ಅಸಾದುದ್ದೀನ್ ಓವೈಸಿ 
ದೇಶ

'ದೇಶದಲ್ಲಿ ಹಿಂದೂ ಜನಸಂಖ್ಯೆ ಇಳಿಕೆ ಎಂಬುದು ವಾಟ್ಸಾಪ್ ವಿಶ್ವ ವಿದ್ಯಾಲಯದ ವರದಿ': ಅಸಾದುದ್ದೀನ್ ಓವೈಸಿ ಟೀಕೆ

ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ನಾಯಕ ಅಸಾದುದ್ದೀನ್ ಓವೈಸಿ ಅವರು ಪಿಎಂ(ಇಎಸಿ-ಪಿಎಂ)ಆರ್ಥಿಕ ಸಲಹಾ ಮಂಡಳಿ ವರದಿ ವಾಟ್ಸಾಪ್ ವಿಶ್ವವಿದ್ಯಾಲಯದ ವರದಿ ಎಂದು ಟೀಕಿಸಿದ್ದಾರೆ.

ಹೈದರಾಬಾದ್: ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ನಾಯಕ ಅಸಾದುದ್ದೀನ್ ಓವೈಸಿ ಅವರು ಪಿಎಂ(ಇಎಸಿ-ಪಿಎಂ)ಆರ್ಥಿಕ ಸಲಹಾ ಮಂಡಳಿ ವರದಿ ವಾಟ್ಸಾಪ್ ವಿಶ್ವವಿದ್ಯಾಲಯದ ವರದಿ ಎಂದು ಟೀಕಿಸಿದ್ದಾರೆ.

ದೇಶದಲ್ಲಿ ಹಿಂದೂ ಜನಸಂಖ್ಯೆ ಕಡಿಮೆಯಾಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಓವೈಸಿ, "ವರದಿಯನ್ನು ಓದಿದ ಬಳಿಕ ನಾನು ಪ್ರತಿಕ್ರಿಯಿಸುತ್ತೇನೆ. ಇದು ಯಾರ ವರದಿ? ಈ ವರದಿಯನ್ನು ಯಾರು ಮಾಡಿದ್ದಾರೆ? ಇದು ವಾಟ್ಸಾಪ್ ವಿಶ್ವ ವಿದ್ಯಾಲಯದ ವರದಿಯಾಗಿರಬೇಕು ಎಂದಿದ್ದಾರೆ.

ಭಾರತದಲ್ಲಿ, 1950 ಮತ್ತು 2015 ರ ನಡುವೆ ಬಹುಸಂಖ್ಯಾತ ಹಿಂದೂ ಜನಸಂಖ್ಯೆಯ ಪಾಲು ಶೇಕಡಾ 7.82 ರಷ್ಟು ಕಡಿಮೆಯಾಗಿದೆ (ಶೇಕಡಾ 84.68 ರಿಂದ 78.06 ಕ್ಕೆ ಇಳಿಕೆಯಾಗಿದೆ ಎಂದು ಪ್ರಧಾನ ಮಂತ್ರಿಯ (ಇಎಸಿ-ಪಿಎಂ) ಆರ್ಥಿಕ ಸಲಹಾ ಮಂಡಳಿಯ ವರದಿಯ ನಡುವೆ ಓವೈಸಿಯ ಹೇಳಿಕೆಗಳು ಬಂದಿವೆ. 1950ರಲ್ಲಿ ಶೇ.9.84ರಷ್ಟಿದ್ದ ಮುಸ್ಲಿಂ ಜನಸಂಖ್ಯೆಯ ಪಾಲು 2015ರಲ್ಲಿ ಶೇ.14.09ಕ್ಕೆ ಏರಿಕೆಯಾಗಿದೆ, ಮುಸಲ್ಮಾನರ ಜನಸಂಖ್ಯೆ ಪಾಲು ಶೇ.43.15ರಷ್ಟು ಹೆಚ್ಚಳವಾಗಿದೆ.

ಬಿಜೆಪಿಯ ರಾಷ್ಟ್ರೀಯ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ಉಸ್ತುವಾರಿ ಅಮಿತ್ ಮಾಳವಿಯಾ ಅವರು ಪ್ರಧಾನಿಗೆ ಆರ್ಥಿಕ ಸಲಹಾ ಮಂಡಳಿ (ಇಎಸಿ-ಪಿಎಂ) ನೀಡಿದ ವರದಿಯ ಬಗ್ಗೆ ಪ್ರತಿಕ್ರಿಯಿಸಿ ದೇಶವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟರೆ ಆಗ ಹಿಂದೂಗಳಿಗೆ ದೇಶ ಖಂಡಿತಾ ಉಳಿಯುವುದಿಲ್ಲ ಎಂದಿದ್ದಾರೆ.

ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಹಿಂದೂ ಜನಸಂಖ್ಯೆಯ ಇಳಿಕೆಗೆ ಕಾಂಗ್ರೆಸ್ ಹೊಣೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಮುಸ್ಲಿಂ ತುಷ್ಟೀಕರಣದ ರಾಜಕೀಯದಿಂದಾಗಿ ಮುಸ್ಲಿಂ ಜನಸಂಖ್ಯೆ ಹೆಚ್ಚಾಗುತ್ತಿದೆ. ಇದು ಕಳವಳಕಾರಿ ವಿಷಯವಾಗಿದೆ. ಹಿಂದೂ ಮತ್ತು ಮುಸ್ಲಿಂ ಜನಸಂಖ್ಯೆಯಲ್ಲಿನ ಈ ಅಸಮತೋಲನ - ಮುಸ್ಲಿಂ ಜನಸಂಖ್ಯೆಯ ಏರಿಕೆ ಮತ್ತು ಹಿಂದೂ ಜನಸಂಖ್ಯೆಯಲ್ಲಿ ಕುಸಿತ, ಕಾಂಗ್ರೆಸ್ ಪಕ್ಷದ ಮುಸ್ಲಿಂ ಓಲೈಕೆಯಿಂದಾಗಿ ಆಗುತ್ತಿದೆ ಎಂದಿದ್ದಾರೆ.

EAC ವರದಿಯ ಪ್ರಕಾರ, ಕ್ರಿಶ್ಚಿಯನ್ ಜನಸಂಖ್ಯೆಯ ಪಾಲು ಶೇಕಡಾ 2.24 ರಿಂದ 2.36 ಕ್ಕೆ ಏರಿತು - 1950 ಮತ್ತು 2015 ರ ನಡುವೆ 5.38 ಶೇಕಡಾ ಹೆಚ್ಚಳವಾಗಿದೆ. ಸಿಖ್ ಜನಸಂಖ್ಯೆಯ ಪಾಲು 1950 ರಲ್ಲಿ ಶೇಕಡಾ 1.24 ರಿಂದ 2015 ರಲ್ಲಿ ಶೇಕಡಾ 1.85 ಕ್ಕೆ ಏರಿಕೆಯಾಗಿದೆ. ಬೌದ್ಧ ಜನಸಂಖ್ಯೆಯ ಪಾಲು ಸಹ 1950 ರಲ್ಲಿ 0.05 ಪ್ರತಿಶತದಿಂದ 0.81 ಪ್ರತಿಶತಕ್ಕೆ ಗಮನಾರ್ಹ ಹೆಚ್ಚಳವನ್ನು ಕಂಡಿತು.

ಮತ್ತೊಂದೆಡೆ, ಭಾರತದ ಜನಸಂಖ್ಯೆಯಲ್ಲಿ ಜೈನರ ಪಾಲು 1950 ರಲ್ಲಿ ಶೇಕಡಾ 0.45 ರಿಂದ 2015 ರಲ್ಲಿ ಶೇಕಡಾ 0.36 ಕ್ಕೆ ಕಡಿಮೆಯಾಗಿದೆ. ಭಾರತದಲ್ಲಿ ಪಾರ್ಸಿ ಜನಸಂಖ್ಯೆಯ ಪಾಲು ಶೇಕಡಾ 85 ರಷ್ಟು ಕುಸಿತವನ್ನು ಕಂಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಲಬುರಗಿ: ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

Punishment: 5 ವರ್ಷದ ಬಾಲಕನನ್ನು ಮರಕ್ಕೆ ನೇತು ಹಾಕಿದ ಶಿಕ್ಷಕಿ!

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

SCROLL FOR NEXT