ಬಿಎಸ್ಎಫ್ ನಿಂದ ಪಾರ್ಥೇನಿಯಂ ನಿರ್ಮೂಲನೆ ಅಭಿಯಾನ 
ದೇಶ

ಒಳ್ಳೇ ಕಾರ್ಯ: ಇಂಡೋ-ಬಾಂಗ್ಲಾ ಗಡಿಯಲ್ಲಿ Parthenium ನಿರ್ಮೂಲನೆ ಅಭಿಯಾನ; BSF ಜೊತೆ ರೈತರು ಭಾಗಿ!

ಭಾರತ-ಬಾಂಗ್ಲಾದೇಶ ಗಡಿ ಪ್ರದೇಶದ ಸುಮಾರು 46 ಕಿಮೀ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಪಾರ್ಥೇನಿಯಂ ಗಿಡಗಳನ್ನು ಕಿತ್ತು ಹಾಕುವ ಕಾರ್ಯಕ್ಕೆ ಬಿಎಸ್ ಎಫ್ ಚಾಲನೆ ನೀಡಿದ್ದು, ಈ ವಿಶೇಷ ಕಾರ್ಯದಲ್ಲಿ ಸಾವಿರಾರು ಯೋಧರು ಕೈ ಜೋಡಿಸಿದ್ದಾರೆ.

ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶ ಗಡಿಯಲ್ಲಿ ಬೆಳೆದಿರುವ ಮಣ್ಣಿನ ಫಲವತ್ತತೆ ಮೇಲೆ ಅಡ್ಡ ಪರಿಣಾಮ ಬೀರುವ ಪಾರ್ಥೇನಿಯಂ ಗಿಡಗಳನ್ನು ಕಿತ್ತು ಬಿಸಾಡುವ ವಿಶೇಷ ಅಭಿಯಾನಕ್ಕೆ ಭಾರತದ ಗಡಿ ಭದ್ರತಾ ಪಡೆ BSF ಚಾಲನೆ ನೀಡಿದೆ.

ಭಾರತ-ಬಾಂಗ್ಲಾದೇಶ ಗಡಿ ಪ್ರದೇಶದ ಸುಮಾರು 46 ಕಿಮೀ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಪಾರ್ಥೇನಿಯಂ ಗಿಡಗಳನ್ನು ಕಿತ್ತು ಹಾಕುವ ಕಾರ್ಯಕ್ಕೆ ಬಿಎಸ್ ಎಫ್ ಚಾಲನೆ ನೀಡಿದ್ದು, ಈ ವಿಶೇಷ ಕಾರ್ಯದಲ್ಲಿ ಸಾವಿರಾರು ಯೋಧರು ಕೈ ಜೋಡಿಸಿದ್ದಾರೆ.

ಪಾರ್ಥೇನಿಯಂ ನಿರ್ಮೂಲನೆ ಮಾಡುವ ಕಾರ್ಯಕ್ರಮದಲ್ಲಿ ಬಿಎಸ್ಎಫ್ ಯೋಧರಿಗೆ ಸ್ಥಳೀಯರು ಮತ್ತು ರೈತರೂ ಕೂಡ ಕೈಜೋಡಿಸಿದ್ದು, ಗಡಿಯಲ್ಲಿ ಬೆಳೆದಿದ್ದ ಸಾವಿರಾರು ಪಾರ್ಥೇನಿಯಂ ಗಿಡಗಳನ್ನು ಕಿತ್ತು ಹಾಕಿದರು.

ನಾಡಿಯಾದ ಗಡಿ ಪ್ರದೇಶದ ಹಲ್ದಾರ್ ಪಾರಾ, ಬಿಜೋಯ್‌ಪುರ, ನಲುವಾಪಾರ, ರಾಂಡಿಪುರ ಪ್ರದೇಶಗಳಲ್ಲಿ ಈ Parthenium ನಿರ್ಮೂಲನೆ ಅಭಿಯಾನ ನಡೆದಿದ್ದು, ಬಿಎಸ್‌ಎಫ್‌ನ 32ನೇ ಬೆಟಾಲಿಯನ್ ಮುಖ್ಯಸ್ಥ ಸುಜೀತ್ ಕುಮಾರ್ ಅವರು ಪಾರ್ಥೇನಿಯಂ ಗಿಡದಿಂದಾಗುವ ಹಾನಿಕಾರಕ ಅಂಶಗಳನ್ನು ಸ್ಥಳೀಯರಿಗೆ ತಿಳಿಸುವ ಮೂಲಕ ಜಾಗೃತಿ ಮೂಡಿಸಲು ಪ್ರಯತ್ನಿಸಿದರು.

''ನಾನು ಮತ್ತು ನನ್ನ ತಂಡ ಪ್ರತಿದಿನ ಬೆಳಿಗ್ಗೆ 2 ಗಂಟೆಗಳ ಕಾಲ ಈ ಕೆಲಸವನ್ನು ಮಾಡುತ್ತಿದ್ದೇವೆ. ದಿನವಿಡೀ, ಎಲ್ಲಿಯಾದರೂ ಇಂತಹ ಹಾನಿಕಾರಕ ಗಿಡಗಳು ಕಂಡುಬಂದರೂ, ಅವುಗಳನ್ನು ನಿರ್ಮೂಲನೆ ಮಾಡಲು ಸೈನಿಕರಿಗೆ ಸೂಚಿಸಲಾಗಿದೆ. ಆ ಮೂಲಕ ಈ ಪ್ರದೇಶವನ್ನು ಶೀಘ್ರದಲ್ಲೇ ಪಾರ್ಥೇನಿಯಂ ಮುಕ್ತ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಸುಜೀತ್ ಕುಮಾರ್ ಹೇಳಿದರು.

ಸೈನಿಕರಿಗೆ ಸಾಥ್ ನೀಡಿ ಮಾತನಾಡಿದ ಸ್ಥಳೀಯ ರೈತರೊಬ್ಬರು.. ''ಈ ಪಾರ್ಥೇನಿಯಂ ಗಿಡಗಳು ನಮ್ಮ ಗ್ರಾಮದಲ್ಲಿ ಹೆಚ್ಚಾಗಿ ಬೆಳೆದಿದ್ದವು. ನಾವು ಬಿಎಸ್ಎಫ್ ಯೋಧರೊಂದಿಗೆ ಸೇರಿ ಈ ಹಾನಿಕಾರಕ ಗಿಡಗಳನ್ನು ಕಿತ್ತುಹಾಕುತ್ತಿದ್ದೇವೆ ಎಂದರು.

ಅಂದಹಾಗೆ, ಈ ಪಾರ್ಥೇನಿಯಂ ಮಣ್ಣಿಗೆ ತುಂಬಾ ಹಾನಿಕಾರಕವಾಗಿದ್ದು, ಈ ಹಾನಿಕಾರಕ ಸಸ್ಯವು ಮಣ್ಣಿನ ಫಲವತ್ತತೆಯನ್ನು ಸಂಪೂರ್ಣವಾಗಿ ನಾಶಪಡಿಸುತ್ತದೆ. ಪಾರ್ಥೇನಿಯಂನಲ್ಲಿ 'ಪಾರ್ಥೆನಿನ್' ಎಂಬ ಹಾನಿಕಾರಕ ರಾಸಾಯನಿಕವಿದ್ದು ಅದು ಒಂದು ರೀತಿಯ ವಿಷವಾಗಿದೆ. ಹೀಗಾಗಿ ಮಣ್ಣು ಕಲುಷಿತವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

Ragigudda Metro ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

SCROLL FOR NEXT