ದೇಶ

ನಮ್ಮ ಪೂರ್ವಜರು ಬ್ರಿಟಿಷರ ವಿರುದ್ಧ ಜಿಹಾದ್ ಮಾಡಿದರು, ಆದರೆ ನಿಮ್ಮವರು ಪ್ರೇಮಪತ್ರ ಬರೆದರು: ಫಡ್ನವೀಸ್‌ಗೆ ಓವೈಸಿ ತಿರುಗೇಟು

ಈ ಬಾರಿ ಮತದಾನ ನಡೆಯಲಿರುವ ಮಹಾರಾಷ್ಟ್ರದಲ್ಲಿ "ಮತ ಜಿಹಾದ್" ಆರಂಭವಾಗಿದೆ ಎಂದು ಫಡ್ನವಿಸ್ ಶನಿವಾರ ಪ್ರತಿಪಾದಿಸಿದ್ದು, ಇದನ್ನು "ಧರ್ಮ ಯುದ್ಧ"ದ ಮತದಿಂದ ಎದುರಿಸಬೇಕಾಗಿದೆ ಎಂದು ಹೇಳಿದ್ದಾರೆ.

ಛತ್ರಪತಿ ಸಂಭಾಜಿನಗರ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು "ವೋಟ್ ಜಿಹಾದ್" ಹೇಳಿಕೆ ನೀಡಿ, ಬ್ರಿಟಿಷರ ವಿರುದ್ಧ ಹೋರಾಡುವ ಬದಲು ನಮ್ಮ ಸೈದ್ಧಾಂತಿಕ ಪೂರ್ವಜರು ಬ್ರಿಟಿಷರಿಗೆ "ಪ್ರೇಮ ಪತ್ರ" ಬರೆದಿದ್ದರು ಎಂಬ ಮಾತುಗಳಿಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಟೀಕಿಸಿದ್ದಾರೆ.

ನಿನ್ನೆ ನಡೆದ ಸಾರ್ವಜನಿಕ ಸಭೆಯಲ್ಲಿ ಒವೈಸಿ ಅವರು ಪ್ರಧಾನಿ ನರೇಂದ್ರ ಮೋದಿಯವರ “ಏಕ್ ಹೈ ಟು ಸೇಫ್ ಹೈ” ಘೋಷಣೆಯು ವೈವಿಧ್ಯತೆಯ ತತ್ವಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿದರು.

ಈ ಬಾರಿ ಮತದಾನ ನಡೆಯಲಿರುವ ಮಹಾರಾಷ್ಟ್ರದಲ್ಲಿ "ಮತ ಜಿಹಾದ್" ಆರಂಭವಾಗಿದೆ ಎಂದು ಫಡ್ನವಿಸ್ ಶನಿವಾರ ಪ್ರತಿಪಾದಿಸಿದ್ದು, ಇದನ್ನು "ಧರ್ಮ ಯುದ್ಧ"ದ ಮತದಿಂದ ಎದುರಿಸಬೇಕಾಗಿದೆ ಎಂದು ಹೇಳಿದ್ದಾರೆ.

ದೇವೇಂದ್ರ ಫಡ್ನವೀಸ್ ಹೇಳಿಕೆಯನ್ನು ಟೀಕಿಸಿದ ಓವೈಸಿ, "ನಮ್ಮ ಪೂರ್ವಜರು ಬ್ರಿಟಿಷರ ವಿರುದ್ಧ ಜಿಹಾದ್ ಮಾಡಿದ್ದರು, ಈಗ ಫಡ್ನವಿಸ್ ಅವರು ಜಿಹಾದ್ ಬಗ್ಗೆ ನಮಗೆ ಕಲಿಸುತ್ತಿದ್ದಾರೆ. ಈ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಮತ್ತು ದೇವೇಂದ್ರ ಫಡ್ನವಿಸ್ ಒಟ್ಟಾಗಿ ಕುಳಿತು ಚರ್ಚೆ ನಡೆಸಿದರೂ ನನ್ನನ್ನು ಸೋಲಿಸಲು ಸಾಧ್ಯವಿಲ್ಲ ಎಂದರು.

"ಧರ್ಮಯುದ್ಧ-ಜಿಹಾದ್" ಹೇಳಿಕೆಗಳು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಓವೈಸಿ ಹೇಳಿದ್ದಾರೆ.

"ಪ್ರಜಾಪ್ರಭುತ್ವದಲ್ಲಿ 'ವೋಟ್ ಜಿಹಾದ್ ಮತ್ತು ಧರ್ಮಯುದ್ಧ' ಎಲ್ಲಿಂದ ಬಂತು? ಶಾಸಕರನ್ನು ಖರೀದಿಸಿದ ನಿಮ್ಮನ್ನು ನಾವು ಕಳ್ಳ ಎಂದು ಕರೆಯಬೇಕೇ?" ಎಂದು ಪ್ರಶ್ನಿಸಿದರು.

ಫಡ್ನವಿಸ್ ಜಿಹಾದ್ ಬಗ್ಗೆ ಮಾತನಾಡುವಾಗ, ಅವರ ನಾಯಕ ಬ್ರಿಟಿಷರಿಗೆ "ಪ್ರೇಮ ಪತ್ರ" ಬರೆಯುತ್ತಿದ್ದರು, ಆದರೆ "ನಮ್ಮ ಸ್ವಾತಂತ್ರ್ಯ ಹೋರಾಟಗಾರರು ವಿದೇಶಿ ಆಡಳಿತಗಾರರೊಂದಿಗೆ ರಾಜಿ ಮಾಡಿಕೊಂಡಿರಲಿಲ್ಲ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ ಸ್ಫೋಟ ಪ್ರಕರಣದಲ್ಲಿ ಮೊದಲ ಬಂಧನ: i20 ಕಾರಿನ ಮಾಲೀಕ ಆಮಿರ್ Arrest; ಡಾ. ಉಮರ್ ಜೊತೆ ಸೇರಿ ದಾಳಿಗೆ ಸಂಚು!

KPCC ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ?: ದೆಹಲಿಯಲ್ಲಿ ಸಿಡಿದೆದ್ದ ಡಿಸಿಎಂ ಡಿ.ಕೆ ಶಿವಕುಮಾರ್!

ಹೂಕೋಸು ಫೋಟೋ ಹಾಕಿ ಬಿಹಾರದ NDA ಗೆಲುವು ಸಂಭ್ರಮಿಸಿದ ಅಸ್ಸಾಂ ಬಿಜೆಪಿ ಸಚಿವ!: ಮುಸ್ಲಿಮ್ ನರಮೇಧ ನೆನಪಿಸಿದ್ದಕ್ಕೆ ಕಾಂಗ್ರೆಸ್ ಕೆಂಡ!

ಕುಟುಂಬದ ಮೇಲೆ ದಾಳಿ ಮಾಡುವವರನ್ನು...: ಸಹೋದರಿ ರೋಹಿಣಿಗೆ ಆದ ಅಪಮಾನಕ್ಕೆ ಸಿಡಿದ ತೇಜ್ ಪ್ರತಾಪ್ ಯಾದವ್; ತಂದೆ ಲಾಲು ಪ್ರಸಾದ್ ಗೆ ಹೇಳಿದ್ದೇನು?

ಬೆಂಗಳೂರಿನಲ್ಲಿ ಲೈವ್ ಕಾರ್ಯಕ್ರಮದ ವೇಳೆ ಗಾಯಕನ ಪ್ಯಾಂಟ್ ಎಳೆದು ಅವಮಾನ, Video Viral!

SCROLL FOR NEXT