ಮೈಸೂರು-ದರ್ಭಂಗಾ ಬಾಗ್ಮತಿ ಎಕ್ಸ್‌ಪ್ರೆಸ್ ರೈಲು ಅಪಘಾತ PTI
ದೇಶ

ತಮಿಳುನಾಡು ರೈಲು ಅಪಘಾತ ಮತ್ತು ಬಾಲಸೋರ್ ರೈಲು ಅಪಘಾತದ ನಡುವೆ ಸಾಮ್ಯತೆ ಇದೆ: ತಜ್ಞರ ಅಭಿಪ್ರಾಯ

ಪ್ಯಾಸೆಂಜರ್ ರೈಲು ಮುಖ್ಯ ಮಾರ್ಗದ ಮೂಲಕ ಹಾದುಹೋಗಬೇಕಿತ್ತು. ಆದರೆ ಮುಖ್ಯ ಮಾರ್ಗಕ್ಕೆ ಸಿಗ್ನಲ್ ಕ್ಲಿಯರೆನ್ಸ್ ಹೊರತಾಗಿಯೂ, ಪ್ಯಾಸೆಂಜರ್ ರೈಲು ಲೂಪ್ ಲೈನ್‌ಗೆ ಪ್ರವೇಶಿಸಿ ಹಿಂದಿನಿಂದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ ಎಂದು ಒಪ್ಪಿಕೊಂಡಿದೆ.

ನವದೆಹಲಿ: ಚೆನ್ನೈ ಬಳಿ ನಿಂತಿದ್ದ ಗೂಡ್ಸ್ ರೈಲಿಗೆ ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದ ಒಂದು ದಿನದ ನಂತರ, ತಜ್ಞರು ಮತ್ತು ಯೂನಿಯನ್ ನಾಯಕರು ಡೇಟಾ-ಲಾಗರ್ ವೀಡಿಯೊ ಪ್ರಕಾರ, ಸಿಗ್ನಲ್ ಮತ್ತು ಮಾರ್ಗದ ನಡುವಿನ ಹೊಂದಾಣಿಕೆಯಿಲ್ಲದ ಕಾರಣ ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆ.

12578 ಸಂಖ್ಯೆಯ ಮೈಸೂರು-ದರ್ಭಂಗಾ ಬಾಗ್ಮತಿ ಎಕ್ಸ್‌ಪ್ರೆಸ್, ತಮಿಳುನಾಡಿನ ಚೆನ್ನೈ ರೈಲ್ವೆ ವಿಭಾಗದ ಕವರಪೆಟ್ಟೈ ರೈಲು ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ 8.30ರ ಸುಮಾರಿಗೆ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಒಂಬತ್ತು ಪ್ರಯಾಣಿಕರು ಗಾಯಗೊಂಡಿದ್ದರು. ಡೇಟಾ ಲಾಗರ್ ಎನ್ನುವುದು ರೈಲು ಚಲನೆಗಳು ಮತ್ತು ಸಿಗ್ನಲಿಂಗ್ ಅಂಶಗಳನ್ನು ರೆಕಾರ್ಡ್ ಮಾಡಲು ನಿಲ್ದಾಣದ ಪ್ರದೇಶದಲ್ಲಿ ಇರಿಸಲಾದ ಸಾಧನವಾಗಿದೆ. ಈ ಡೇಟಾ ಲಾಗರ್‌ನ 'ಯಾರ್ಡ್-ಸಿಮ್ಯುಲೇಶನ್' ವೀಡಿಯೊ ಪರಿಶೀಲಿಸಿದಾಗ ಈ ಅಪಘಾತ ಮತ್ತು 2023ರ ಜೂನ್ 2ರಂದು ಬಾಲಸೋರ್ ರೈಲು ಅಪಘಾತದ ನಡುವೆ ಸಾಮ್ಯತೆ ಇದೆ ಎಂಬುದನ್ನು ತಜ್ಞರು ಗಮನಿಸಿದ್ದಾರೆ.

ದಕ್ಷಿಣ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (CPRO) ಅವರನ್ನು ಸಂಪರ್ಕಿಸಿದಾಗ, ಅಂತಹ ಯಾವುದೇ ವೀಡಿಯೊದ ಬಗ್ಗೆ ನನಗೆ ತಿಳಿದಿಲ್ಲ ಮತ್ತು ಘರ್ಷಣೆಗೆ ಸಂಬಂಧಿಸಿದಂತೆ ಈಗಾಗಲೇ ಹಲವಾರು ತನಿಖೆಗಳನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು. ಶುಕ್ರವಾರ ತಡರಾತ್ರಿ ಪತ್ರಿಕಾ ಹೇಳಿಕೆ ನೀಡಿರುವ ರೈಲ್ವೇ ಮಂಡಳಿ ಕೂಡ ಪ್ಯಾಸೆಂಜರ್ ರೈಲು ಮುಖ್ಯ ಮಾರ್ಗದ ಮೂಲಕ ಹಾದುಹೋಗಬೇಕಿತ್ತು. ಆದರೆ ಮುಖ್ಯ ಮಾರ್ಗಕ್ಕೆ ಸಿಗ್ನಲ್ ಕ್ಲಿಯರೆನ್ಸ್ ಹೊರತಾಗಿಯೂ, ಪ್ಯಾಸೆಂಜರ್ ರೈಲು ಲೂಪ್ ಲೈನ್‌ಗೆ ಪ್ರವೇಶಿಸಿ ಹಿಂದಿನಿಂದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ ಎಂದು ಒಪ್ಪಿಕೊಂಡಿದ್ದಾರೆ. ಘಟನೆಯ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. ರೈಲ್ವೆ ಸುರಕ್ಷತಾ ಆಯುಕ್ತರು ಬೆಳಗ್ಗೆ ಅಪಘಾತ ಸ್ಥಳಕ್ಕೆ ಭೇಟಿ ನೀಡಿ ವಿವರವಾದ ತನಿಖೆ ನಡೆಸಲಿದ್ದಾರೆ ಎಂದು ಶನಿವಾರ ಮಂಡಳಿ ತಿಳಿಸಿದೆ. ಹೌರಾಕ್ಕೆ ಹೋಗುವ ಕೋರಮಂಡಲ್ ಎಕ್ಸ್‌ಪ್ರೆಸ್‌ಗೆ ಬಾಲಸೋರ್‌ನಲ್ಲಿ ಮುಖ್ಯ ಮಾರ್ಗಕ್ಕೆ ಹಸಿರು ನಿಶಾನೆ ಸಿಕ್ಕಿತ್ತು. ಆದರೆ, ಟ್ರ್ಯಾಕ್‌ಗಳನ್ನು ತಪ್ಪಾಗಿ ಜೋಡಿಸಿದ್ದರಿಂದ ಅದು ಲೂಪ್ ಲೈನ್‌ಗೆ ಹೋಗಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿತ್ತು.

ದಕ್ಷಿಣ ರೈಲ್ವೆಯ ಅಖಿಲ ಭಾರತ ಲೋಕೋ ರನ್ನಿಂಗ್ ಸ್ಟಾಫ್ ಅಸೋಸಿಯೇಶನ್ (ಎಐಎಲ್‌ಆರ್‌ಎಸ್‌ಎ) ಅಧ್ಯಕ್ಷ ಆರ್. ಕುಮರೇಶನ್ ಅವರು, ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ, ಈ ಘರ್ಷಣೆಯು ಜೂನ್ 2, 2023ರಂದು ಬಾಲಸೋರ್ ರೈಲು ಅಪಘಾತದ ಪುನರಾವರ್ತನೆಯಾಗಿದೆ ಎಂದು ತೋರುತ್ತದೆ ಎಂದು ಹೇಳಿದರು. ಸಿಗ್ನಲಿಂಗ್ ವ್ಯವಸ್ಥೆಯಲ್ಲಿನ ವೈಪರೀತ್ಯಗಳನ್ನು ತೆಗೆದುಹಾಕಲು ರೈಲ್ವೆ ಗಂಭೀರ ವಿಧಾನವನ್ನು ತೆಗೆದುಕೊಳ್ಳಬೇಕು. ಸುರಕ್ಷತಾ ತಜ್ಞರ ಪ್ರಕಾರ, ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆಯಲ್ಲಿ, ಸಿಗ್ನಲಿಂಗ್ ಅಂಶವು ಟ್ರ್ಯಾಕ್‌ಗಳ ಇಂಟರ್‌ಲಾಕಿಂಗ್ ಅನ್ನು ಅನುಸರಿಸುತ್ತದೆ. ಅಂದರೆ ಮುಖ್ಯ ಮಾರ್ಗದ ಸಿಗ್ನಲ್ ಹಸಿರು ಬಣ್ಣದ್ದಾಗಿದ್ದರೆ, ಮುಖ್ಯ ಮಾರ್ಗದಲ್ಲಿ ರೈಲು ಬರುವ ರೀತಿಯಲ್ಲಿ ಇಂಟರ್‌ಲಾಕಿಂಗ್ ಸ್ವಯಂಚಾಲಿತವಾಗಿ ಹೊಂದಿಸಲ್ಪಡುತ್ತದೆ ಎಂದರು.

ಸಿಗ್ನಲಿಂಗ್ ಅಂಶ ಮತ್ತು ಇಂಟರ್‌ಲಾಕಿಂಗ್ ನಡುವಿನ ಸಮನ್ವಯದ ಕೊರತೆಯು ಸಿಗ್ನಲಿಂಗ್ ವ್ಯವಸ್ಥೆಯಲ್ಲಿನ ಕೆಲವು ದೋಷದಿಂದಾಗಿದೆ ಎಂದು ಭದ್ರತಾ ತಜ್ಞರು ಹೇಳಿದರು. ಪ್ರಾಥಮಿಕವಾಗಿ, ಇದು ಕೆಲವು ರೀತಿಯ ತಾಂತ್ರಿಕ ದೋಷವೆಂದು ತೋರುತ್ತದೆ. ಭಾರತೀಯ ರೈಲ್ವೇ ಲೋಕೋ ರನ್ನಿಂಗ್‌ಮೆನ್ ಆರ್ಗನೈಸೇಶನ್ (IRLRO) ಕಾರ್ಯನಿರ್ವಾಹಕ ಅಧ್ಯಕ್ಷ ಸಂಜಯ್ ಪಾಂಡಿ ಅವರ ಪ್ರಕಾರ, ಸಿಗ್ನಲಿಂಗ್ ಮತ್ತು ಇಂಟರ್‌ಲಾಕಿಂಗ್ ವ್ಯವಸ್ಥೆಯಲ್ಲಿ ಯಾವುದೇ ಅಸಹಜತೆಗಳಿಲ್ಲದೆ ಹಿಂದಿನ ಎಲ್ಲಾ ರೈಲುಗಳು ಈ ನಿಲ್ದಾಣದ ಮೂಲಕ ಹಾದುಹೋದವು ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

SCROLL FOR NEXT