ಪಾಕ್ ನಿರಾಶ್ರಿತ ಮಹಿಳೆಗೆ PAN ಕಾರ್ಡ್  online desk
ದೇಶ

ಗುಜರಾತ್ ನಲ್ಲಿರುವ ಪಾಕ್ ನಿರಾಶ್ರಿತೆಗೆ PAN ಕಾರ್ಡ್ ವಿತರಣೆ!

ದೀರ್ಘಾವಧಿ ವೀಸಾದಲ್ಲಿರುವ ಪಾಕಿಸ್ತಾನಿ ಪ್ರಜೆಗಳಿಗೆ ಈ ಹಿಂದೆ ಪತ್ತೆಯಾದ ಪಡಿತರ ಚೀಟಿ, ಆಧಾರ್ ಕಾರ್ಡ್, ಆದಾಯದ ಪುರಾವೆ ಮತ್ತು ಆಯುಷ್ಮಾನ್ ಕಾರ್ಡ್ ಜೊತೆಗೆ ಇದೀಗ ಪ್ಯಾನ್ ಕಾರ್ಡ್ ಸಮಸ್ಯೆ ತಲೆದೋರಿದೆ.

ನವದೆಹಲಿ: ಗುಜರಾತ್ ನಲ್ಲಿ ವಾಸವಿರುವ ಪಾಕಿಸ್ತಾನ ನಿರಾಶ್ರಿತೆ PAN ಕಾರ್ಡ್ ನೀಡಲಾಗಿರುವ ಪ್ರಕರಣ ಪತ್ತೆಯಾಗಿದೆ. ಸಹರ್ನಗರದಲ್ಲಿ ವಾಸವಿರುವ ಪಾಕಿಸ್ತಾನ ಮೂಲದ ನಿರಾಶ್ರಿತರ ಕುಟುಂಬದ ಮಹಿಳೆಗೆ ಈ PAN ಕಾರ್ಡ್ ನೀಡಲಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಹೇಳಿದೆ.

ಆರೋಗ್ಯ ಇಲಾಖೆಯ ತನಿಖೆಯಲ್ಲಿ ಈ ಪ್ರಕರಣ ಬಯಲಾಗಿದ್ದು, ಭೂರಿಬೆನ್ ಠಾಕೋರ್ (ಅಲಿಯಾಸ್ ಭೂರಿ ಶಾಂಡೋ) ಎಂಬ ಪಾಕ್ ನಿರಾಶ್ರಿತ ಕುಟುಂಬಕ್ಕೆ ಆಯುಷ್ಮಾನ್ ಕಾರ್ಡ್ ನೀಡಿರುವುದರ ಬಗ್ಗೆಯೂ ತನಿಖೆ ನಡೆಯಲಿದೆ.

ದೀರ್ಘಾವಧಿ ವೀಸಾದಲ್ಲಿರುವ ಪಾಕಿಸ್ತಾನಿ ಪ್ರಜೆಗಳಿಗೆ ಈ ಹಿಂದೆ ಪತ್ತೆಯಾದ ಪಡಿತರ ಚೀಟಿ, ಆಧಾರ್ ಕಾರ್ಡ್, ಆದಾಯದ ಪುರಾವೆ ಮತ್ತು ಆಯುಷ್ಮಾನ್ ಕಾರ್ಡ್ ಜೊತೆಗೆ ಇದೀಗ ಪ್ಯಾನ್ ಕಾರ್ಡ್ ಸಮಸ್ಯೆ ತಲೆದೋರಿದೆ.

ದೀರ್ಘಾವಧಿಯ ವೀಸಾದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಕುಟುಂಬವು 2021 ರಲ್ಲಿ ಪಡಿತರ ಚೀಟಿಯನ್ನು ಹೊಂದಿತ್ತು ಎಂದು ಆರೋಗ್ಯ ಇಲಾಖೆಯ ತನಿಖೆಯಿಂದ ತಿಳಿದುಬಂದಿದೆ. ಪಾಕಿಸ್ತಾನಿ ನಿರಾಶ್ರಿತರ ಹೆಸರಿನಲ್ಲಿ ಪ್ಯಾನ್ ಕಾರ್ಡ್ ನೀಡಿರುವುದು ಸಹ ಪತ್ತೆಯಾಗಿದೆ. ಮೆಹಸಾನ ಮಮ್ಮಲದಾರ ಕಛೇರಿಯು ಕುಟುಂಬಕ್ಕೆ ಪಡಿತರ ಚೀಟಿಯನ್ನು ನೀಡಿದ್ದು, ಅದರ ಆಧಾರದ ಮೇಲೆ ಮೆಹಸಾನ ತಾಲೂಕಾ ಅಭಿವೃದ್ದಿ ಅಧಿಕಾರಿಯ ಕಛೇರಿಯು ಆದಾಯ ವಿವರವನ್ನು ನೀಡಿದೆ. ಆದರೆ, ಎರಡು ವರ್ಷಗಳ ಹಿಂದೆ ಚುನಾವಣಾ ಕಾರ್ಡ್‌ನ ಸಮಸ್ಯೆ ಕಾಣಿಸಿಕೊಂಡಾಗ ಪಾಕಿಸ್ತಾನಿ ಕುಟುಂಬವು ಪಡಿತರ ಚೀಟಿಯನ್ನು ಒಪ್ಪಿಸಿತು.

“ಪಾಕಿಸ್ತಾನದ ಈ ಪ್ರಜೆಯು ಆದಾಯದ ವಿವರವನ್ನು ಬಳಸಿಕೊಂಡು ಪ್ಯಾನ್ ಕಾರ್ಡ್ ಪಡೆದಿರಬಹುದು, ಒಬ್ಬ ವ್ಯಕ್ತಿಯು ಪಡಿತರ ಚೀಟಿ, ಆಧಾರ್ ಕಾರ್ಡ್ ಮತ್ತು ಆದಾಯದ ವಿವರವನ್ನು ಹೊಂದಿದ್ದರೆ, ಪಾನ್ ಕಾರ್ಡ್ ಪಡೆಯುವುದು ಕಷ್ಟವೇನಲ್ಲ, ಈ ಆಧಾರದ ಮೇಲೆ ಮಹಿಳೆಯೂ ಸಹ ಪ್ಯಾನ್ ಕಾರ್ಡ್ ಪಡೆದುಕೊಂಡಿರಬಹುದು” ಎಂದು ಮೂಲವೊಂದು ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT