ಜಯಂತ್ ಚೌಧರಿ 
ದೇಶ

Kanwar Yatra: ಅಂಗಡಿ ಮಾಲಿಕರ ಹೆಸರು ಪ್ರದರ್ಶಿಸುವ ನಿಯಮ ವಾಪಸ್ ಪಡೆಯಲು ಬಿಜೆಪಿಗೆ ಮಿತ್ರ ಪಕ್ಷಗಳ ಒತ್ತಡ!

ಉತ್ತರ ಪ್ರದೇಶದಲ್ಲಿ ಕನ್ವರ್ ಯಾತ್ರೆ ಸಾಗುವ ಮಾರ್ಗದಲ್ಲಿ ಅಂಗಡಿ ಮಾಲಿಕರ ಹೆಸರು ಪ್ರದರ್ಶನ ಮಾಡಬೇಕು ಎಂಬ ಸರ್ಕಾರದ ನಿಯಮ ವಾಪಸ್ ಪಡೆಯುವಂತೆ ಬಿಜೆಪಿಗೆ ಮಿತ್ರ ಪಕ್ಷಗಳ ಒತ್ತಡ ಹೆಚ್ಚಾಗತೊಡಗಿದೆ.

ರಾಷ್ಟ್ರೀಯ ಲೋಕದಳ ಮುಖ್ಯಸ್ಥ ಜಯಂತ್ ಚೌಧರಿ ಉತ್ತರ ಪ್ರದೇಶ ಸರ್ಕಾರವನ್ನು ಒತ್ತಾಯಿಸಿದ್ದು, ನಿಯಮ ಬದಲಾವಣೆ ಮಾಡುವಂತೆ ಒತ್ತಾಯಿಸಿದ್ದಾರೆ.

ಯಾತ್ರೆಗಳು ಯಾವುದೇ ಧರ್ಮ ಮತ್ತು ಜಾತಿಗೆ ಸಂಬಂಧಿಸಿದ್ದಾಗಿಲ್ಲ ಎಂದು ಜಯಂತ್ ಚೌಧರಿ ಹೇಳಿದ್ದಾರೆ.

ಹೆಚ್ಚು ಯೋಚನೆ ಮಾಡದೇ ಸರ್ಕಾರ ಈ ನಿರ್ಧಾರ ಕೈಗೊಂಡಿರುವಂತಿದೆ, ನಿರ್ಧಾರ ತೆಗೆದುಕೊಂಡು ಆಗಿದೆ ಎಂಬ ಕಾರಣಕ್ಕೆ ಸರ್ಕಾರ ಪಟ್ಟು ಹಿಡಿದಿರುವಂತಿದೆ ಎಂದು ರಾಜ್ಯಸಭಾ ಸದಸ್ಯ ಜಯಂತ್ ಚೌಧರಿ ಹೇಳಿದ್ದಾರೆ.

"ಇನ್ನೂ ಸಮಯವಿದೆ. ಸರ್ಕಾರದ ನಿರ್ಧಾರ ಬದಲಾಗಬೇಕು ಅಥವಾ ನಿಯಮ ಅನುಷ್ಠಾನಕ್ಕೆ ಸರ್ಕಾರ ಹೆಚ್ಚು ಒತ್ತು ನೀಡಬಾರದು" ಎಂದು ಜಯಂತ್ ಚೌಧರಿ ಹೇಳಿದ್ದಾರೆ.

ಕನ್ವರ್ ಅನ್ನು ಯಾರೂ ಗುರುತಿಸುವುದಿಲ್ಲ, ಕನ್ವರ್ ಸೇವೆ ಮಾಡುವ ಜನರನ್ನು ಧರ್ಮ ಅಥವಾ ಜಾತಿಯ ಮೇಲೆ ಗುರುತಿಸಲಾಗುವುದಿಲ್ಲ ಎಂದು ಚೌಧರಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Operation Sindoor ವೇಳೆ ಪಾಕಿಸ್ತಾನಕ್ಕೆ ನೆರವು, Azerbaijan ಶಾಕ್ ಕೊಟ್ಟ ಭಾರತ, SCO ಸದಸ್ಯತ್ವಕ್ಕೆ ತಡೆ! ಅಧ್ಯಕ್ಷ Ilham Aliyev ಹೇಳಿದ್ದೇನು?

ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ: ಭೂಕುಸಿತದಲ್ಲಿ ಆರು ಮಂದಿ ಸಾವು; 1,150 ಕ್ಕೂ ಹೆಚ್ಚು ರಸ್ತೆಗಳು ಬಂದ್; Video

'ಉದಾತ್ತ ಹೃದಯ ಮತ್ತು ಸರಳತೆ': ಜನ್ಮದಿನಕ್ಕೆ ಶುಭ ಕೋರಿದ ಶಿವಣ್ಣಗೆ ಧನ್ಯವಾದ ಹೇಳಿದ ನಟ Pawan Kalyan

ಜಮ್ಮು- ಕಾಶ್ಮೀರದಲ್ಲಿ ಭಾರೀ ಮಳೆಗೆ ಪ್ರವಾಹ ಭೀತಿ: ಚೆನಾಬ್, ಝೇಲಂನಲ್ಲಿ ಅಪಾಯದ ಮಟ್ಟ ಮೀರಿದ ನೀರು; ಶಾಲೆಗಳಿಗೆ ರಜೆ, ಹೆದ್ದಾರಿ ಬಂದ್

ಭ್ರಷ್ಟಾಚಾರ ಆರೋಪ: ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಗೆ ನಿರ್ಧಾರ; ಎಸ್.ರವಿಕುಮಾರ್‌

SCROLL FOR NEXT