಆಗ್ನೇಯ ಪರ್ಯಾಯ ದ್ವೀಪದ ಕೆಲವು ಭಾಗಗಳನ್ನು ಹೊರತುಪಡಿಸಿ ದೇಶದ ಹಲವು ಭಾಗಗಳಲ್ಲಿ ಜುಲೈ ತಿಂಗಳ ಮಾಸಿಕ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ. ಪಶ್ಚಿಮ ಕರಾವಳಿಯನ್ನು ಹೊರತುಪಡಿಸಿ ವಾಯುವ್ಯ ಭಾರತ ಮತ್ತು ದಕ್ಷಿಣ ಪರ್ಯಾಯ ದ್ವೀಪದ ಹಲವು ಭಾಗಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಸಾಮಾನ್ಯಕ್ಕಿಂತ ಕಡಿಮೆ ಇರುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕಳೆದ 15 ವರ್ಷಗಳಲ್ಲಿ ಅತಿ ಹೆಚ್ಚು ಶಾಖದ ದಿನಗಳು ಈ ವರ್ಷ ಕಂಡಿವೆ. 2010 ರಲ್ಲಿ 177 ಉಷ್ಣ ಅಲೆ ದಿನಗಳು ದಾಖಲಾಗಿವೆ. ಈ ವರ್ಷದ ಬೇಸಿಗೆಯಲ್ಲಿ, ಭಾರತವು ಎರಡನೇ ಅತಿ ಹೆಚ್ಚು ಅವಧಿಯನ್ನು ಅನುಭವಿಸಿದೆ -- 536 ಶಾಖದ ಅಲೆಯ ದಿನಗಳು, 2010 ರ ನಂತರ ಕಳೆದ 14 ವರ್ಷಗಳಲ್ಲಿ (578 ದಿನಗಳು) ದಾಖಲಾಗಿವೆ.

ಜೂನ್‌ನಲ್ಲಿ ಅಧಿಕ ಶಾಖದಿಂದಾಗಿ, ಮಾನ್ಸೂನ್ ಕೊರತೆಯನ್ನು ಅನುಭವಿಸಿವೆ. ಈ ವರ್ಷ ಶೇಕಡಾ 111ರಷ್ಟು ಮಳೆ ಕೊರತೆಯನ್ನು ಕಂಡಿವೆ. ಇದು ಕಳೆದ 24 ವರ್ಷಗಳಲ್ಲಿ 7 ನೇ ಅತಿ ಕಡಿಮೆ ಮಳೆಯಾಗಿದೆ.

ಪೂರ್ವ ಮತ್ತು ಈಶಾನ್ಯ ಮತ್ತು ಮಧ್ಯ ಭಾರತ ನಂತರ ವಾಯುವ್ಯ ಪ್ರದೇಶವು ಅತಿ ಹೆಚ್ಚು ಕೊರತೆಯನ್ನು ಪಡೆಯಿತು. ಆದಾಗ್ಯೂ, ದಕ್ಷಿಣ ಪರ್ಯಾಯ ದ್ವೀಪವು ಸಾಮಾನ್ಯಕ್ಕಿಂತ ಶೇಕಡಾ 14.2ರಷ್ಟು ಮಳೆಯನ್ನು ಪಡೆದಿದೆ. ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ವ್ಯವಸ್ಥೆಯ ರಚನೆಯ ಕೊರತೆಯಿಂದಾಗಿ ಮಳೆಯ ಚಟುವಟಿಕೆ ಕಡಿಮೆಯಾಗಿದೆ.

ಜೂನ್‌ನಲ್ಲಿ ಕೊರತೆಯ ಮಳೆಯಾಗಿದ್ದರೆ ಜುಲೈಯಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಂದೇ ಮಾತರಂ 150ನೇ ವಾರ್ಷಿಕೋತ್ಸವ: ಲೋಕಸಭೆಯಲ್ಲಿಂದು ಚರ್ಚೆ, ಎಲ್ಲರ ಚಿತ್ತ ಪ್ರಧಾನಿ ಮೋದಿಯತ್ತ

ಬೆಳಗಾವಿ ಚಳಿಗಾಲ ಅಧಿವೇಶನ: ಸರ್ಕಾರ-ವಿಪಕ್ಷಗಳ ನಡುವೆ ಜಟಾಪಟಿ ಸಾಧ್ಯತೆ, ಅವಿಶ್ವಾಸ ನಿರ್ಣಯ ಮಂಡಿಸಲು BJP ಮುಂದು..!

'ಮುಖ್ಯಮಂತ್ರಿಗಳೇ ಗಮನ ಕೊಡಿ': ಬಸ್ ಇಲ್ಲ.. ನಿತ್ಯ ಶಾಲೆಗೆ ಕಾಡಿನಲ್ಲಿ 14 ಕಿ.ಮೀ ನಡೆದೇ ಸಾಗುವ ವಿದ್ಯಾರ್ಥಿಗಳು!

ಬಾಬರ್ ಒಬ್ಬ ಆಕ್ರಮಣಕಾರ, ಬಾಬ್ರಿ ವಿಚಾರವನ್ನು ಭಾರತದ ಭ್ರಾತೃತ್ವ ಭಾವನೆಗೆ ಹೋಲಿಸದಿರಿ...

Goa Nightclub Tragedy: ನಾಲ್ವರ ಬಂಧನ, ಮೂವರು ಅಧಿಕಾರಿಗಳು ಅಮಾನತು

SCROLL FOR NEXT