ಸೌರಭ್ ಜೋಶಿ 
ದೇಶ

ಬಹುಕೋಟಿ ರೂಪಾಯಿ Highbox App scam: ಉತ್ತರಾಖಂಡ ಯೂಟ್ಯೂಬರ್ ಸೌರಭ್ ಜೋಶಿಗೆ ದೆಹಲಿ ಪೊಲೀಸರ ಸಮನ್ಸ್

ಉತ್ತರಾಖಂಡದ ಹಲ್ದಾನಿ ಮೂಲದ ಸೌರಭ್ ಜೋಶಿ, ಈ ಪ್ರಕರಣದಲ್ಲಿ ವಿಚಾರಣೆಗೆ ಕರೆಸಲಾದ ಹಲವಾರು ಸೋಷಿಯಲ್ ಮೀಡಿಯಾ ಇನ್ ಫ್ಲೂಯೆನ್ಸರ್ ಗಳಲ್ಲಿ ಸೇರಿದ್ದಾರೆ.

ಡೆಹ್ರಾಡೂನ್: ಹೈಬಾಕ್ಸ್ ಆ್ಯಪ್ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಯೂಟ್ಯೂಬರ್ ಸೌರಭ್ ಜೋಶಿ ಅವರಿಗೆ ನೋಟಿಸ್ ನೀಡಿದೆ. ಭಾರತದಾದ್ಯಂತ 30,000 ಕ್ಕೂ ಹೆಚ್ಚು ಜನರು 1,000 ಕೋಟಿ ರೂಪಾಯಿ ವಂಚನೆಗೆ ಒಳಗಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಉತ್ತರಾಖಂಡದ ಹಲ್ದಾನಿ ಮೂಲದ ಸೌರಭ್ ಜೋಶಿ, ಈ ಪ್ರಕರಣದಲ್ಲಿ ವಿಚಾರಣೆಗೆ ಕರೆಸಲಾದ ಹಲವಾರು ಸೋಷಿಯಲ್ ಮೀಡಿಯಾ ಇನ್ ಫ್ಲೂಯೆನ್ಸರ್ ಗಳಲ್ಲಿ ಸೇರಿದ್ದಾರೆ. ಅವರು ಹೈಬಾಕ್ಸ್ ಆ್ಯಪ್ ಪರ ಪ್ರಚಾರ ಮಾಡಿ, ಹೂಡಿಕೆದಾರರನ್ನು ಆಮಿಷವೊಡ್ಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ದೆಹಲಿ ಪೊಲೀಸ್‌ನ ಐಎಫ್‌ಎಸ್‌ಒ ಘಟಕದ ತನಿಖೆಯಿಂದ ದೇಶದಾದ್ಯಂತ ಹೈಬಾಕ್ಸ್ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಹಲ್ದ್ವಾನಿ ವೃತ್ತದ ಅಧಿಕಾರಿ ನಿತಿನ್ ಲೊಹಾನಿ, ತನಿಖೆಗೆ ಸಹಕಾರಕ್ಕಾಗಿ ನಾವು ದೆಹಲಿ ಪೊಲೀಸರಿಂದ ಸೂಚನೆಗಳನ್ನು ಸ್ವೀಕರಿಸಿಲ್ಲ, ನಾವು ಪೊಲೀಸ್ ಇಲಾಖೆಯ ನಿರ್ದೇಶನಗಳಿಗೆ ಸಹಾಯವನ್ನು ಮಾತ್ರ ನೀಡುತ್ತೇವೆ ಎಂದು ಹೇಳಿದರು.

ಸೈಬರ್ ಪೊಲೀಸರ ಪ್ರಕಾರ, ಹೈಬಾಕ್ಸ್ ಅಪ್ಲಿಕೇಶನ್ ಗೂಗಲ್ ಪ್ಲೇ ಮತ್ತು ಆಪ್ ಸ್ಟೋರ್‌ನಲ್ಲಿ ಲಭ್ಯವಿದೆ. ಸ್ಕ್ಯಾಮರ್‌ಗಳು ಬಳಕೆದಾರರಿಗೆ ಅವರು ಬಯಸಿದ ವಸ್ತುಗಳನ್ನು ರಹಸ್ಯ ಪೆಟ್ಟಿಗೆಗಳಲ್ಲಿ ಇರಿಸಬಹುದು ಮತ್ತು ಉಳಿದವುಗಳನ್ನು ಲಾಭದಲ್ಲಿ ಮಾರಾಟ ಮಾಡಬಹುದು ಎಂದು ಭರವಸೆ ನೀಡಿದ್ದಾರ. ಬಾಕ್ಸ್ ತೆರೆಯಲು ಸಾಧ್ಯವಾಗದಿದ್ದರೆ, ಬಳಕೆದಾರರಿಗೆ ಪೂರ್ಣ ಮರುಪಾವತಿಯನ್ನು ಭರವಸೆ ನೀಡಲಾಗಿತ್ತು. ವರದಿ ಪ್ರಕಾರ ಹೈಬಾಕ್ಸ್ ಮೊಬೈಲ್ ಆ್ಯಪ್​ನಲ್ಲಿ ಹೂಡಿಕೆ ಮಾಡುವ ಹಣಕ್ಕೆ ದಿನಕ್ಕೆ ಶೇ. 1ರಿಂದ 5ರಷ್ಟು ಬಡ್ಡಿ ನೀಡುವ ಆಫರ್ ನೀಡಲಾಗಿತ್ತು. ಅಂದರೆ ತಿಂಗಳಿಗೆ ಶೇ. 30ರಿಂದ ಶೇ 150ರಷ್ಟು ಬಡ್ಡಿ ಎಂದರೆ ತೀರಾ ಅಸಹಜ ರಿಟರ್ನ್ಸ್ ಇದಾಗಿದೆ. ಲಾಭದ ಭರವಸೆ ನೀಡಿ ಹೂಡಿಕೆದಾರರನ್ನು ವಂಚಿಸಲು ಹಗರಣಗಾರರು ಹೈಬಾಕ್ಸ್ ಆ್ಯಪ್ ಬಳಸುತ್ತಿದ್ದರು ಎಂದು ಸೈಬರ್ ಪೊಲೀಸರು ಬಹಿರಂಗಪಡಿಸಿದ್ದಾರೆ. ತಮ್ಮ ಮಗ ಯಾವುದೇ ತಪ್ಪು ಮಾಡಿಲ್ಲ, ಅವರ ಮಾನಹಾನಿ ಮಾಡಲು ಈ ಪ್ರಕರಣವನ್ನು ಸಂಚಲನಗೊಳಿಸಲಾಗುತ್ತಿದೆ ಎಂದು ಸೌರಭ್ ಜೋಶಿ ತಂದೆ ಹರೀಶ್ ಆರೋಪಿಸಿದ್ದಾರೆ. ಸದ್ಯ ಸೌರಭ್ ದೆಹಲಿಯಲ್ಲಿದ್ದಾರೆ ಮತ್ತು ಏಜೆನ್ಸಿಯೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತಾರೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಒಡಿಶಾದ SCB ವೈದ್ಯಕೀಯ ಕಾಲೇಜಿನಲ್ಲಿ ಭಾರೀ ಅಗ್ನಿ ಅವಘಡ: ಕನಿಷ್ಠ 10 ಮಂದಿ ಸಾವು, ಮೃತರ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ ಘೋಷಣೆ

West Asia conflict: ದುಬೈ ಏರ್‌ಪೋರ್ಟ್‌ ಬಳಿ ಡ್ರೋನ್‌ ದಾಳಿ; ಭಾರೀ ಬೆಂಕಿ, ವಿಮಾನ ಸಂಚಾರ ತಾತ್ಕಾಲಿಕ ಸ್ಥಗಿತ

ಒಡಿಶಾ ರಾಜ್ಯಸಭೆ ಚುನಾವಣೆ: ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ 'ಕೈ'ಶಾಸಕರು, ಬಿಡದಿ ರೆಸಾರ್ಟ್‌ನಿಂದ ಬೆಂಗಳೂರಿಗೆ ಶಿಫ್ಟ್..!

ಬಿಜೆಪಿಯಿಂದ ಆಪರೇಷನ್ ಕಮಲ ಯತ್ನ: ಒಡಿಸ್ಸಾ ಕಾಂಗ್ರೆಸ್ ಶಾಸಕರಿಗೆ ತಲಾ 5 ಕೋಟಿ ಆಮಿಷ: ಡಿ.ಕೆ ಶಿವಕುಮಾರ್

ಇರಾನ್ ಯುದ್ಧ ವಿರಾಮ ಬಗ್ಗೆ ಮಾತುಕತೆ ನಡೆಸಲು ಸಿದ್ಧವಾಗಿದೆ, ಆದರೆ ಈ ಹಂತದಲ್ಲಿ ನಾವು ತಯಾರಿಲ್ಲ: Donald Trump

SCROLL FOR NEXT