ಕೇಂದ್ರ ಸಚಿವ ಗಿರಿರಾಜ್ ಸಿಂಗ್ 
ದೇಶ

Bangladesh 'ಪಾಕಿಸ್ತಾನದ ಸಹೋದರ' ರಾಷ್ಟ್ರವಾಗುತ್ತಿದೆ: ಕೇಂದ್ರ ಸಚಿವ ಗಿರಿರಾಜ್ ಸಿಂಗ್

'ಬಾಂಗ್ಲಾದೇಶದ ನಿಯಂತ್ರಣವು "ಪಾಕಿಸ್ತಾನದ ದೊಡ್ಡ ಸಹೋದರ" ಆಗುವವರ ಕೈಗೆ ಬಿದ್ದಿದೆ. ಇದರಿಂದ ಹೂಡಿಕೆದಾರರು ನೆರೆಯ ರಾಷ್ಟ್ರದಿಂದ ದೂರ ಸರಿಯುತ್ತಾರೆ.

ಢಾಕಾ: ಬಾಂಗ್ಲಾದೇಶದಲ್ಲಿನ ಹಾಲಿ ಪರಿಸ್ಥಿತಿಗಳನ್ನು ಗಮನಿಸಿದರೆ ಆ ದೇಶ 'ಪಾಕಿಸ್ತಾನದ ಸಹೋದರ' ರಾಷ್ಟ್ರವಾಗುತ್ತಿರುವಂತೆ ತೋರುತ್ತಿದ್ದು, ಹೂಡಿಕೆದಾರರು ನೆರೆಯ ರಾಷ್ಟ್ರದಿಂದ ದೂರ ಸರಿಯುತ್ತಾರೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.

ದೆಹಲಿಯ ಭಾರತ್ ಮಂಟಪದಲ್ಲಿ ಮುಂಬರುವ ಫೆಬ್ರವರಿ 14-17 ರವರೆಗೆ ನಡೆಯಲಿರುವ ಭಾರತ್ ಟೆಕ್ಸ್ 2025 ರ ಕರ್ಟನ್ ರೈಸರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಗಿರಿರಾಜ್ ಸಿಂಗ್, 'ಬಾಂಗ್ಲಾದೇಶದ ನಿಯಂತ್ರಣವು "ಪಾಕಿಸ್ತಾನದ ದೊಡ್ಡ ಸಹೋದರ" ಆಗುವವರ ಕೈಗೆ ಬಿದ್ದಿದೆ. ಇದರಿಂದ ಹೂಡಿಕೆದಾರರು ನೆರೆಯ ರಾಷ್ಟ್ರದಿಂದ ದೂರ ಸರಿಯುತ್ತಾರೆ ಎಂದು ಹೇಳಿದ್ದಾರೆ.

ಬಾಂಗ್ಲಾದೇಶವು ಪಾಕಿಸ್ತಾನದಂತಾದರೆ, ಹೂಡಿಕೆದಾರರು ಅಲ್ಲಿಗೆ ಹೋಗುವ ಮೊದಲು ಯೋಚಿಸುತ್ತಾರೆ ಎಂದು ಬಾಂಗ್ಲಾದೇಶದಲ್ಲಿ ಆಡಳಿತ ಬದಲಾವಣೆಗೆ ಕಾರಣವಾದ ಇತ್ತೀಚಿನ ಹಿಂಸಾಚಾರದ ಹಿನ್ನೆಲೆಯಲ್ಲಿ ಸಚಿವರು ಈ ಹೇಳಿಕೆ ನೀಡಿದ್ದಾರೆ.

ಅಂತೆಯೇ ಭಾರತವು ದೊಡ್ಡ ಕಾರ್ಮಿಕ ಮಾರುಕಟ್ಟೆಯನ್ನು ಹೊಂದಿರುವುದರಿಂದ ಭಾರತೀಯ ಜವಳಿ ಉದ್ಯಮವು ಬಾಂಗ್ಲಾದೇಶ ಅಥವಾ ವಿಯೆಟ್ನಾಂನಿಂದ ಯಾವುದೇ ಸವಾಲನ್ನು ಎದುರಿಸುತ್ತಿಲ್ಲ. ಪ್ರತಿ ವಲಯವನ್ನು ಉತ್ಪಾದನಾ ಸಂಬಂಧಿತ ಪ್ರೋತ್ಸಾಹ ಯೋಜನೆಗೆ ಜೋಡಿಸುವ ಯೋಜನೆ ಇದೆ. ನಾವು ಹೆಚ್ಚು PLI ಯೋಜನೆಗಳನ್ನು ತರಲು ಪ್ರಯತ್ನಿಸುತ್ತಿದ್ದೇವೆ, ಪ್ರತಿಯೊಂದು ಕ್ಷೇತ್ರವನ್ನು ಅದಕ್ಕೆ ಜೋಡಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT