ಬಟ್ಟೆ ಬಿಚ್ಚಿ Payment ಆಯ್ತು ಎಂದ ಯುವತಿ 
ದೇಶ

Video: ಗಾಡಿಗೆ ಪೆಟ್ರೋಲ್ ಹಾಕಿಸಿಕೊಂಡು, ''ಬಟ್ಟೆ ಬಿಚ್ಚಿ Payment ಆಯ್ತು ಎಂದ ಯುವತಿ'', ವಿಡಿಯೋ ವೈರಲ್!

ಪೆಟ್ರೋಲ್ ಬಂಕ್ ವೊಂದರಲ್ಲಿ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ತುಂಬಿಸಿಕೊಂಡ ಯುವತಿಯರ ಗ್ಯಾಂಗ್ ವೊಂದು ಬಳಿಕ ಹಣ ನೀಡಿ ಎಂದ ಸಿಬ್ಬಂದಿಗೆ ಬಟ್ಟೆ ಬಿಚ್ಚಿ ಪೇಮೆಂಟ್ ಆಯ್ತು ಎಂದು ಹೇಳಿರುವ ಘಟನೆ ದೆಹಲಿಯಲ್ಲಿ ಈ ಘಟನೆ ನಡೆದಿದೆ.

ನವದೆಹಲಿ: ಪೆಟ್ರೋಲ್ ಬಂಕ್ ವೊಂದರಲ್ಲಿ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ತುಂಬಿಸಿಕೊಂಡು ಯುವತಿಯರ ಗ್ಯಾಂಗ್ ವೊಂದು ಬಳಿಕ ಹಣ ನೀಡಿ ಎಂದ ಸಿಬ್ಬಂದಿಗೆ ಬಟ್ಟೆ ಬಿಚ್ಚಿ ಪೇಮೆಂಟ್ ಆಯ್ತು ಎಂದು ಹೇಳಿರುವ ಘಟನೆ ವರದಿಯಾಗಿದೆ.

ಹೌದು.. ದೆಹಲಿ ಮೆಟ್ರೋ ರೈಲಿನಲ್ಲಿ ಯುವತಿಯರ ಅಸಭ್ಯ ವರ್ತನೆಗಳು ವರದಿಯಾಗುತ್ತಿರುವಂತೆಯೇ ಇತ್ತ ದೆಹಲಿ ಪೆಟ್ರೋಲ್ ಬಂಕ್ ನಲ್ಲೂ ಅಂತಹುದೇ ಘಟನೆ ವರದಿಯಾಗಿದೆ.

ಪೆಟ್ರೋಲ್ ಬಂಕ್ ವೊಂದರಲ್ಲಿ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ತುಂಬಿಸಿಕೊಂಡ ಯುವತಿಯರ ಗ್ಯಾಂಗ್ ವೊಂದು ಬಳಿಕ ಹಣ ನೀಡಿ ಎಂದ ಸಿಬ್ಬಂದಿಗೆ ಬಟ್ಟೆ ಬಿಚ್ಚಿ ಪೇಮೆಂಟ್ ಆಯ್ತು ಎಂದು ಹೇಳಿರುವ ಘಟನೆ ದೆಹಲಿಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಬಂಕ್ ನಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ.

ದ್ವಿಚಕ್ರವಾಹನದಲ್ಲಿ ಬಂದ ಇಬ್ಬರು ಯುವತಿಯರ ತಂಡ ಮೊದಲು ಗಾಡಿಗೆ ಪೆಟ್ರೋಲ್ ತುಂಬಿಸಿಕೊಂಡಿದೆ. ಬಳಿಕ ಸಿಬ್ಬಂದಿ ಹಣ ಕೇಳಿದ್ದು ಯುವತಿ UPI ಮೂಲಕ ಪೇಮೆಂಟ್ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಪೇಮೆಂಟ್ ಫೇಲ್ ಆಗಿದ್ದು, ಸಿಬ್ಬಂದಿ ಕ್ಯಾಶ್ ನೀಡುವಂತೆ ಕೇಳಿದ್ದಾರೆ. ತಮ್ಮ ಬಳಿ ಕ್ಯಾಶ್ ಇಲ್ಲ ಎಂದು ಹೇಳಿದೆ. ಈ ವೇಳೆ ಸಿಬ್ಬಂದಿ ಹಣ ನೀಡಿ ಎಂದಾಗ ಕೆಲ ಹೊತ್ತು ಯುವತಿಯರು ವಾಗ್ವಾದ ನಡೆಸಿದ್ದಾರೆ.

ಸಿಬ್ಬಂದಿ ತಮ್ಮ ಬಂಕ್ ಮ್ಯಾನೇಜರ್ ತೋರಿಸಿ ಅವರಿಗೆ ಹೇಳಿ ಎಂದು ಹೇಳಿದ್ದಾರೆ. ಈ ವೇಳೆ ಗಾಡಿಯ ಮುಂಭಾಗದಲ್ಲಿದ್ದ ಯುವತಿ ಏಕಾಏಕಿ ಗಾಡಿಯಿಂದ ಇಳಿದು ತನ್ನ ಪ್ಯಾಂಟ್ ಬಿಚ್ಚಿ ಪೇಮೆಂಟ್ ಆಯ್ತು ಎಂದು ಹೇಳಿ ಅಲ್ಲಿಂದ ಹೋಗಲು ಯತ್ನಿಸಿದ್ದಾರೆ.

ಇವಿಷ್ಟೂ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ಯುವತಿಯರ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT