ಉಗ್ರಗಾಮಿ ಗಗಂಗೀರ್ ಸುರಂಗ ನಿರ್ಮಾಣ ಸ್ಥಳದಲ್ಲಿ ಪೂರ್ವನಿರ್ಮಿತ ಗುಡಿಸಲು ಪ್ರವೇಶಿಸುತ್ತಿರುವುದನ್ನು ತೋರಿಸುವ ಸಿಸಿಟಿವಿ ದೃಶ್ಯ 
ದೇಶ

ಜಮ್ಮು-ಕಾಶ್ಮೀರದ ಗಗನ್ಗೀರ್ ದಾಳಿಯ ಭಯೋತ್ಪಾದಕ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಗಗನ್ಗೀರ್ ಸುರಂಗ ನಿರ್ಮಾಣ ಸ್ಥಳಕ್ಕೆ ಪೂರ್ವನಿರ್ಮಿತ ಗುಡಿಸಲನ್ನು ಭಯೋತ್ಪಾದಕ ಪ್ರವೇಶಿಸುವುದನ್ನು ಕಾಣಬಹುದು. ಈತ ನಡೆಸಿದ್ದ ದಾಳಿಯಿಂದ ಆರು ಸ್ಥಳೀಯೇತರ ಕಾರ್ಮಿಕರು ಸೇರಿದಂತೆ ಏಳು ಜನರು ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟಿದ್ದರು.

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಗಗನ್ಗೀರ್ ದಾಳಿಯಲ್ಲಿ ಭಾಗಿಯಾಗಿದ್ದನು ಎನ್ನಲಾದ ಫೆರಾನ್ ವೇಷದ ಭಯೋತ್ಪಾದಕನ ಸಿಸಿಟಿವಿ ದೃಶ್ಯಾವಳಿ ಸಿಕ್ಕಿದೆ, ಕಳೆದ ಅಕ್ಟೋಬರ್ 20 ರಂದು ಏಳು ಮಂದಿ ಸಾವಿಗೆ ಕಾರಣವಾದ ದಾಳಿ ನಡೆಸಿದ್ದು ಎಕೆ ರೈಫಲ್ ದಾಳಿಕೋರನೇ ಎಂಬುದು ಇನ್ನೂ ಖಚಿತವಾಗಿಲ್ಲ.

ಗಗನ್ಗೀರ್ ಸುರಂಗ ನಿರ್ಮಾಣ ಸ್ಥಳಕ್ಕೆ ಪೂರ್ವನಿರ್ಮಿತ ಗುಡಿಸಲನ್ನು ಭಯೋತ್ಪಾದಕ ಪ್ರವೇಶಿಸುವುದನ್ನು ಕಾಣಬಹುದು. ಈತ ನಡೆಸಿದ್ದ ದಾಳಿಯಿಂದ ಆರು ಸ್ಥಳೀಯೇತರ ಕಾರ್ಮಿಕರು ಸೇರಿದಂತೆ ಏಳು ಜನರು ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟಿದ್ದರು.

ಆದಾಗ್ಯೂ, ಭದ್ರತಾ ಅಧಿಕಾರಿಗಳು ಈ ಸಿಸಿಟಿವಿ ದೃಶ್ಯಾವಳಿಯ ನಿಖರತೆಯನ್ನು ಖಚಿತಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

'ಜನವರಿ 27' ಎಂದು ಸಿಸಿಟಿವಿ ದೃಶ್ಯಾವಳಿಯ ದಿನಾಂಕ ತೋರಿಸುತ್ತಿದೆ. ಅದು ಸಿಸಿಟಿವಿ ಕ್ಯಾಮರಾದ ಸೆಟ್ಟಿಂಗ್ ಅಥವಾ ತಾಂತ್ರಿಕ ಸಮಸ್ಯೆಯಿಂದಾಗಿ ಎಂದು ಅಂದಾಜಿಸಲಾಗಿದ್ದು, ಭಯೋತ್ಪಾದಕರು ಹೊತ್ತೊಯ್ದ ರೈಫಲ್ ಮೇಲೆ ನೀಲಿ ಗುರುತು ಹೊಂದಿದೆ.

ದಾಳಿಯ ಸ್ಥಳದಿಂದ ಸುಮಾರು 200 ಕಿಮೀ ದೂರದಲ್ಲಿರುವ ಪಿರ್ ಪಂಜಾಲ್ ಪ್ರದೇಶದಲ್ಲಿ ಭದ್ರತಾ ಪಡೆಗಳ ಮೇಲೆ ದಾಳಿ ಮಾಡಲು ಭಯೋತ್ಪಾದಕರು ಇಂತಹ ರೈಫಲ್‌ಗಳನ್ನು ಬಳಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಯೋತ್ಪಾದಕ ತನ್ನ ಮುಖವನ್ನು ಮುಚ್ಚಿರಲಿಲ್ಲ. ಆದರೆ ದಾಳಿಯಲ್ಲಿ ಬದುಕುಳಿದವರು, ದಾಳಿಕೋರರು ತಮ್ಮ ಮುಖಗಳನ್ನು ಮುಚ್ಚಿಕೊಂಡಿದ್ದರು ಎಂದು ಹೇಳಿದ್ದಾರೆ.

ಇದುವರೆಗೆ ಸಂಗ್ರಹಿಸಿದ ಸಾಕ್ಷ್ಯಗಳ ಬಗ್ಗೆ ಪ್ರತಿಕ್ರಿಯಿಸಲು ಈಗಲೇ ಸಾಧ್ಯವಿಲ್ಲ, ಇದು ಪ್ರಕರಣದ ಮುಂದಿನ ತನಿಖೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

SCROLL FOR NEXT