ಸಾಂದರ್ಭಿಕ ಚಿತ್ರ 
ದೇಶ

ರಾಜಸ್ಥಾನ ಉಪ ಚುನಾವಣೆ: ಐದು ಕ್ಷೇತ್ರಗಳಲ್ಲಿ ಬಿಜೆಪಿ, ಒಂದರಲ್ಲಿ ಕಾಂಗ್ರೆಸ್ ಗೆಲುವು

21 ವರ್ಷಗಳ ನಂತರ ಕಾಂಗ್ರೆಸ್ ಸೋಲನುಭವಿಸಿದ ಜುಂಜುನುದಿಂದ ಅಚ್ಚರಿಯ ಫಲಿತಾಂಶ ಬಂದಿದೆ. 2003ರಲ್ಲಿ ಬಿಜೆಪಿಯ ಸುಮಿತ್ರಾ ಸಿಂಗ್ ಇಲ್ಲಿಂದ ಗೆದ್ದಿದ್ದರು. ಅಂದಿನಿಂದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಾಬಲ್ಯವಿತ್ತು.

ಜೈಪುರ: ರಾಜಸ್ಥಾನದಲ್ಲಿ ನಡೆದ ಉಪ ಚುನಾವಣೆಯಲ್ಲಿ ಐದು ಕ್ಷೇತ್ರಗಳಲ್ಲಿ ಬಿಜೆಪಿ, ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ರಾಮಘಡ, ಡಿಯೊಲಿ, ಉನಿಯಾರಾ, ಖಿನ್ವಸರ್, ಜುಂಜುನು ಮತ್ತು ಸಲುಂಬರ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ವಿಜೇತರಾಗಿದ್ದು, ದೌಸಾವನ್ನು ಕಾಂಗ್ರೆಸ್ ಗೆದ್ದುಕೊಂಡಿದೆ.

ಚೋರಾಸಿ ಕ್ಷೇತ್ರವನ್ನು BAP ಉಳಿಸಿಕೊಂಡಿದೆ. ಚೋರಾಸಿಯಲ್ಲಿ BAP ಪಕ್ಷದ ಅನಿಲ್ ಕುಮಾರ್ ಕಟಾರ 24, 370 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ. ಅವರು 89, 161 ಮತಗಳನ್ನು ಪಡೆದರೆ, ಅವರ ಸಮೀಪದ ಬಿಜೆಪಿ ಅಭ್ಯರ್ಥಿ ಕರಿಲಾಲ್ 64,791 ಮತಗಳನ್ನು ಪಡೆದಿದ್ದಾರೆ. ಇಲ್ಲಿ ಕಾಂಗ್ರೆಸ್ ಮೂರನೇ ಸ್ಥಾನ ಪಡೆದಿದೆ. ಕೈ ಅಭ್ಯರ್ಥಿ ಮಹೇಶ್ ರೋಟ್ 15, 915 ಮತಗಳನ್ನು ಪಡೆದಿದ್ದಾರೆ.

ಸಲಂಬರ್‌ನಲ್ಲಿ ಬಿಜೆಪಿ ಅಭ್ಯರ್ಥಿ ಶಾಂತಾ ಅಮೃತಲಾಲ್ ಮೀನಾ 12,85 ಅಂತರದಲ್ಲಿ ಗೆದಿದ್ದಾರೆ. ದೌಸಾದಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದ ಸಚಿವ ಕಿರೋರಿ ಲಾಲ್ ಮೀನಾ ಅವರ ಸಹೋದರ ಜಗಮೋಹನ್ ಮೀನಾ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ದೀನ್ ದಯಾಳ್ ಬೈರ್ವಾ ಸೋಲಿಸಿದ್ದಾರೆ. ಖಿನ್ವಸಾರ್‌ನಲ್ಲಿ ಹನುಮಾನ್ ಬೇನಿವಾಲ್ ಅವರ ಪತ್ನಿ ಕನಿಕಾ ಬೇನಿವಾಲ್ ಅವರನ್ನು ಬಿಜೆಪಿಯ ರೇವಂತ್ರಾಮ್ ದಂಗಾ 13,000 ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದಾರೆ.

ಜುಂಜುನು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ರಾಜೇಂದ್ರ ಭಂಬು ಡಿಯೋಲಿ-ಉನಿಯಾರಾದಿಂದ ರಾಜೇಂದ್ರ ಗುರ್ಜರ್ ರಾಮಗಢದಿಂದ ಸುಖವಂತ್ ಸಿಂಗ್ ಗೆಲುವು ಸಾಧಿಸಿದ್ದಾರೆ. 21 ವರ್ಷಗಳ ನಂತರ ಕಾಂಗ್ರೆಸ್ ಸೋಲನುಭವಿಸಿದ ಜುಂಜುನುದಿಂದ ಅಚ್ಚರಿಯ ಫಲಿತಾಂಶ ಬಂದಿದೆ. 2003ರಲ್ಲಿ ಬಿಜೆಪಿಯ ಸುಮಿತ್ರಾ ಸಿಂಗ್ ಇಲ್ಲಿಂದ ಗೆದ್ದಿದ್ದರು. ಅಂದಿನಿಂದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಾಬಲ್ಯವಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT