ಕನ್ವರಿಯಾಗಳು 
ದೇಶ

ಮುಜಾಫರ್‌ನಗರ: ಕರಿಯಲ್ಲಿ ಈರುಳ್ಳಿ ಪತ್ತೆ, ಆಕ್ರೋಶಗೊಂಡ ಕನ್ವರಿಯಾಗಳಿಂದ ಉಪಹಾರ ಗೃಹ ಮೇಲೆ ದಾಳಿ!

ನೆರೆಯ ಹರಿಯಾಣದ ಕನ್ವರಿಯಾಗಳು ಮುಜಾಫರ್‌ನಗರ ಜಿಲ್ಲೆಯ ದೆಹಲಿ-ಹರಿದ್ವಾರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ತೌ ಹುಕ್ಕೇವಾಲಾ ಹರ್ಯಾಣಿ ಟೂರಿಸ್ಟ್ ಡಾಬಾದಲ್ಲಿ ಊಟಕ್ಕಾಗಿ ಇಳಿದಿದ್ದಾರೆ. ಊಟ ಮಾಡುವಾಗ ಅವರಿಗೆ ಬಡಿಸಿದ ಕರಿಯಲ್ಲಿ ಈರುಳ್ಳಿ ಚೂರುಗಳು ಕಂಡುಬಂದಿವೆ. ಇದರಿಂದ ಆಕ್ರೋಶಗೊಂಡ ಕನ್ವರಿಯಾಗಳು ಡಾಬಾ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಅಲ್ಲಿದ್ದ ಪೀಠೋಪಕರಣಗಳು ಮತ್ತು ರೆಫ್ರಿಜರೇಟರ್ ಧ್ವಂಸಗೊಳಿಸಿದ್ದಾರೆ.

ಲಖನೌ: ಉತ್ತರ ಪ್ರದೇಶ ರಾಜ್ಯಾದ್ಯಂತ ಕನ್ವರ್ ಯಾತ್ರೆ ಸಾಗುವ ಮಾರ್ಗದಲ್ಲಿ ಬರುವ ಎಲ್ಲಾ ಉಪಹಾರ ಗೃಹಗಳು ನಾಮಫಲಕ ಪ್ರದರ್ಶಿಸಬೇಕು ಎಂದು ಉತ್ತರ ಪ್ರದೇಶ ಸರ್ಕಾರ ಮಾರ್ಗಸೂಚಿ ಹೊರಡಿಸಿದ ಮಾರನೇ ದಿನವೇ, ಗಂಗಾಜಲ ಸಂಗ್ರಹಿಸಲು ಹರಿದ್ವಾರಕ್ಕೆ ತೆರಳುತ್ತಿದ್ದ ಕನ್ವರಿಯಾ (ಶಿವಭಕ್ತರು) ಗುಂಪೊಂದು ಶುಕ್ರವಾರ ಮುಜಾಫರ್ ನಗರದಲ್ಲಿ ಕರಿಯಲ್ಲಿ ಈರುಳ್ಳಿ ಕಂಡುಬಂದ ನಂತರ ಉಪಹಾರ ಗೃಹದ ಮೇಲೆ ದಾಳಿ ನಡೆಸಿದ್ದಾರೆ.

ನೆರೆಯ ಹರಿಯಾಣದ ಕನ್ವರಿಯಾಗಳು ಮುಜಾಫರ್‌ನಗರ ಜಿಲ್ಲೆಯ ದೆಹಲಿ-ಹರಿದ್ವಾರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ತೌ ಹುಕ್ಕೇವಾಲಾ ಹರ್ಯಾಣಿ ಟೂರಿಸ್ಟ್ ಡಾಬಾದಲ್ಲಿ ಊಟಕ್ಕಾಗಿ ಇಳಿದಿದ್ದಾರೆ. ಊಟ ಮಾಡುವಾಗ ಅವರಿಗೆ ಬಡಿಸಿದ ಕರಿಯಲ್ಲಿ ಈರುಳ್ಳಿ ಚೂರುಗಳು ಕಂಡುಬಂದಿವೆ. ಇದರಿಂದ ಆಕ್ರೋಶಗೊಂಡ ಕನ್ವರಿಯಾಗಳು ಡಾಬಾ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಅಲ್ಲಿದ್ದ ಪೀಠೋಪಕರಣಗಳು ಮತ್ತು ರೆಫ್ರಿಜರೇಟರ್ ಧ್ವಂಸಗೊಳಿಸಿದ್ದಾರೆ. ಅವರ ಗುರಿ ಉಪಾಹಾರ ಗೃಹದ ಬಾಣಸಿಗ ಆಗಿದ್ದ. ಆದರೆ ಆತ ಅಲ್ಲಿಂದ ಪರಾರಿಯಾಗಿದ್ದ ಎನ್ನಲಾಗಿದೆ.

ಸ್ಥಳೀಯ ಪೊಲೀಸರು ಮಧ್ಯಪ್ರವೇಶಿಸಿ ಆಕ್ರೋಶಗೊಂಡ ಕನ್ವರಿಯಾರನ್ನು ಸಮಾಧಾನ ಪಡಿಸಬೇಕಾಯಿತು. ಘಟನೆಯ ಕುರಿತು ಪ್ರತಿಕ್ರಿಯಿಸಿದ ಚಾಪರ್ ಪೊಲೀಸ್ ಠಾಣೆ ಎಸ್‌ಎಚ್‌ಒ ರೋಜೆಂಟ್ ತ್ಯಾಗಿ, ಶಿವನ ಭಕ್ತರು ಕನ್ವರ್ ಯಾತ್ರೆಯಲ್ಲಿ ವಿಶೇಷವಾಗಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಇಲ್ಲದ ಸರಳ ಸಾತ್ವಿಕ್ ಆಹಾರವನ್ನು ಸೇವಿಸುವುದರಿಂದ, ಕರಿಯಲ್ಲಿ ಈರುಳ್ಳಿ ಚೂರುಗಳನ್ನು ಕಂಡು ಆಕ್ರೋಶಗೊಂಡರು. ಈರುಳ್ಳಿಯನ್ನು ಸಹ ಕನ್ವರಿಯಾದವರು ಸೇವಿಸುವುದಿಲ್ಲ ಎಂಬ ಅರಿವಿಲ್ಲದ ಕಾರಣ ಗೊಂದಲದಿಂದ ಹೀಗಾಯಿತು ಎಂದು ಡಾಬಾ ಮಾಲೀಕ ಪ್ರಮೋದ್ ಕುಮಾರ್ ಹೇಳಿದ್ದಾರೆ.

ಈರುಳ್ಳಿ ಅಥವಾ ಬೆಳ್ಳುಳ್ಳಿ ಇಲ್ಲದ ಊಟ ನೀಡುವಂತೆ ಕೇಳಿದ್ದರೂ ಈರುಳ್ಳಿ ಚೂರುಗಳು ಇರುವ ಕರಿ ನೀಡಲಾಗಿತ್ತು. ಕನ್ವರಿಯಾದವರು ತಮ್ಮ ಗ್ರಾಮದ ದೇವಸ್ಥಾನದಲ್ಲಿ ಶಿವನಿಗೆ ಪವಿತ್ರ ನೀರನ್ನು ಅರ್ಪಿಸುವವರೆಗೆ ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇವಿಸುವುದನ್ನು ತಪ್ಪಿಸಿ ಎಂದು ಕನ್ವರಿಯಾಗಳು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ಭಕ್ತಾದಿಗಳು ರಸ್ತೆಯಲ್ಲಿ ನಡೆಯುವಾಗ ಅಥವಾ ಅನ್ನಸಂತರ್ಪಣೆ ಮಾಡುವಾಗ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಉಪ ಎಸ್ಪಿ (ಸದರ್) ರಾಜುಕುಮಾರ್ ಸಾಬ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಯಕತ್ವ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ, ಹೇಗೆ ನೆರವೇರಿಸಿದ್ರು?ಈ ಅದ್ಭುತ Video ನೋಡಿ..

SCROLL FOR NEXT