ಪ್ರಾತಿನಿಧಿಕ ಚಿತ್ರ 
ದೇಶ

ಆಹಾರ ಧಾನ್ಯ ಉತ್ಪಾದನೆ ಹೆಚ್ಚಳ, ಬೇಳೆಕಾಳುಗಳು ಉತ್ಪಾದನೆ ಕುಂಠಿತ!

2023-24ನೇ ಸಾಲಿನ ಆಹಾರ ಉತ್ಪಾದನೆಯ ಎರಡನೇ ಮುಂಗಡ ಅಂದಾಜನ್ನು ಸರ್ಕಾರ ಗುರುವಾರ ಬಿಡುಗಡೆ ಮಾಡಿದ್ದು, ಆಹಾರ ಧಾನ್ಯ ಉತ್ಪಾದನೆಯಲ್ಲಿ ವಿಶೇಷವಾಗಿ ಅಕ್ಕಿ ಮತ್ತು ಗೋಧಿ ಉತ್ಪಾದನೆಯಲ್ಲಿ ಹೆಚ್ಚಳವನ್ನು ತೋರಿಸಿದೆ. ಆದರೆ, ಬೇಳೆಕಾಳುಗಳ ಉತ್ಪಾದನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ನವದೆಹಲಿ: 2023-24ನೇ ಸಾಲಿನ ಆಹಾರ ಉತ್ಪಾದನೆಯ ಎರಡನೇ ಮುಂಗಡ ಅಂದಾಜನ್ನು ಸರ್ಕಾರ ಗುರುವಾರ ಬಿಡುಗಡೆ ಮಾಡಿದ್ದು, ಆಹಾರ ಧಾನ್ಯ ಉತ್ಪಾದನೆಯಲ್ಲಿ ವಿಶೇಷವಾಗಿ ಅಕ್ಕಿ ಮತ್ತು ಗೋಧಿ ಉತ್ಪಾದನೆಯಲ್ಲಿ ಹೆಚ್ಚಳವನ್ನು ತೋರಿಸಿದೆ. ಆದರೆ, ಬೇಳೆಕಾಳುಗಳ ಉತ್ಪಾದನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಖಾರಿಫ್ ಆಹಾರ ಧಾನ್ಯ ಉತ್ಪಾದನೆಯನ್ನು 1541.87 ಎಲ್‌ಎಂಟಿ ಎಂದು ಅಂದಾಜಿಸಲಾಗಿದೆ ಮತ್ತು 2023-24ನೇ ಸಾಲಿನಲ್ಲಿ ರಬಿ ಆಹಾರ ಧಾನ್ಯ ಉತ್ಪಾದನೆಯನ್ನು 1551.61 ಎಲ್‌ಎಂಟಿ ಎಂದು ಅಂದಾಜಿಸಲಾಗಿದೆ. ಖಾರಿಫ್ ಬೆಳೆ ಉತ್ಪಾದನೆಯ ಅಂದಾಜು ಮೊದಲ ಅಂದಾಜಿಗಿಂತ 56 ಎಲ್ಎಂಟಿಯಷ್ಟು ಹೆಚ್ಚಾಗಿದೆ.

ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು 2023-24ನೇ ಸಾಲಿನ ಪ್ರಮುಖ ಕೃಷಿ ಬೆಳೆಗಳ (ಖಾರಿಫ್ ಮತ್ತು ರಬಿ ಋತು) ಎರಡನೇ ಮುಂಗಡ ಅಂದಾಜುಗಳನ್ನು ಬಿಡುಗಡೆ ಮಾಡಿದೆ. ಹಿಂದಿನ ಕೃಷಿ ವರ್ಷದಿಂದ ಬೇಸಿಗೆಯನ್ನು ರಬಿ ಋತುವಿನಿಂದ ಪ್ರತ್ಯೇಕಿಸಲಾಗಿದೆ. ಆದ್ದರಿಂದ, ಈ ವರ್ಷದ ಎರಡನೇ ಮುಂಗಡ ಅಂದಾಜು ಪ್ರದೇಶ, ಉತ್ಪಾದನೆ ಮತ್ತು ಇಳುವರಿಯು ಕೇವಲ ಖಾರಿಫ್ ಮತ್ತು ರಬಿ ಋತುಗಳನ್ನು ಒಳಗೊಂಡಿದೆ.

ಸರ್ಕಾರವು 2022-23ರಲ್ಲಿ ಅಂದಾಜಿಸಿದ್ದ 1105.12 ಎಲ್‌ಎಂಟಿಗೆ ಹೋಲಿಸಿದರೆ ಈ ಬಾರಿ ಖಾರಿಫ್ ಋತುವಿನಲ್ಲಿ 1114.58 ಎಲ್ಎಂಟಿ ಅಕ್ಕಿ ಉತ್ಪಾದನೆಯನ್ನು ಅಂದಾಜಿಸಿದೆ. ರಬಿ ಋತುವಿನ ಭತ್ತದ ಸದ್ಯದ ಅಂದಾಜಿನ ಪ್ರಕಾರ, ಇನ್ನೂ ಕೊಯ್ಲು ಪ್ರಾರಂಭಿಸಬೇಕಾಗಿದ್ದು, 123.57 ಎಲ್ಎಂಟಿ ಉತ್ಪಾದನೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಹಾಗೆಯೇ, ಗೋಧಿ ಕಟಾವು ಇನ್ನೂ ಪ್ರಾರಂಭವಾಗದಿದ್ದರೂ, ಸರ್ಕಾರವು ಬಂಪರ್ ಉತ್ಪಾದನೆಯನ್ನು ಅಂದಾಜಿಸಿದೆ. ಈ ಪ್ರಕಾರ, ಗೋಧಿ ಉತ್ಪಾದನೆಯು ಈ ಬಾರಿ 1120.19 ಎಲ್ಎಂಟಿ ಆಗಿದ್ದು, ಇದು ಹಿಂದಿನ ವರ್ಷದ ಉತ್ಪಾದನೆಯಾದ 1105.54 ಎಲ್ಎಂಟಿಗೆ ಹೋಲಿಸಿದರೆ 14.65 ಎಲ್ಎಂಟಿಯಷ್ಟು ಹೆಚ್ಚಾಗಿದೆ.

ಆದಾಗ್ಯೂ, ತೊಗರಿ ಮತ್ತು ಕಡಲೆಯಂತಹ ಪ್ರಮುಖ ದ್ವಿದಳ ಧಾನ್ಯಗಳ ಉತ್ಪಾದನೆಯ ಬಗ್ಗೆ ಕಳವಳವಿದೆ. ಈ ವರ್ಷದ ಅಂದಾಜಿನ ಪ್ರಕಾರ 33.39 ಎಲ್ಎಂಟಿ ಉತ್ಪಾದನೆಯನ್ನು ಸೂಚಿಸಿದ್ದು, ಇದು ಕಳೆದ ವರ್ಷದ 33.12 ಎಲ್ಎಂಟಿ ಉತ್ಪಾದನೆಗೆ ಹೋಲುತ್ತದೆ. ಕಡಲೆ ಉತ್ಪಾದನೆಯು 121.61 ಎಲ್ಎಂಟಿ ಎಂದು ಅಂದಾಜಿಸಲಾಗಿದೆ. ಇದು ಕೂಡ ಹಿಂದಿನ ವರ್ಷಕ್ಕಿಂತ ಸ್ವಲ್ಪ ಕಡಿಮೆ ಉತ್ಪಾದನೆಯಾಗಿದೆ. ಆದರೆ, 2018-19 ರಿಂದ 2022-23 ರವರೆಗಿನ ಸರಾಸರಿ ಉತ್ಪಾದನೆಗಿಂತ ಉತ್ಪಾದನೆ ಹೆಚ್ಚಾಗಿದೆ. ಮಸೂರ ಉತ್ಪಾದನೆಯು 16.36 ಎಲ್ಎಂಟಿ ಎಂದು ಅಂದಾಜಿಸಲಾಗಿದೆ. ಇದು ಹಿಂದಿನ ವರ್ಷದ ಉತ್ಪಾದನೆಯಾದ 15.59 ಎಲ್ಎಂಟಿಗಿಂತ 0.77 ಎಲ್ಎಂಟಿ ಹೆಚ್ಚಾಗಿದೆ ಎಂದು ಸರ್ಕಾರ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT