ವಕ್ಫ್ ಮಸೂದೆ ಕುರಿತ ಜೆಪಿಸಿ ಸದಸ್ಯರೊಂದಿಗೆ ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್ online desk
ದೇಶ

ವಕ್ಫ್ ಮಸೂದೆ: JPC ಮುಂದಿನ ಸಭೆಗಳಿಗೆ ವಿಪಕ್ಷ ಸದಸ್ಯರ ಬಹಿಷ್ಕಾರ

ವಕ್ಫ್ ತಿದ್ದುಪಡಿ ಮಸೂದೆಯ ಕುರಿತು ಜೆಪಿಸಿ ಸದಸ್ಯರಾಗಿರುವ ಬ್ಯಾನರ್ಜಿ ಮಾತನಾಡಿದ್ದು, ಜೆಪಿಸಿ ಅಧ್ಯಕ್ಷರು ಗುವಾಹಟಿ, ಭುವನೇಶ್ವರ್, ಕೋಲ್ಕತ್ತಾ, ಪಾಟ್ನಾ ಮತ್ತು ಲಕ್ನೋದಲ್ಲಿ ಆರು ದಿನಗಳ ಕಾಲ ಸಭೆಗಳ ತೀವ್ರ ವೇಳಾಪಟ್ಟಿಯನ್ನು ನಿಗದಿಪಡಿಸಿದ್ದಾರೆ ಎಂದು ಸಂಸದ ಕಲ್ಯಾಣ್ ಬ್ಯಾನರ್ಜಿ ಆರೋಪಿಸಿದ್ದಾರೆ.

ನವದೆಹಲಿ: ವಕ್ಫ್ ತಿದ್ದುಪಡಿ ವಿಧೇಯಕಕ್ಕೆ ಸಂಬಂಧಿಸಿದಂತೆ ಜೆಪಿಸಿ ಅಧ್ಯಕ್ಷರ ದರ್ಪ ಮತ್ತು ಅನಿಯಂತ್ರಿತ ಕ್ರಮವನ್ನು ಆರೋಪಿಸಿದ ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ, ಜಂಟಿ ಸಂಸದೀಯ ಸಮಿತಿಯ ವಿರೋಧ ಪಕ್ಷದ ಸದಸ್ಯರು ನವೆಂಬರ್ 9 ರಿಂದ ಪ್ರಾರಂಭವಾಗುವ ಮುಂದಿನ ಸುತ್ತಿನ ಸಭೆಗಳನ್ನು ಬಹಿಷ್ಕರಿಸುವುದಾಗಿ ಹೇಳಿದ್ದಾರೆ.

ವಕ್ಫ್ ತಿದ್ದುಪಡಿ ಮಸೂದೆಯ ಕುರಿತು ಜೆಪಿಸಿ ಸದಸ್ಯರಾಗಿರುವ ಬ್ಯಾನರ್ಜಿ ಮಾತನಾಡಿದ್ದು, ಜೆಪಿಸಿ ಅಧ್ಯಕ್ಷರು ಗುವಾಹಟಿ, ಭುವನೇಶ್ವರ್, ಕೋಲ್ಕತ್ತಾ, ಪಾಟ್ನಾ ಮತ್ತು ಲಕ್ನೋದಲ್ಲಿ ಆರು ದಿನಗಳ ಕಾಲ ಸಭೆಗಳ ತೀವ್ರ ವೇಳಾಪಟ್ಟಿಯನ್ನು ನಿಗದಿಪಡಿಸಿದ್ದಾರೆ. ಭಾನುವಾರದಂದು ರಜಾದಿನವಾಗಿದೆ. ಅಧ್ಯಕ್ಷರು ಅನಿಯಂತ್ರಿತ ರೀತಿಯಲ್ಲಿ ಕೆಲಸ ಮಾಡುತ್ತಿರುವ ಕಾರಣ ಎಲ್ಲಾ ವಿಪಕ್ಷ ಸದಸ್ಯರು ಜೆಪಿಸಿಯ ಪ್ರವಾಸ ಮತ್ತು ಅದರ ಸಭೆಗಳನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ ಎಂದು ಕೋಲ್ಕತ್ತಾದ ಪ್ರೆಸ್ ಕ್ಲಬ್‌ನಲ್ಲಿ ಪಕ್ಷದ ಸಂಸದ ನದಿಮುಲ್ ಹಕ್ ಅವರೊಂದಿಗೆ ಜಂಟಿಯಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ಯಾನರ್ಜಿ ಹೇಳಿದ್ದಾರೆ.

ಮುಂದಿನ ಕ್ರಮವನ್ನು ಪ್ರತಿಪಕ್ಷಗಳ ಸದಸ್ಯರು ಒಟ್ಟಾಗಿ ನಿರ್ಧರಿಸುತ್ತಾರೆ ಎಂದು ಬ್ಯಾನರ್ಜಿ ತಿಳಿಸಿದ್ದಾರೆ. ಜೆಪಿಸಿಯ ವಿರೋಧ ಪಕ್ಷದ ಸದಸ್ಯರು ನವೆಂಬರ್ 5 ರಂದು ಲೋಕಸಭೆ ಸ್ಪೀಕರ್ ಅವರನ್ನು ಭೇಟಿ ಮಾಡಿ ವೇಳಾಪಟ್ಟಿಯನ್ನು ಮುಂದೂಡುವಂತೆ ಕೋರಿದರು ಮತ್ತು ಜೆಪಿಸಿಯ ಸಭೆಗಳ ಸಂಖ್ಯೆಯನ್ನು ವಾರಕ್ಕೆ ಎರಡು ದಿನಗಳಿಂದ ವಾರಕ್ಕೆ ಒಂದು ದಿನಕ್ಕೆ ಅಥವಾ ಹದಿನೈದು ದಿನಗಳಲ್ಲಿ ಸತತ ಎರಡು ದಿನಗಳಿಗೆ ಕಡಿತಗೊಳಿಸಬೇಕೆಂದು ಬ್ಯಾನರ್ಜಿ ಆಗ್ರಹಿಸಿದ್ದಾರೆ.

ಸಭಾಧ್ಯಕ್ಷರು ತಮ್ಮ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಗಣಿಸಿ ಸಭಾಪತಿಯೊಂದಿಗೆ ಮಾತನಾಡುವುದಾಗಿ ಮೌಖಿಕವಾಗಿ ಒಪ್ಪಿಕೊಂಡರು, ಆದರೆ ನಂತರ ಏನೂ ಆಗಲಿಲ್ಲ ಎಂದು ಬ್ಯಾನರ್ಜಿ ದೂರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್