ದೇಶ

SEBI ಕಾರ್ಯಕ್ಷಮತೆ ಪರಾಮರ್ಶೆ: ಮಾಧಬಿ ಪುರಿ ಬುಚ್ ಗೆ ಸಂಸತ್ತಿನ ಸಾರ್ವಜನಿಕ ಲೆಕ್ಕ ಸಮಿತಿಯಿಂದ ಸಮನ್ಸ್ ಜಾರಿ ಸಾಧ್ಯತೆ

ಮಾಧಬಿ ಪುರಿ ಬುಚ್ ವಿರುದ್ಧದ ಆರೋಪ ಪರಿಶೀಲನೆಗೆ ಬುಚ್ ಗೆ ಸಮನ್ಸ್ ನೀಡುವ ಕುರಿತು ಸಮಿತಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸಾರ್ವಜನಿಕ ಲೆಕ್ಕ ಸಮಿತಿ ಅಧ್ಯಕ್ಷ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.

ನವದೆಹಲಿ: ಸೆಬಿ ಮುಖ್ಯಸ್ಥರಾದ ಮಾಧಬಿ ಪುರಿ ಬುಚ್ ವಿರುದ್ಧದ ಹಿತಾಸಕ್ತಿ ಸಂಘರ್ಘದ ಆರೋಪ ವಿಚಾರದಲ್ಲಿ ಎದ್ದಿರುವ ರಾಜಕೀಯ ಬಿರುಗಾಳಿ ನಡುವೆಯೇ ಸಂಸತ್ತಿನ ಕಾಯ್ದೆಯಿಂದ ಸ್ಥಾಪನೆಯಾದ ಸೆಬಿಯ ಕಾರ್ಯಕ್ಷಮತೆ ಪರಾಮರ್ಶೆ ನಡೆಸಲು ಸಂಸತ್ತಿನ ಸಾರ್ವಜನಿಕ ಲೆಕ್ಕ ಸಮಿತಿ ನಿರ್ಧರಿಸಿದೆ.

ಮಾಧಬಿ ಪುರಿ ಬುಚ್ ವಿರುದ್ಧದ ಆರೋಪ ಪರಿಶೀಲನೆಗೆ ಬುಚ್ ಗೆ ಸಮನ್ಸ್ ನೀಡುವ ಕುರಿತು ಸಮಿತಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸಾರ್ವಜನಿಕ ಲೆಕ್ಕ ಸಮಿತಿ ಅಧ್ಯಕ್ಷ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.

ಸೆಬಿ ಮುಖ್ಯಸ್ಥರಿಗೆ ಸಮನ್ಸ್ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ವೇಣುಗೋಪಾಲ್, ಉಳಿದ ವಿಚಾರಗಳಿಗೆ ಸಮಿತಿ ತೀರ್ಮಾನ ತೆಗೆದುಕೊಳ್ಳಲಿದೆ. ಸಂಸತ್ತಿನ ಕಾಯ್ದೆ ಮೂಲಕ ಸ್ಥಾಪನೆಯಾಗಿರುವ SEBI ಕಾರ್ಯಕ್ಷಮತೆ ಪರಿಶೀಲನೆ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಸದಸ್ಯರು ಸಲಹೆ ನೀಡಿದ್ದಾರೆ. ಸದಸ್ಯರು ಈ ಸಲಹೆಗಳನ್ನು ಅಜೆಂಡಾದಲ್ಲಿ ಸೇರಿಸಿದ್ದೇವೆ ಎಂದರು.

ಹಿಂದಿನ ವರ್ಷದಿಂದ ಸಮಿತಿಯ ಮುಂದೆ ಬಾಕಿ ಉಳಿದಿರುವ ವಿಷಯಗಳ ಜೊತೆಗೆ PAC ತನ್ನ ಅಧಿಕಾರಾವಧಿಯಲ್ಲಿ ಪರೀಕ್ಷೆಗೆ 161 ವಿಷಯಗಳನ್ನು ಆಯ್ಕೆ ಮಾಡಿದೆ. ಅದಾನಿ ಗ್ರೂಪ್ ವಿರುದ್ಧದ ಹಿಡನ್ ಬರ್ಗ್ ಸಂಶೋಧನಾ ಹೇಳಿಕೆಯ ತನಿಖೆಯಲ್ಲಿ ಸೆಬಿ ವಿಚಾರದಲ್ಲಿ ಬುಚ್ ಹಿಸಾತಕ್ತಿ ಸಂಘರ್ಷ ಆರೋಪ ಎದುರಿಸುತ್ತಿದ್ದಾರೆ.

ಬುಚ್ ಸೆಬಿಯ ಪೂರ್ಣಾವಧಿ ಸದಸ್ಯರಾದ ನಂತರ ಅವರ ಮಾಜಿ ಉದ್ಯೋಗದಾತರಾದ ಐಸಿಐಸಿಐ ಬ್ಯಾಂಕ್ ಮಾಡಿದ ಪಾವತಿಗಳನ್ನು ಕಾಂಗ್ರೆಸ್ ಪ್ರಶ್ನಿಸಿದೆ ಮತ್ತು ಈ ವಿಷಯದ ಬಗ್ಗೆ ಸ್ವತಂತ್ರ ತನಿಖೆಯನ್ನು ಕೋರಿದೆ.

ಪಿಎಸಿ ತನ್ನ ಮುಂದಿನ ಸಭೆಯನ್ನು ಸೆಪ್ಟೆಂಬರ್ 10 ರಂದು ನಡೆಸಲಿದೆ. PAC ವಿಮಾನ ನಿಲ್ದಾಣಗಳಂತಹ ಸಾರ್ವಜನಿಕ ಮೂಲಸೌಕರ್ಯಗಳಲ್ಲಿ ವಿಧಿಸಲಾದ "ಶುಲ್ಕಗಳು, ಸುಂಕಗಳು, ಬಳಕೆದಾರ ಶುಲ್ಕ ಮುಂತಾದವುಗಳನ್ನು ಸಹ ಆಡಿಟ್ ಮಾಡಲಿದೆ. ಪ್ರಸ್ತುತ ಏಳು ಭಾರತೀಯ ವಿಮಾನ ನಿಲ್ದಾಣಗಳನ್ನು ಅದಾನಿ ಗ್ರೂಪ್ ನಿರ್ವಹಿಸುತ್ತಿದೆ. PAC ಸರ್ಕಾರದ ಆದಾಯ ಮತ್ತು ವೆಚ್ಚಗಳ ಲೆಕ್ಕಪರಿಶೋಧನೆಯ ಜವಾಬ್ದಾರಿಯನ್ನು ಹೊಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ ಸರ್ಕಾರ ವಿರುದ್ಧ ಪ್ರತಿಭಟನೆ: ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 116 ಕ್ಕೆ ಏರಿಕೆ

ಕೇಂದ್ರ ಬಜೆಟ್ 2026-27: ರಾಜ್ಯದ ಹಣಕಾಸು ಸಮತೋಲನ ಪುನಃಸ್ಥಾಪಿಸಲು ಹೆಚ್ಚಿನ ಅನುದಾನ ಒದಗಿಸಿ; ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ

Grok ಅಶ್ಲೀಲ ಕಂಟೆಂಟ್ ವಿವಾದ: ಕೇಂದ್ರ ಸರ್ಕಾರಕ್ಕೆ ಕೊನೆಗೂ ಮಣಿದ X, 600 ಖಾತೆಗಳ ಡಿಲೀಟ್!

ನೋಂದಣಿ ಇಲ್ಲದೆ 'stock tips': ‘Finfluencers’ಗಳ ಸುಮಾರು 1 ಲಕ್ಷ ವಿಡಿಯೋ ಡಿಲೀಟ್​ ಮಾಡಿದ SEBI

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ರಿಷಭ್ ಪಂತ್ ಔಟ್; ಭಾರತ ತಂಡ ಸೇರಿದ 24 ವರ್ಷದ ಆಟಗಾರ!

SCROLL FOR NEXT