ಪ್ರಶಾಂತ್ ಕಿಶೋರ್
ದೇಶ

ಆಂಧ್ರ ವಿಧಾನಸಭಾ ಚುನಾವಣೆ: ಈ ಬಾರಿ ಜಗನ್ ಗೆ ದೊಡ್ಡ ಹೊಡೆತ- ಪ್ರಶಾಂತ್ ಕಿಶೋರ್

ಹೈದರಾಬಾದ್: 2019 ರಲ್ಲಿ ವೈಎಸ್‌ಆರ್‌ಸಿ ಮುಖ್ಯಸ್ಥ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಬೃಹತ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಿರಿಯ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿಗೆ ದೊಡ್ಡ ಹೊಡೆತ ಬೀಳಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಭಾನುವಾರ ನಡೆದ TNIE ಸಹಯೋಗದ 'ಹೈದರಾಬಾದ್ ಡೈಲಾಗ್ಸ್‌'ನಲ್ಲಿ ಭಾರತದಲ್ಲಿ ಚುನಾವಣಾ ಪೂರ್ವ ಸನ್ನಿವೇಶಗಳ ಕುರಿತು ಮಾತನಾಡಿದ ಪ್ರಶಾಂತ್ ಕಿಶೋರ್, ಜಗನ್ ಅಲುಗಾಡುತ್ತಿರುವ ವಿಕೆಟ್, ಅವರು ತುಂಬಾ ಕೆಳಗೆ ಹೋಗಿದ್ದಾರೆ. ಅವರು ಈ ಬಾರಿ ಸೋಲುವುದು ಮಾತ್ರವಲ್ಲ, ದೊಡ್ಡ ಹೊಡೆತ ಬೀಳಲಿದೆ ಎಂದರು.

ಜಗನ್ ಎಲ್ಲಾ ಮೊಟ್ಟೆಗಳನ್ನು ಒಂದೇ ಬುಟ್ಟಿಯಲ್ಲಿ ಹಾಕುವಲ್ಲಿ ತಪ್ಪು ಮಾಡಿದ್ದಾರೆ."ಇದು ಅವರು ರಾಜ್ಯವನ್ನು ಹೇಗೆ ನಡೆಸುತ್ತಿದ್ದರು ಎಂಬುದರ ಕಾರ್ಯವಾಗಿದೆ. ಆಂಧ್ರ ಬಹುಶಃ ಮಧ್ಯಮ-ಆದಾಯದ ವರ್ಗಕ್ಕೆ ಸೇರುತ್ತದೆ. ನೀವು ಬಂಡವಾಳ ಸೃಷ್ಟಿ ಮತ್ತು ಹೊಸ ಮೂಲಸೌಕರ್ಯಗಳ ಬಗ್ಗೆ ಮಾತನಾಡದೆ ವಿತರಣೆಯ ಕಡೆ ಮಾತ್ರ ಗಮನಹರಿಸುತ್ತಿದ್ದರೆ ದೊಡ್ಡ ಕಾರ್ಯತಂತ್ರದ ಅಪಾಯವನ್ನು ತೆಗೆದುಕೊಳ್ಳುತ್ತಿರುವಿರಿ ಎಂದರು.

ಜಗನ್ ಸರ್ಕಾರ ಹೆಚ್ಚುವರಿ ಸಾಲದ ವೆಚ್ಚದಲ್ಲಿಯೂ ಡೋಲ್ಸ್ ಮತ್ತು ನೇರ ಲಾಭ ವರ್ಗಾವಣೆ (ಡಿಬಿಟಿ) ನೀಡಲು ಹೆಚ್ಚಿನ ಆದ್ಯತೆ ನೀಡಿದೆ. ಇದು ಕಡಿಮೆ ಆದಾಯದ ರಾಜ್ಯದಲ್ಲಿ ಕೆಲಸ ಮಾಡಬಹುದು ಆದರೆ ಆಂಧ್ರಪ್ರದೇಶದಲ್ಲಿ ನಗರೀಕರಣವು ಶೇಕಡಾ 50 ಕ್ಕಿಂತ ಹೆಚ್ಚಾಗಿದೆ. ಸರ್ಕಾರ ಜನಸಾಮಾನ್ಯರಿಗೆ ನೀಡುತ್ತಿರುವ ಉಚಿತ ಪ್ರಯೋಜನದ ದೃಷ್ಟಿಯಿಂದ ಮಾತ್ರ ನೋಡಿದಾಗ, ಅದು ಮಾಡದಿರಬಹುದಿತ್ತು. ಏಕೆಂದರೆ ಶೇ. 50 ರಷ್ಟು ಜನರು ಅದಕ್ಕೆ ಅರ್ಹರಲ್ಲ ಮತ್ತು ಸರ್ಕಾರ ಅವರನ್ನು ತಲುಪುತ್ತಿಲ್ಲ ಎಂದರು.

ಕೆಲ ತಿಂಗಳ ಹಿಂದೆ ವಿಜಯವಾಡದಲ್ಲಿ ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರೊಂದಿಗೆ ಮೂರು ಗಂಟೆಗಳ ಕಾಲ ಮಾತುಕತೆ ನಡೆಸಿದ್ದೇನೆ ಆದರೆ ಪಕ್ಷದೊಂದಿಗೆ ಯಾವುದೇ ರೀತಿಯಲ್ಲಿ ಸಂಬಂಧ ಹೊಂದಿಲ್ಲ ಎಂದು ಪುನರುಚ್ಚರಿಸಿದರು. ಆಂಧ್ರ, ತಮಿಳುನಾಡು ಮತ್ತು ಟಿಎಸ್‌ನಲ್ಲಿ ವರ್ಗದ ಆಧಾರದ ಮೇಲೆ ಚುನಾವಣೆಗಳನ್ನು ಎದುರಿಸಲು ಸಾಧ್ಯವಿಲ್ಲ. ಜಗನ್‌ಗೆ ಪುನರಾಗಮನ ಮಾಡುವುದು ತುಂಬಾ ಕಷ್ಟ. ದಕ್ಷಿಣದ ರಾಜ್ಯಗಳಲ್ಲಿ ಯಾವುದೇ ರಾಜಕಾರಣಿ ಸತತ ಮೂರು ಚುನಾವಣೆಗಳನ್ನು ಗೆಲ್ಲಲು ಹೋಗಿಲ್ಲ ಮತ್ತು ತಾಂತ್ರಿಕವಾಗಿ, ಯಾರೂ ಸತತವಾಗಿ ಎರಡು ಅವಧಿಗಳನ್ನು ಗೆದ್ದಿಲ್ಲ. ಶರ್ಮಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದರೂ ಚುನಾವಣೆಯಲ್ಲಿ ಯಾವುದೇ ವರ್ಕ್ ಔಟ್ ಆಗಲ್ಲ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT