ನ್ಯಾಯಾಲಯ (ಸಂಗ್ರಹ ಚಿತ್ರ) online desk
ದೇಶ

'ಮರೆಯುವುದು ನಿಮ್ಮ ಹಕ್ಕು'- ಜ್ಞಾಪಿಸಿದ ಮದ್ರಾಸ್ ಕೋರ್ಟ್; ಮರೆತೇವೆಂದರೂ ಮರೆವುದು ಹ್ಯಾಂಗ ಎಂದ ಸುಪ್ರೀಂ ಕೋರ್ಟ್

ಆರೋಪಿಯ ಹೆಸರುಗಳನ್ನು ಹೊಂದಿರುವ ನ್ಯಾಯಾಲಯದ ಆದೇಶಗಳನ್ನು ಆತ ನಿರ್ದೋಷಿ ಎಂದಾದರೆ ಸಾರ್ವಜನಿಕ ವೇದಿಕೆಗಳಿಂದ ತೆಗೆಯುವ right to be forgotten ವಿಷಯವನ್ನು ಪರಿಶೀಲಿಸುವುದಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.

ನವದೆಹಲಿ: ಮಾಹಿತಿ ಹಕ್ಕು, ಶಿಕ್ಷಣ ಹಕ್ಕು, ಮತದಾನದ ಹಕ್ಕುಗಳು ಗೊತ್ತು ಇದ್ಯಾವುದು ಮರೆಯುವ ಹಕ್ಕು? ಇದ್ಯಾವಾಗ ಬಂತು? ಎಂದು ಆಶ್ಚರ್ಯ ಚಕಿತರಾಗಿದ್ದರೆ, ಈ ವರದಿಯನ್ನು ಪೂರ್ಣವಾಗಿ ಓದಿ...

Right to be forgotten
ಒಬ್ಬ ವ್ಯಕ್ತಿಯ ವಿರುದ್ಧ ಒಂದು ಪ್ರಕರಣ ದಾಖಲಾಗಿ ಎಷ್ಟೋ ವರ್ಷಗಳ ನಂತರ ನ್ಯಾಯಾಲಯ ಆತ ನಿರ್ದೋಷಿ ಎಂದು ತೀರ್ಪು ನೀಡುತ್ತದೆ. ಆ ತೀರ್ಪಿನ ಉಲ್ಲೇಖದಲ್ಲಿ ಆರೋಪಿಯ ಹೆಸರು ನಮೂದಾಗಿ, ಸಾರ್ವಜನಿಕ ವೇದಿಕೆಗಳಲ್ಲಿ ಉಳಿದುಹೋಗುವುದನ್ನು ತಪ್ಪಿಸುವುದಕ್ಕೆ ಮರೆಯುವ ಹಕ್ಕು ಅಥವಾ right to be forgotten ಎನ್ನಲಾಗುತ್ತದೆ.

ಆರೋಪಿಯ ಹೆಸರುಗಳನ್ನು ಹೊಂದಿರುವ ನ್ಯಾಯಾಲಯದ ಆದೇಶಗಳನ್ನು ಆತ ನಿರ್ದೋಷಿ ಎಂದಾದರೆ ಸಾರ್ವಜನಿಕ ವೇದಿಕೆಗಳಿಂದ ತೆಗೆಯುವ right to be forgotten ವಿಷಯವನ್ನು ಪರಿಶೀಲಿಸುವುದಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.

ಮರೆಯುವ ಹಕ್ಕು ತನ್ನದೇ ಆದ ಗಂಭೀರ ಪರಿಣಾಮಗಳನ್ನು ಹೊಂದಿರುತ್ತದೆ ಎಂದು ಸುಪ್ರೀಂ ಕೋರ್ಟ್ ನ ಸಿಜೆಐ ಡಿವೈ ಚಂದ್ರಚೂಡ್ ಅವರಿದ್ದ ಪೀಠ ಹೇಳಿದ್ದು, ಖುಲಾಸೆಗೊಂಡ ಅತ್ಯಾಚಾರದ ಆರೋಪಿಯ ಹೆಸರನ್ನು ಪೋರ್ಟಲ್ ಒಂದರಿಂದ ತೆಗೆದುಹಾಕುವಂತೆ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ತಡೆ ನೀಡಿದೆ.

ತೀರ್ಪುಗಳು ಸಾರ್ವಜನಿಕ ದಾಖಲೆಗಳ ಭಾಗವಾಗಿರುತ್ತದೆ ಮತ್ತು ನ್ಯಾಯಾಲಯಗಳಿಂದ ಅದನ್ನು ತೆಗೆದುಹಾಕುವ ಆದೇಶವು ಗಂಭೀರ ಪರಿಣಾಮಗಳನ್ನು ಹೊಂದಿರುತ್ತದೆ, ”ಎಂದು ಸಿಜೆಐ ಹೇಳಿದ್ದಾರೆ.

ಒಬ್ಬ ವ್ಯಕ್ತಿಯನ್ನು ಖುಲಾಸೆಗೊಳಿಸಲಾಗಿದೆ ಎಂದು ಭಾವಿಸಿದ ಪೀಠ, "ತೀರ್ಪನ್ನು ಹಿಂತೆಗೆದುಕೊಳ್ಳುವಂತೆ ಹೈಕೋರ್ಟ್ ಅವರಿಗೆ (ಕಾನೂನು ಪೋರ್ಟಲ್) ಹೇಗೆ ನಿರ್ದೇಶಿಸುತ್ತದೆ? ತೀರ್ಪು ನೀಡಿದ ನಂತರ, ಅದು ಸಾರ್ವಜನಿಕ ದಾಖಲೆಯ ಭಾಗವಾಗುತ್ತದೆ" ಎಂದು ಹೇಳಿದೆ.

ನ್ಯಾಯಾಲಯ ತನ್ನ ವೆಬ್‌ಸೈಟ್‌ನಿಂದ ತೀರ್ಪನ್ನು ತೆಗೆದುಹಾಕುವಂತೆ ಕೇಳಿರುವ ಮದ್ರಾಸ್ ಹೈಕೋರ್ಟ್ ಆದೇಶದ ವಿರುದ್ಧ "ಇಂಡಿಯಾ ಕಾನೂನ್" ಪೋರ್ಟಲ್ ಸಲ್ಲಿಸಿದ ಮೇಲ್ಮನವಿಯನ್ನು ವಿಚಾರಣೆ ನಡೆಸುತ್ತಿದೆ. ಕಾರ್ತಿಕ್ ಥಿಯೋಡರ್ ಎಂಬಾತನ ಮನವಿಯ ಮೇರೆಗೆ, ಮದ್ರಾಸ್ ಹೈಕೋರ್ಟ್ ಈ ತೀರ್ಪು ನೀಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಹಿಳಾ ಮೀಸಲಾತಿ ಮಸೂದೆಗೆ ಬೆಂಬಲ; ಆದರೆ ಡೀಲಿಮಿಟೇಷನ್ ಗೆ ಪ್ರತಿಪಕ್ಷಗಳ ವಿರೋಧ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

EVM ಬದಲು ಬ್ಯಾಲೆಟ್ ಪೇಪರ್ ಬಳಕೆ ಮಸೂದೆಗೆ ಕೊನೆಗೂ ರಾಜ್ಯಪಾಲರ ಅಂಕಿತ!

ಪಾಕಿಸ್ತಾನಕ್ಕೆ ಶಾಕ್! ಕೇಂದ್ರದ ಡೀಲಿಮಿಟೇಷನ್ ಮಸೂದೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಕ್ಷೇತ್ರಗಳ ಮರುಹಂಚಿಕೆಗೆ ಕ್ರಮ!

'ಚೀನಾ, ಇಡೀ ಜಗತ್ತಿಗೆ' ಹಾರ್ಮುಜ್ ಅನ್ನು 'ಶಾಶ್ವತವಾಗಿ' ತೆರೆಯುತ್ತೇವೆ; ಜಿನ್ ಪಿಂಗ್ ನನಗೆ ದೊಡ್ಡ ಅಪ್ಪುಗೆ ನೀಡುತ್ತಾರೆ: ಟ್ರಂಪ್

BJP ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣ: Congress ಶಾಸಕ ವಿನಯ್ ಕುಲಕರ್ಣಿ ಅಪರಾಧಿ; ಕೋರ್ಟ್ ತೀರ್ಪು!

SCROLL FOR NEXT