ಶಿವರಾಜ್ ಸಿಂಗ್ ಚೌಹಾಣ್- ನರೇಂದ್ರ ಮೋದಿ online desk
ದೇಶ

ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಗೆ ಮಹತ್ವದ ಜವಾಬ್ದಾರಿ ನೀಡಿದ ಪ್ರಧಾನಿ ಮೋದಿ

ಅ.18 ರಂದು ಈ ಗುಂಪಿನ ಮೊದಲ ಸಭೆ ಪ್ರಧಾನಮಂತ್ರಿ ಕಚೇರಿಯಲ್ಲಿ ನಡೆದಿದ್ದು ರೈಲ್ವೆ ಮಂಡಳಿ ಅಧ್ಯಕ್ಷರು ಸೇರಿದಂತೆ ಭಾರತ ಸರ್ಕಾರದ ಎಲ್ಲಾ ಕಾರ್ಯದರ್ಶಿಗಳೂ ಹೈಬ್ರಿಡ್ ಮೋಡ್ ಮೂಲಕ ಸಭೆಯಲ್ಲಿ ಭಾಗಿಯಾಗಿದ್ದರು.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಹೆಚ್ಚಿನ ಅಧಿಕಾರದೊಂದಿಗೆ ಹೆಚ್ಚುವರಿ ಜವಾಬ್ದಾರಿ ವಹಿಸಿದ್ದಾರೆ.

ಕೃಷಿ, ರೈತ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಸಚಿವರಾಗಿರುವ ಶಿವರಾಜ್ ಸಿಂಗ್ ಚೌಹಾಣ್ ಅಧ್ಯಕ್ಷತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮೇಲ್ವಿಚಾರಣಾ ಗುಂಪು ರಚಿಸಿದ್ದು, ಇದು ಬಜೆಟ್ ನಲ್ಲಿ ಘೋಷಿಸಲಾದ ಯೋಜನೆಗಳು ಹಾಗೂ ಪ್ರಧಾನಿ ಮೋದಿ ಅವರಿಂದ ಘೋಷಿಸಲಾದ ಯೋಜನೆಗಳು, ಮೂಲಸೌಕರ್ಯ ಯೋಜನೆಗಳ ಜಾರಿಯನ್ನು ಪರಿಶೀಲಿಸಲಿದೆ.

ಅ.18 ರಂದು ಈ ಗುಂಪಿನ ಮೊದಲ ಸಭೆ ಪ್ರಧಾನಮಂತ್ರಿ ಕಚೇರಿಯಲ್ಲಿ ನಡೆದಿದ್ದು ರೈಲ್ವೆ ಮಂಡಳಿ ಅಧ್ಯಕ್ಷರು ಸೇರಿದಂತೆ ಭಾರತ ಸರ್ಕಾರದ ಎಲ್ಲಾ ಕಾರ್ಯದರ್ಶಿಗಳೂ ಹೈಬ್ರಿಡ್ ಮೋಡ್ ಮೂಲಕ ಸಭೆಯಲ್ಲಿ ಭಾಗಿಯಾಗಿದ್ದರು.

ಮಧ್ಯಪ್ರದೇಶದಲ್ಲಿ 3 ಬಾರಿ ಮುಖ್ಯಮಂತ್ರಿಯಾಗಿದ್ದ ಚೌಹಾಣ್ ಅಧ್ಯಕ್ಷತೆಯ ಮೇಲ್ವಿಚಾರಣಾ ಗುಂಪು ಪ್ರತಿ ತಿಂಗಳು ಸೌತ್ ಬ್ಲಾಕ್‌ನಲ್ಲಿರುವ PMO ನಲ್ಲಿ ಎಲ್ಲಾ ಸರ್ಕಾರಿ ಯೋಜನೆಗಳನ್ನು ಪರಿಶೀಲಿಸಲು ಮತ್ತು ಫಲಪ್ರದತೆಯ ಕಡೆಗೆ ಕೊಂಡೊಯ್ಯಲು ಆಗಬೇಕಿರುವುದನ್ನು ಚರ್ಚಿಸಲು ಸಭೆ ಸೇರುತ್ತದೆ.

ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳ ಪ್ರಕಾರ, 2014 ರಲ್ಲಿ ತಮ್ಮ ಅಡಿಯಲ್ಲಿ ಮೊದಲ ಎನ್‌ಡಿಎ ಸರ್ಕಾರ ರಚನೆಯಾದಾಗಿನಿಂದ ಘೋಷಣೆಗೊಂಡ ಯೋಜನೆಗಳ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಪ್ರಧಾನಿ ಮೋದಿ ಅವರು ಕೇಂದ್ರ ಸಚಿವ ಚೌಹಾಣ್‌ಗೆ ಅಧಿಕಾರವನ್ನು ವಹಿಸಿದ್ದಾರೆ. ಪ್ರಧಾನಮಂತ್ರಿ ಘೋಷಿಸಿದ ವಿವಿಧ ಯೋಜನೆಗಳಿಗೆ ನೋಡಲ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ಮೇಲ್ವಿಚಾರಣಾ ಗುಂಪಿನ ಸಭೆಗೆ ಹಾಜರಾಗುವಂತೆ ತಿಳಿಸಲಾಗಿದೆ.

ಸರ್ಕಾರ ಮೇಲ್ವಿಚಾರಣಾ ಗುಂಪಿನ ಬಗ್ಗೆ ಯಾವುದೇ ಮಾಹಿತಿ ನೀಡದೇ ಇದ್ದರೂ, ಪ್ರಧಾನಮಂತ್ರಿಯವರ ಪೋರ್ಟಲ್‌ನಲ್ಲಿ ಪಟ್ಟಿ ಮಾಡಲಾದ ಪ್ರಕಟಣೆಗಳು, ಮೋದಿಯವರು ಅಡಿಗಲ್ಲು ಹಾಕಿದ ಯೋಜನೆಗಳು, ಬಜೆಟ್ ಘೋಷಣೆಗಳು, ಅಧೀನ ಶಾಸನಗಳು ಅಥವಾ ನಿಯಮಗಳ ಮೇಲೆ ಇನ್ನೂ ರೂಪಿಸಬೇಕಾದ ಕಾನೂನುಗಳು; ಮತ್ತು ಇತರ ಮೂಲಸೌಕರ್ಯ ಯೋಜನೆಗಳನ್ನು ಚೌಹಾಣ್ ಪರಿಶೀಲಿಸುವ ನಿರೀಕ್ಷೆಯಿದೆ.

ಯೋಜನೆಗಳ ಅವಲೋಕನದ ಹೊರತಾಗಿ, ಯಾವುದೇ ಯೋಜನೆಯು ಮಂದಗತಿಯಲ್ಲಿ ಕಂಡುಬಂದಲ್ಲಿ ಅಥವಾ ಉನ್ನತ ಕಚೇರಿಯಿಂದ ಅಂತರ-ಸಚಿವಾಲಯದ ಬೆಂಬಲದ ಅಗತ್ಯವಿದ್ದರೆ, ಚೌಹಾಣ್ ಅವರು ಸಂಬಂಧಿಸಿದ ಕಾರ್ಯದರ್ಶಿಗಳಿಗೆ ಪ್ರಧಾನಿ ಕಾರ್ಯಾಲಯದ ನಿರೀಕ್ಷೆಗಳನ್ನು ತಿಳಿಸುತ್ತಾರೆ.

ದಿನನಿತ್ಯದ ಆಡಳಿತ ಮತ್ತು ಜಾಗತಿಕ ವ್ಯವಹಾರಗಳೆರಡರಲ್ಲೂ ಪಾಲ್ಗೊಳ್ಳುವಿಕೆಯಿಂದಾಗಿ, ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿನ ಸಮಯದ ವಿಳಂಬದ ಬಗ್ಗೆ ಪ್ರಧಾನಮಂತ್ರಿ ಕಾಳಜಿ ವಹಿಸಿದ್ದಾರೆ ಮತ್ತು ಆಗಾಗ್ಗೆ ತಮ್ಮ ಕಾರ್ಯದರ್ಶಿಗಳೊಂದಿಗೆ, ಉನ್ನತ PMO ಅಧಿಕಾರಿಗಳೊಂದಿಗಿನ ನಿಕಟ ಸಭೆಗಳಲ್ಲಿ ತಮ್ಮ ಆತಂಕಗಳನ್ನು ಬಹಿರಂಗಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿಳಂಬವಾಗದಂತೆ ಎಚ್ಚರ ವಹಿಸಲು ದಕ್ಷ ನಿರ್ವಾಹಕರಾಗಿ ವ್ಯಾಪಕವಾಗಿ ಕಂಡುಬರುವ ಚೌಹಾಣ್, 65 ರ ನೇತೃತ್ವದ ಈ ಮೇಲ್ವಿಚಾರಣಾ ಗುಂಪು ರಚಿಸಲಾಗಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಯಕತ್ವ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ, ಹೇಗೆ ನೆರವೇರಿಸಿದ್ರು?ಈ ಅದ್ಭುತ Video ನೋಡಿ..

SCROLL FOR NEXT